ವಕ್ಫ್ ಆಸ್ತಿ ಸಂರಕ್ಷಣಾ ಸಮೀತಿ ವತಿಯಿಂದ ಹಮ್ಮಿಕೊಂಡ ೫ನೆಯ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ವಕ್ಫ್ ಜಿಲ್ಲಾಧಿಕಾರಿ ತಬ್ಸುಮ್ ಮೂಲಕ ಸಚಿವರಿಗೆ ಮನವಿ ಸಲ್ಲಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದಲ್ಲಿ ಇಸ್ಲಾಂ ಸಮುದಾಯದ ಸಲುವಾಗಿ ೧೯೩೯ರಲ್ಲಿ ಅಂಜುಮನ್ ಎ ಇಸ್ಲಾಂ ಕಮೀಟಿ ಜಮೀನನ್ನು ಖರೀದಿಸಿ ಆ ಜಮೀನ ಖಬರಸ್ಥಾನ ಸಲುವಾಗಿ ಉಪಯೋಗಿಸಲು ಮೀಸಲಿಟ್ಟಿದ್ದು, ಆ ಜಮೀನನ್ನು ಇದೀಗ ವಕ್ಫ್ನ ರಾಜ್ಯ ಮಾಜಿ ಅಧ್ಯಕ್ಷರು, ವಿಜಯಪುರ ಜಿಲ್ಲೆಯಿಂದ ರಾಜ್ಯ ವಕ್ಫ್ ಸಮೀತಿಗೆ ಆಯ್ಕೆಯಾದ ಸದಸ್ಯರು ಹಾಗೂ ವಿಜಯಪುರ ಜಿಲ್ಲಾ ವಕ್ಫ್ ಅಧಿಕಾರಿಗಳು ಸೇರಿಕೊಂಡು ಈ ಜಮೀನನ್ನು ವಾಣಿಜ್ಯ ಮಳಿಗೆಗಳು ಮಾಡಬೇಕೆಂಬ ದೊಡ್ಡ ಹುನ್ನಾರ ನಡೆಸಿದ್ದಾರೆ ಎಂದು ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಆರೋಪಿಸಿದರು.
ಸಿಂದಗಿ ಪಟ್ಟಣದ ವಕ್ಫ್ ಆಸ್ತಿ ಸಂರಕ್ಷಣಾ ಸಮೀತಿ ವತಿಯಿಂದ ಹಮ್ಮಿಕೊಂಡು ೫ನೆಯ ದಿನಕ್ಕೆ ಕಾಳಿಟ್ಟ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ವಕ್ಫ್ ಜಿಲ್ಲಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಅವರ ಮೂಲಕ ವಕ್ಫ್, ವಸತಿ, ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸುವ ಮೊದಲು ಅವರು ಮಾತನಾಡಿದರು.
ಸಿಂದಗಿ ಪಟ್ಟಣದಲ್ಲಿ ಇಸ್ಲಾಂ ಜನಸಂಖ್ಯೆ ೧೫-೨೦ ಸಾವಿರವಿದೆ. ದುರಂತ ಏನೆಂದರೆ ಸಿಂದಗಿ ಪಟ್ಟಣದ ಸರ್ವೇ ನಂ.೧೦೨೯ರಲ್ಲಿರುವ ೫ಎ ೧೯ಗುಂಟೆ ಮಾತ್ರ ಖಬರಸ್ಥಾನ ಜಮೀನು ಖಾಲಿಯಿದ್ದು, ಈ ಜಮೀನಿನ ಮೇಲೆ ಖದೀಮರು ಕಣ್ಣು ಹಾಕಿದ್ದಾರೆ. ಈ ೧೦೨೯ ಸರ್ವೆನಂಬರ್ಗೆ ಸಂಬಂದ ಇಲ್ಲದ ಒಂದು ಅನಧಿಕೃತ ಸಮೀತಿಯ ಸದಸ್ಯರಿಂದ ೩೮೦ ಅಂಗಡಿಗಳ ಒಂದು ನೀಲಿ ನಕ್ಷೆಯನ್ನು ತಯಾರಿಸಿ ಒಂದು ಅಂಗಡಿಗೆ ೧ ಲಕ್ಷ ರೂ.ಯಂತೆ ಮುಂಗಡ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಮುದಾಯದಲ್ಲಿ ಗುಲ್ಲೆದ್ದಿದೆ. ೩ಕೋಟಿ ೮೦ಲಕ್ಷ ರೂಪಾಯಿಗಳು ಕೃಡೀಕರಣ ಮಾಡುತ್ತಿರುವುದು ಸಮುದಾಯದ ಮುಗ್ದ ಜನರಿಗೆ ದಿಕ್ಕುತೋಚದಂತಾಗಿದೆ. ಇಲ್ಲಿ ಬೇರೆ ಯಾವುದೇ ರೀತಿಯ ಚಟವಟಿಕೆಗಳು ನಡೆಯಬಾರದು. ಒಂದು ವೇಳೆ ಈ ಜಮೀನಿನಲ್ಲಿ ವಾಣಿಜ್ಯ ಮಳಿಗೆಗಳು ನಿರ್ಮಿಸಿದರೇ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಜಮೀನು ಖಬರಸ್ಥಾನಗೆ ಮಾತ್ರ ಉಪಯೋಗಿಸಬೇಕು. ಅನಧಿಕೃತ ವಾಣಿಜ್ಯ ಮಳಿಗೆ ನಿರ್ಮಿಸಲು ನೀಲಿನಕ್ಷೆ ತಯಾರಿಸಿದವರ ಮೇಲೆ ಮತ್ತು ಅನಧಿಕೃತವಾಗಿ ಶೇಡ್ ನಿರ್ಮಾಣ ಮಾಡುವವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಬೇಕು. ವಕ್ಫ್ ಆಸ್ತಿ ಕ್ರಮ ಸಂಖ್ಯೆ ೯೬ರ ಸರ್ವೇ ನಂ.೮೩೪ಗೆ ಸಂಬಂದಿಸಿ ಸಮೀತಿಯನ್ನು ರದ್ದು ಮಾಡಬೇಕು. ಹಾಗೇ ಆ ಸಮಿತಿ ರಚಿಸಲು ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ವಕ್ಫ್ ಜಿಲ್ಲಾಧಿಕಾರಿ ತಬ್ಸುಮ್ ಹಾಗೂ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ವಕ್ಫ್, ವಸತಿ, ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಗೆ ಮನವಿ ವಕ್ಫ್ ಆಸ್ತಿ ಸಂರಕ್ಷಣಾ ಸಮೀತಿ ಸಲ್ಲಿಸಿತು.
ಈ ಹೋರಾಟದಲ್ಲಿ ಅಹಿಂದ್ ಸಂಘಟನೆ ಮುಖಂಡ ಶಿವಾಜಿ ಮೇಟಗಾರ, ದಸಂಸ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ್, ಯಾಕೂಬ್ ನಾಟೀಕಾರ, ಇರ್ಫಾನ್ ಶೇಖ, ಮಹಿಬೂಬ ಸಿಂದಗಿಕರ ವಕ್ಫ್ ಇಲಾಖೆಯ ಅವ್ಯವಸ್ಥೆ ಬಗ್ಗೆ ಮಾತನಾಡಿದರು.
ಇದೇ ಸಂಧರ್ಭದಲ್ಲಿ ರಹೀಮ್ ದುದ್ದನಿ, ಲತೀಫ್ ಇನಾಮದಾರ್, ರಜಾಕ್ ನಾಟೀಕಾರ, ಬಸೀರ ಮರ್ತೂರ್, ಬಬಲು ಗುಂದಗಿ, ಅಲ್ತಾಫ್, ಎಂ.ಎ.ಖತೀಬ, ತಾಲಿಬ್ ಗುಂದಗಿ, ಫಿರೋಜ್ ನಿಂಬರಗಿ, ರಜಾಕ್ ಮುಲ್ಲಾ, ರಜಾಕ್ ಸಿಂದಗಿಕರ, ಸೈಪನ್ ನಾಟೀಕಾರ, ಮೋಷನ್ ಬೀಳಗಿ ಸೇರಿದಂತೆ ಮಾಜಿ ಸೈನಿಕರು, ಎಂಎಂಡಿಸಿ ಸಂಘಟನೆಯ ಮುಖಂಡರು ಇದ್ದರು.

