ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸ್ಥಳೀಯ ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದ ನಂತರ ಸರ್ವ ಸದಸ್ಯರ ಸಾಮಾನ್ಯ ಸಭೆಯು ಅಧ್ಯಕ್ಷ ಚನಮಲ್ಲಪ್ಪ ಶಿ ಗಿಡ್ಡಪ್ಪಗೋಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಥಮ ಬಾರಿಗೆ ಜರುಗಿತು.
ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೊಲ್ಹಾರ ಪಟ್ಟಣದ ಅಭಿವೃದ್ದಿ ವಿಷಯವಾಗಿ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಗಂಬೀರವಾದ ಏನೇನೂ ಚರ್ಚೆ ನಡೆಯದಿದ್ದರೂ ಔಪಚಾರಿಕವಾಗಿ ಕೆಲವು ವಿಷಯಗಳ ಕುರಿತು ಸದಸ್ಯರು ಸಭೆಯಲ್ಲಿ ಮಾತನಾಡಿದರು.
14 ನೇ ವಾರ್ಡಿನ ಸದಸ್ಯ ಬಾಬು ಭಜಂತ್ರಿ ಮಾತನಾಡಿ ನಾವುಗಳು ಜನರಿಂದ ಚುನಾಯಿತರಾಗಿ ಮೂರು ವರ್ಷಗತಿಸಿದರೂ ಅಧಿಕಾರ ಆಡಳಿತಾಧಿಕರಗಳ ಮೂಲಕ ನಡೆಯುವಂತಾಗಿರುವದರಿಂದ
ನಮಗೆ ಪೂರ್ಣಪ್ರಮಾಣದ ಅಧಿಕಾರ ಇರಲಿಲ್ಲ ಆದರೆ ಈಗ ಚುನಾಯಿತ ಸದಸ್ಯರ ಕೈಗೆ ಆಡಳಿತ ಬಂದಿರುವದರಿಂದ ಬಿಜೆಪಿ ಪಕ್ಷದಿಂದ ಆಯ್ಕೆಯಾದ ನಾವು ಮೂವರು ಸದಸ್ಯರು ಪಟ್ಟಣದ ಅಭಿವೃದ್ದಿಗಾಗಿ ಸಹಮತವಿದೆ ವಾರ್ಡಗಳ ಅನುದಾನ ಹಂಚಿಕೆಯಲ್ಲಿ ಅಧ್ಯಕ್ಷರು ತಾರತಮ್ಯ ಮಾಡದೆ ಸ್ವಾರ್ಥಬಿಟ್ಟು ನಿಸ್ವಾರ್ಥ ಸೇವೆ ಸಲ್ಲಿಸುವಂತಾಗಲಿ ಎಂದರು.
15/16 ವಾರ್ಡಿನ ಸದಸ್ಯರಾದ ದಸ್ತಗೀರ ಕಲಾದಗಿ ಮತ್ತು ತೌಸೀಪ್ ಗಿರಗಾಂವಿ ಮಾತನಾಡಿ ತಾಲೂಕು ಕಛೇರಿಯ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕಾಗಿ ಕಂದಾಯ ಇಲಾಖೆಯಿಂದ ಅನುಮತಿ ದೊರಕಿದ್ದು ಪಟ್ಟಣದಲ್ಲಿ ಸ್ಥಳ ನಿಯೋಜನೆ ಕುರಿತು ಇಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಬಹುದಾಗಿತ್ತು ಆದರೆ ಅಧ್ಯಕ್ಷರು ಮುಂದಿನ ಸಾಮಾನ್ಯ ಸಭೆಯಲ್ಲಿ ಪ್ರಜಾಸೌಧ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡೋಣ ಅದಕ್ಕೆ ಸಹಮತವಿದೆ ಪಟ್ಟಣದ ಬೆಳವಣೆಗಾಗಿ ನಮ್ಮದು ಸಹಕಾರವಿದೆ ಎಂದರು.
ಇದೇ ಸಂದರ್ಭದಲ್ಲಿ
ಅಧ್ಯಕ್ಷ ಉಪಾಧ್ಯಕ್ಷರನ್ನು ಮತ್ತು ಪಟ್ಟಣ ಪಂಚಾಯತಿಯ ಸರ್ವಸದಸ್ಯರನ್ನು ಪಂಚಾಯತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು. ತಹಶೀಲ್ದಾರ ಎಸ್.ಎಸ್. ನಾಯಕಲಮಠ, ಮುಖ್ಯಾಧಿಕಾರಿ ಉಮೇಶ ಚಲವಾದಿ ಉಪಾದ್ಯಕ್ಷೆ ರಾಜಮಾ ನಧಾಪ ಸದಸ್ಯರಾದ ಅಪ್ಪಶಿ ಮಟ್ಟಿಹಾಳ, ಶ್ರಿಶೈಲ ಮುಳವಾಡ, ಮಹಾಂತೇಶ ಗಿಡ್ಡಪ್ಪಗೋಳ, ಶಿವಪ್ಪ ವಾಲಿಕಾರ, ಶ್ರಿಶೈಲ ಅಥಣಿ ಲಕ್ಷ್ಮೀಂಬಾಯಿ ಹೆರಕಲ, ಲಕ್ಷ್ಮೀಂಬಾಯಿ ಜಿಡ್ಡಿಬಾಗಿಲ, ಆಶಾ ಬನಪ್ಪ ಬಾಲಗೊಂಡ ಅನೇಕರು ಉಪಸ್ಥಿತರಿದ್ದರು.

