ವಿಜಯಪುರ: ಪ್ರತಿಯೊಬ್ಬ ಮನುಷ್ಯನಿಗೆ ಬೇಕಾಗಿರುವುದು ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯ. ಅದನ್ನು ನಮ್ಮ ತಂದೆಯವರು ಕಲ್ಪಿಸಿದ್ದಾರೆ. ಅದಕ್ಕಾಗಿ ಜನ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ನಿಶ್ಚಿತವಾಗಿ 20 ಮತಗಳ ಅಂತರದಿಂದ ಗೆಲ್ಲಲಿದ್ದೇವೆ ಎಂದು ಯುವ ನಾಯಕ ರಾಮನಗೌಡ ಪಾಟೀಲ ಹೇಳಿದರು.
ನಗರ ಮತಕ್ಷೇತ್ರದ ವ್ಯಾಪ್ತಿಯ ವಾರ್ಡ ನಂ.2 ರ ದರ್ಗಾ ಹಾಗೂ ವಾರ್ಡ್ ನಂ.24 ರ ಶಿಖಾರಕಾನೆಯ ಗೊಲ್ಲರ ಓಣಿ, ಗಣಪತಿ ಗುಡಿ, ವೆಂಕಟರಮಣ ಗುಡಿ ಹತ್ತಿರ ಸಭೆ ಹಾಗೂ ಮತಯಾಚನೆ ಮಾಡಿ ಅವರು ಮಾತನಾಡಿದರು.
ವಿರೋಧಿಗಳೆಲ್ಲ ಒಂದಾಗಿ ಸೋಲಿಸಬೇಕೆಂಬ ಕನಸಿಗೆ ನಮ್ಮವರು ಅವಕಾಶ ಕೊಡುವುದಿಲ್ಲ. ಇದರಿಂದ ನಗರದಲ್ಲಿ ನೆಮ್ಮದಿ ಜೊತೆಗೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ. ಔದ್ಯೋಗಿಕ ನಗರವಾಗುವ ನಿಟ್ಟಿನಲ್ಲಿ ತಂದೆಯ ಕೆಲಸ ಮಾಡುತ್ತಾರೆ. ಆಗ ನಮ್ಮ ಯುವಕರು ದೂರದ ಊರಿಗೆ ಹೋಗಿ ದುಡಿಯುವ ತೊಂದರೆ ತಪ್ಪಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿರಿಯ ನಾಗರಿಕರು, ಮಹಿಳೆಯರು ಭಾಗವಹಿಸಿದ್ದರು.