ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದಲ್ಲಿ ಶಿಕ್ಷಣ ರಂಗದ ಇಬ್ಬರೂ ಅಮೋಘ ರತ್ನಗಳು ನಮ್ಮಿಂದ ಕಳಚಿದ ಪ್ರಯುಕ್ತ ಶಿಕ್ಷಣ ಪ್ರೇಮಿಗಳು , ಶ್ರೀ ವಿಶ್ವೇಶ್ವರ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷರು ಹಿರಿಯರು ದಿ.ಅಪ್ಪಾಸಾಹೇಬ ಕಲ್ಲೂರ ಹಾಗೂ ಶ್ರೀ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಆಡಳಿತ ಮಂಡಳಿಯ ನಿರ್ದೇಶಕರು ದಿ. ಮನೋಹರ ಭಸ್ಮೆ ರವರಿಗೂ ಶ್ರೀ ವಿಶ್ವೇಶ್ವರ ಬಾಲ ಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು.
ಈ ವೇಳೆ ಸಮಿತಿಯ ಅಧ್ಯಕ್ಷ ಎಸ್.ಆಯ್.ಜೋಗೂರ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶಾಲೆಗೆ ಪ್ರಾರಂಭದಲ್ಲಿ ಅಪ್ಪಾಸಾಹೇಬ ಕಲ್ಲೂರ ಹಾಗೂ ಮನೋಹರ ಭಸ್ಮೆ ರವರ ಕೊಡುಗೆ ಅಪಾರವಾದದ್ದು. ಭಸ್ಮೆ ಅವರು ಸದಾಕಾಲವೂ ಶಾಲೆಯ ಅಭಿವೃದ್ಧಿ ಗಾಗಿ ಕೈ ಜೋಡಿಸಿ ಶಾಲೆಯ ಪ್ರಗತಿಗಾಗಿ ದೂರದೃಷ್ಟಿ ಹೊಂದಿದ್ದವರು. ಈರ್ವರೂ ನಮ್ಮಿಂದ ಅಗಲಿದ್ದೂ ಅಪಾರವಾದ ನಷ್ಟವನ್ನು ಉಂಟು ಮಾಡಿದೆ ಎಂದರು.
ಈ ವೇಳೆ ಆಡಳಿತ ಮಂಡಳಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಅಶೋಕ ವಾರದ, ಪ್ರಶಾಂತ ಬಡದಾಳ, ಅಲೋಕ ಬಡದಾಳ , ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ , ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ,ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ವೀಣಾ ಗುಡಿಮಠ, ಸರುಬಾಯಿ ಬಂಡಗರ, ಸುನೀತಾ ಗುಂಡದ ಮುಂತಾದವರು ಇದ್ದರು

