ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಭೂತನಾಳ ತಾಂಡಾದಲ್ಲಿ ಜನಿಸಿದ ಅಶೋಕ ಸೋಮುಲು ವಾಲೀಕಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2023-2024ನೇ ಸಾಲೀನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಶೋಕ ವಾಲೀಕಾರ ಅವರು ತಮ್ಮ 12 ನೇ ವಯಸ್ಸಿನಿಂದ ಹಲಿಗೆ ಬಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. ತಂದೆಯಿಂದ ಹಲಿಗೆ ಬಾರಿಸುವುದನ್ನು ಕಲಿತು, ಮಹಾರಾಷ್ಟ್ರ, ಕೆರಳ ಹಲವು ರಾಜ್ಯಗಳಲ್ಲಿ ವೈವಿದ್ಯಮಯವಾಗಿ ಹಲಿಗೆ ಬಾರಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು, ಜನನ, ಮರಣ, ಮದುವೆ ಸಮಾರಂಭಗಳಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅತ್ತ್ಯುತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಮತ್ತು ಮೈಸೂರು ದಸಾರ ಹಬ್ಬ ದಲ್ಲಿಯೂ ಕೂಡ ಪ್ರದರ್ಶನ ನೀಡಿದ್ದಾರೆ.
ಇವರ ಕಲೆಯನ್ನು ಗುರುತಿಸಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2023-2024ನೇ ಸಾಲೀನ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

