ನಿಡಗುಂದಿಯ ಬನಶಂಕರಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಕಲರವ | ಹಳ್ಳಿಯ ಸಂತೆ ವಾತಾವರಣ ಸೃಷ್ಟಿಸಿದ ವಿದ್ಯಾರ್ಥಿಗಳು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ನಿಡಗುಂದಿಯಲ್ಲಿರುವ ಬನಶಂಕರಿ ಪಬ್ಲಿಕ್ ಸ್ಕೂಲ್ ಮತ್ತು ಪಿ ಯು ಕಾಲೇಜ್, ನೆಸ್ಟ್ (Nest) ಆಕಾಡೆಮಿ ಹೈದರಾಬಾದ ಸಹಯೋಗದೊಂದಿಗೆ ಮಕ್ಕಳ ಸಂತೆ ವಿನೂತನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತರಕಾರಿ ಮಾರ್ಕೆಟ್ ಹೂವಿನ ಅಂಗಡಿ, ಜ್ಯೂಸು, ಮಿಟಾಯಿ ಪಾಪಡಿ, ತರಕಾರಿ ಅಂಗಡಿ , ಹಣ್ಣಿನ ಅಂಗಡಿ, Food counters ರೈಸ್, ಬಜಿ ವಡಾ ಪಾವ್, ತಾಜಾ ತಾಜಾ ತರಕಾರಿಗಳನ್ನು ಇಟ್ಟಿದ್ದು ವಿಶೇಷವಾಗಿತ್ತು.
ಅದರಲ್ಲೂ ವಿದ್ಯಾರ್ಥಿಗಳು ತರಕಾರಿ ವಸ್ತುಗಳನ್ನ ಇಳಕಲ್ ಸೀರೆಯನ್ನು ಧರಿಸಿದ ವಿದ್ಯಾರ್ಥಿನಿಯರು ನೋಡುವವರಿಗೆ ಹಳ್ಳಿಯ ಸಂತೆಯ ವಾತಾವರಣವನ್ನು ಸೃಷ್ಟಿಸಿದ್ದರು.
ಕೆಲ ವಿದ್ಯಾರ್ಥಿಗಳು ಮನೆಯಿಂದ ತಿನುಸುಗಳನ್ನು ತಂದು ಮಾರಾಟ ಮಾಡಿದರೆ, ಕೆಲ ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಗ್ಯಾಸ್ ಗಳನ್ನು ತಂದು ವಿದ್ಯಾರ್ಥಿಗಳೇ ಬಜಿಯನ್ನ ಮಾಡಿದ್ದು ಎಲ್ಲ ಪಾಲಕರ ಗಮನ ಸೆಳೆಯಿತು.
ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎನ್ ಎಸ್ ಪಾಟೀಲ್, ಮಕ್ಕಳಿಗೆ ವ್ಯವಹಾರಿಕವಾದ ಜ್ಞಾನ ಬೆಳೆಯಲು ಸಹಾಯಕವಾಗಿದೆ, ಈ ಕಾರ್ಯಕ್ರಮ, ಸುಮಾರು 15 ದಿನಗಳ ಕಾಲ ನಿರಂತರ ಪ್ರಯತ್ನದಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ತರಕಾರಿಯ ವೇಷಭೂಷಣವನ್ನು ಧರಿಸುವುದರ ಜೊತೆಗೆ, ಸಂತೆಯ ಹೆಸರು ನಡೆಯುವ ಎಲ್ಲಾ ಚಟುವಟಿಕೆ ಪಾಲಕರ ಮುಂದೆ ತೋರಿಸುವಂತಹ ಪ್ರಯತ್ನ, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಯುವಂತೆ ಮಾಡಲು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ನೆಸ್ಟ್ ಅಕಾಡೆಮಿ ಹೈದರಾಬಾದ್ ಸಂಸ್ಥಾಪಕರಾದ ಜೆ ಸಿ ನಾಗರಾಜ್ ಮಾತನಾಡಿ, ನನಗೆ ತುಂಬಾ ಖುಷಿ ಅನಿಸುತ್ತೆ ವಿಧವಿಧವಾದ ಬಣ್ಣ ಬಣ್ಣಗಳಿಂದ ಅಲಂಕೃತಗೊಂಡ ವಿದ್ಯಾರ್ಥಿಗಳನ್ನು ನೋಡಿ ತುಂಬಾನೇ ಸಂತೋಷವಾಯಿತು, ಅದರಲ್ಲೂ ವಿಶೇಷವಾಗಿ ಚುಟುಕು ನಾಟಕ ಹಳ್ಳಿ ಮನೆ ಮತ್ತು ಪ್ಯಾಟಿ ಮನೆಯ ವ್ಯತ್ಯಾಸವನ್ನು ನಾಟಕದ ಮೂಲಕ ಪ್ರದರ್ಶಿಸಿದ್ದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಹಾಗೆ ಮುಂದಿನ ದಿನದಲ್ಲಿ ನೆಸ್ಟ್ ಅಕಾಡೆಮಿ ಹೈದರಾಬಾದ್ ಸಹಯೋಗದೊಂದಿಗೆ ಬನಶಂಕರಿ ಪಬ್ಲಿಕ್ ಸ್ಕೂಲಿನಲ್ಲಿ ನಾವು ಕೂಡಾ ಕುಟುಂಬದ ಸದಸ್ಯರಾಗಿರುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಬ್ರಹ್ಮಕುಮಾರಿ ರಾಜಯೋಗಣಿ ರೇಣುಕಾ ಅಕ್ಕನವರು ಮಗುವಿನ ಸರ್ವಾಂಗೀಣ ಬೆಳವಣಿಗೆ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ, ಅಷ್ಟೇ ಅಲ್ಲದೆ ಪಾಲಕರ ಪಾತ್ರವೂ ಕೂಡ.
ವ್ಯವಹಾರಿಕವಾಗಿ ಜ್ಞಾನ ಪಡೆಯಬೇಕಾದರೆ ಮಕ್ಕಳ ಸಂತೆ ಎಂಬ ಕಾರ್ಯಕ್ರಮವನ್ನು ಮಾಡಿದ್ದು ನಮ್ಮ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ವಿಶಿಷ್ಟ ಹಾಗೂ ವಿಶೇಷವಾದ ಕಾರ್ಯಕ್ರಮ ಎಂದು ಹೇಳಿದರು.
ಮಕ್ಕಳ ಸಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸತೀಶ್ ಗೌಡ ಎಸ್ ಪಾಟೀಲ್ ಮಾತನಾಡಿ, ನಾವು ಇದೇ ಮೊದಲ ಮಕ್ಕಳ ಸಂತೆಯ ಕಾರ್ಯಕ್ರಮವನ್ನು ಮಾಡಿರುವುದು ಸಂತಸದ ವಿಷಯ, ಈ ಕಾರ್ಯಕ್ರಮಕ್ಕೆ ಎಲ್ಲ ಪಾಲಕರು ತಮ್ಮ ತಮ್ಮ ಮಕ್ಕಳನ್ನ ಬಹಳ ಅಚ್ಚುಕಟ್ಟಾಗಿ ತಮಗೆ ವಹಿಸಿಕೊಟ್ಟಂತಹ ಕೆಲಸ ಕಾರ್ಯಗಳನ್ನು ಮಾಡಿದ್ದೀರಿ. ಅದರಲ್ಲೂ ಮುಖ್ಯವಾಗಿ ತರಕಾರಿಗಳ ಹಾಗೆ ಮಕ್ಕಳನ್ನು ಸಿದ್ಧಪಡಿಸಿಕೊಂಡು ಬಂದಂತಹ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಬೆಂಡೆಕಾಯಿ, ಗಜ್ಜರಿ, ಸವತೆ ಕಾಯಿ, ದ್ರಾಕ್ಷಿ ಹಣ್ಣು, ಮಾವಿನ ಹಣ್ಣು, ವಿವಿಧ ತರಕಾರಿ ಹಣ್ಣು ಹಂಪಲು ಗಳಿಂದ ವಿದ್ಯಾರ್ಥಿಗಳ ವೇಷಭೂಷ ನೋಡಿ ಮನಸ್ಸಿಗೆ ಆನಂದವೆನಿಸುತ್ತದೆ, ಹೀಗೆ ಪಾಲಕರ ಸಹಕಾರ ಪ್ರೋತ್ಸಾಹ ನಮ್ಮೊಂದಿಗಿರಲಿ ಹೀಗೆ ಇರಲಿ ಎಂದು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀಯುತ ವಿಜಯ ಗಗನ್ ಧರ್ಮರ, ಶ್ರೀ ಮಾತಾ ಕಲ್ಯಾಣ ತಾಯಿ ಧರ್ಮ ಮಠದ ಧರ್ಮಾಧಿಕಾರಿಗಳು ಮಕ್ಕಳನ್ನ ಪಾಲಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.


