ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿ ಶಕೀಲ್ ಬಾಗಮಾರೆ ರವರು ಜಿಲ್ಲಾಧ್ಯಕ್ಷರಾಗಿ ಶಕೀಲ್ ಬಾಗಮಾರೆ ರವರು ಪದಗ್ರಹಣ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಲೋಣಿ ರವರು ಕಾಂಗ್ರೆಸ್ ಧ್ವಜ ನೀಡಿದರು.
ಈ ವೇಳೆ ಕೆ.ಪಿ.ಸಿ.ಸಿ. ಸದಸ್ಯರಾದ ಅಬ್ದುಲ್ ಹಮೀದ ಮುಶ್ರೀಫ ಮಾತನಾಡಿ, ಕಾಂಗ್ರೆಸ್ ಪಕ್ಷ ಜನಪರ ಚಿಂತನೆಯ ಪಕ್ಷವಾಗಿದ್ದು. ಪಕ್ಷ ಸಂಘಟನೆ ಒಂದು ಸರಳ ಕೆಲಸವಲ್ಲ ಅದು ಒಂದು ಜವಾಬ್ದಾರಿಯ ಕೆಲಸ. ಈ ಜವಾಬ್ದಾರಿಯನ್ನು ನೂತನ ಅಧ್ಯಕ್ಷರು ಯುವಕರಾಗಿದ್ದು ಸಮರ್ಥವಾಗಿ ನಿಭಾಯಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಲೋಣಿ ರವರು ಮಾತನಾಡಿ, ಶಕೀಲ ಬಾಗಮಾರೆವರು ಯುವಕರಾಗಿದ್ದು, ಪತ್ರಕರ್ತರಾಗಿದ್ದು ವಿಶೇಷವಾಗಿದೆ. ಇವರ ಮೇಲೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಜವಾಬ್ದಾರಿಯನ್ನು ನೀಡಿ ಪಕ್ಷ ಸಂಘಟಣೆ ಮಾಡಲು ಅವಕಾಶ ನೀಡಿದೆ. ಇದನ್ನು ಜಿಲ್ಲೆಯ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಎಲ್ಲ ಕಾಂಗ್ರೆಸ್ ನಾಯಕರ ವಿಶ್ವಾಸವನ್ನು ಗಳಿಸುತ್ತಾ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಂಘಟಣೆ ಮಾಡಬೇಕೆಂದು ಸಲಹೆ ನೀಡಿ ಮುಂದೆ ಬರುವ ತಾಲೂಕ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಸಂಘಟಣೆಯೊಂದಿಗೆ ಇನ್ನುಳಿದ ಹಿಂದುಳಿದ ಹಾಗೂ ಎಲ್ಲ ಸಮಾಜದ ನಾಯಕರ ಜೊತೆ ಕೂಡಿ ಪಕ್ಷ ಸಂಘಟಣೆ ಮಾಡಬೇಕೆಂದು ಹೇಳಿ ಸಂಘಟಣಾ ಪ್ರಯತ್ನಕ್ಕೆ ಪರಮಾತ್ಮನ್ನು ಸಫಲ ನೀಡಲಿ ಎಂದು ಪ್ರಾರ್ಥಿಸಿದರು.
ಕೆ.ಪಿ.ಸಿ.ಸಿ. ಉಪಾಧ್ಕಕ್ಷರಾದ ಉಸ್ಮಾನ್ ಪಟೇಲ್ ಕೊಲ್ಹಾರ, ಎಂ. ಸಿ. ಮುಲ್ಲಾ, ನಗರ ಬ್ಲಾಕ್ ಅಧ್ಯಕ್ಷರಾದ ಜಮೀರ ಬಕ್ಷಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ಅಫ್ಜಲ ಜಾನವೇಕರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಝಾಕೀರಹುಸೇನ ಮುಲ್ಲಾ, ಎಂ. ಎಂ. ಮುಲ್ಲಾ, ದೇಸು ಚವ್ಹಾಣ, ವಸಂತ ಹೊನಮೋಡೆ, ದಿನೇಶ ಹಳ್ಳಿ, ಆಫ್ತಾಬಕಾದ್ರಿ ಇನಾಮದಾರ, ಇಲಿಯಾಸ್ ಸಿದ್ದೀಕಿ, ತಾಜುದ್ದೀನ ಖಲೀಫಾ, ಸುರೇಶ ಬಿಜಾಪೂರ, ಸದ್ದಾಂ ನಾಡೇವಾಲೆ, ಅಪ್ಪು ಪೂಜಾರಿ, ಝಾಕೀರ ಬಾಗವಾನ, ಮೈನುದ್ದೀನ ಬೀಳಗಿ, ಇದ್ರುಸ್ ಬಕ್ಷಿ, ಪೀರಾ ಜಮಖಂಡಿ, ಕುಲದೀಪಸಿಂಗ, ಗಂಗವ್ವ ಕಣಬಿಚನಾಳ, ಮಹಾದೇವಿ ಗೋಕಾಕ, ಕಾಶಿಬಾಯಿ ಹದಪದ, ಜಬ್ಬಾರ ಮುಲ್ಲಾ, ಕಲ್ಲಪ್ಪ ತಳವಾರ, ಅಬುಬಕರ ಕಂಬಾಗಿ, ಎಂ. ಎಸ್. ಮಣೂರ, ಫಿರೋಜ ಶೇಖ, ಮುನ್ನಾ ಬಕ್ಷಿ, ಬಿ.ಎಂ. ಮಕ್ತೇದಾರ, ಬಂದೇನವಾಜ ಜಮಾದಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

