ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2025 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ವಲಯದ ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಯ ಮುಕ್ತವಾಗಿ ಪರೀಕ್ಷೆ ಬರೆಯಲು ಆಯ್ದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಂದ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೇರ ಫೋನಿನ ಕಾರ್ಯಕ್ರಮವನ್ನು ವಿಜಯಪುರ ಗ್ರಾಮೀಣವಲಯದ ಬಿಇಓಕಛೇರಿಯಲ್ಲಿ ಏರ್ಪಡಿಸಿ ಮಕ್ಕಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಲು ಇರುವ ಎಲ್ಲ ಸಂದೇಹಗಳನ್ನು ನಿವಾರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಯಾವುದೇ ಕಾರಣಕ್ಕೂ ಮಕ್ಕಳು ಹಾಗೂ ಪಾಲಕರು ಪರೀಕ್ಷೆಯನ್ನು ಯಶಸ್ವಿಯಾಗಿ ಯಾವುದೇ ಚಿಂತೆಯನ್ನು ಮಾಡದೆ ಭಯಮುಕ್ತವಾಗಿ ಪರೀಕ್ಷೆ ಬರೆಯಲು ತಿಳಿಸಿದರು.
ಅಕ್ಷತಾ ವಾಡೆದ್ ಜಿಎಚ್ಎಸ್ ಸಿದ್ದಾಪುರಕ್ಕೆ
ಮೊದಲ ಕಾಲ್ ಮಾಡಿ ಪರೀಕ್ಷೆ ಭಯ ನಿವಾರಣೆ ಕುರಿತು ಪ್ರಶ್ನೆಯನ್ನು ಕೇಳಿದರು. ಪರೀಕ್ಷೆಯ ಬಗ್ಗೆ ಭಯಪಡಬೇಕಾಗಿಲ್ಲ ವೆಬ್ ಕಾಸ್ಟಿಂಗ್ ಇದೆ ಎನ್ನುವುದು ಮರೆತು ತಮ್ಮ ಪಾಡಿಗೆ ತಾವು ಪರೀಕ್ಷೆ ಬರೆಯಬೇಕು ಎಂದು ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರುಗಳಾದ ರವೀಂದ್ರ ಎಲ್ಲಡಗಿ, ಶಾಂತೇಶ ಅವಟಿ, ವಿ.ಆರ್. ಪುರೋಹಿತ, ಎಲ್. ಟಿ. ಮುಲ್ಲಾ, ಪರೀಕ್ಷೆ ನೋಡಲ್ ವಸಂತ್ ಚವ್ಹಾಣ ಹಾಗೂ ಶ್ರೀಶೈಲ ಜಿಗೇರಿ ಹಾಜರಿದ್ದರು.

