Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜಿಲ್ಲೆಗೆ ನೀರು ಒದಗಿಸಲು ಅವಿರತ ಶ್ರಮ :ಎಂ.ಬಿ.ಪಾಟೀಲ
(ರಾಜ್ಯ ) ಜಿಲ್ಲೆ

ಜಿಲ್ಲೆಗೆ ನೀರು ಒದಗಿಸಲು ಅವಿರತ ಶ್ರಮ :ಎಂ.ಬಿ.ಪಾಟೀಲ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಶ್ರೀ ಅಮೋಘಸಿದ್ಧ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬಯಸಿದ ಸುಂದರ ನಾಡು ನಮ್ಮದಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸಿಬೇಕು ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ತಿಕೋಟಾ ತಾಲೂಕಿನ ಅರಕೇರಿ ಮತ್ತು ಬರಟಗಿಯಲ್ಲಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು.

ನಾಡು ಸಮೃದ್ಧವಾಗಿರಬೇಕಾದರೆ ನೀರಿನ ಸೌಲಭ್ಯ ಇರಬೇಕು. ನಮ್ಮ ಪರಿಸರ ಸುಂದರವಾಗಿರಬೇಕು. ಭೂಮಿ ಸಮೃದ್ಧವಾಗಿರಬೇಕು. ಜನ ಸುಖ ಮತ್ತು ಸಂತೋಷದಿಂದ ಬಾಳಬೇಕು. ಮಕ್ಕಳು ವಿದ್ಯಾವಂತರಾಗಿ ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳಾಗಬೇಕು. ಉದ್ಯಮಿಗಳಾಗಬೇಕು. ಸುಸಂಸ್ಕøತರಾಗಿ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಒದಗಿಸಲು ನಾನು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವನಾಗಿದ್ದಾಗ ಸನ್ಮಾನ ಕಾರ್ಯಕ್ರಮಗಳಿಂದ ದೂರವಿದ್ದೆ. ಈ ಭಾಗಕ್ಕೆ ನೀರು ಕೊಡಲು ಹಗಲಿರುಳು ಕೆಲಸ ಮಾಡಿದ್ದೇನೆ. ಹೀಗಾಗಿ ಜನರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ, ಇದೇ ಜನರ ಬಾಳು ಹಸನಾಗಿಸಲು ಮಾಡಿದ ಅಹೋರಾತ್ರಿ ಕೆಲಸ ಫಲ ನೀಡುತ್ತಿದೆ. ನೀರು ಕೊಟ್ಟವರಿಗೆ ತಾವೆಲ್ಲರೂ ಆಶೀರ್ವಾದ ಬಾರಿ ಅಂತರದಿಂದ ಆಯ್ಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೀರಪಟೇಲ ಪಾಟೀಲ, ಅರ್ಜುನ ರಾಠೋಡ, ಸಿದ್ದಣ್ಣ ಸಕ್ರಿ, ಅಶೋಕ ದಳವಾಯಿ, ಎನ್.ಎಸ್.ಬೆಳ್ಳುಬ್ಬಿ, ಕಾಂತಾ ನಾಯಕ, ಶಿವಾನಂದ ಇಂಚಗೇರಿ, ಚನ್ನಪ್ಪ ದಳವಾಯಿ, ಸುರೇಶ ಭಂಡಾರಿ, ಹುಸೇನ ಮನಗೂಳಿ, ಸೋಮನಿಂಗ ಕಟಾವಿ, ಸಿದ್ದಪ್ಪ ಚಡಚಣ, ವಿಜಯ ಕಾಂಬಳೆ, ಬಾಜಿರಾಯ ಕರೆ, ಬಿ.ಜಿ.ಪಾಟೀಲ, ಗುರುಪಾದಗೌಡ ದಾಶ್ಯಾಳ, ಮಲ್ಲನಗೌಡ ಪಾಟೀಲ, ಕಾಂತು ನಾಯಕ, ಸತೀಶ ನಾಯಕ, ರಾಜು ರಾಠೋಡ, ಗೋವಿಂದ ಸಿಂಧೆ, ದತ್ತಾ ಕಾಟಕರ, ಸಜ್ಜನ ಸಾಹುಕಾರ, ಪದ್ದು ಚವ್ಹಾಣ, ಕಾಸು ಚವ್ಹಾಣ, ನೀಲು ನಾಯಕ, ದಯಾನಂದ ಜೋರಾಪುರ ಮುಂತಾದವರು ಉಪಸ್ಥಿತರಿದ್ದರು.

ಮಾನೇನದೊಡ್ಡಿ ರೈತನ ಮನದಾಳದ ಮಾತು

ಎಂ. ಬಿ. ಪಾಟೀಲರ ಎದುರು ಮನದಾಳದ ಅನುಭವ ಹಂಚಿಕೊಂಡ ಮಾನೇನದೊಡ್ಡಿ ರೈತ ವಸಂತ ಭೀರಪ್ಪ ಮಾನೆ, ಈ ಮುಂಚೆ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಜಡೆ ಎಳೆದಾಡಿಕೊಂಡು ಜಗಳವಾಡುತ್ತಿದ್ದರು. ನೀರಿಲ್ಲದ ಕಾರಣ ನಾವು ಕುರಿಗಳನ್ನು ತೆಗೆದುಕೊಂಡು ಗುಲಬರ್ಗಾ ಮತ್ತು ಸೋಲಾಪುರ ಕಡೆ ವರ್ಷವಿಡಿ ಗುಳೆ ಹೋಗುತ್ತಿದ್ದೇವು. ಮನೆಯಲ್ಲಿನ ಆಗು- ಹೋಗುಗಳ ಬಗ್ಗೆ ಕಿಂಚಿತ್ತು ಮಾಹಿತಿ ಇರುತ್ತಿರಲಿಲ್ಲ. ಈಗ ನಮ್ಮ ಕುಟುಂಬದ 16 ಎಕರೆ ಜಮೀನಿಗೆ ಎಂ. ಬಿ. ಪಾಟೀಲರ ಕೃಪೆಯಿಂದ ನೀರು ಬಂದಿದೆ. 900 ಟನ್ ಕಬ್ಬು ಬೆಳೆದಿದ್ದೇವೆ. ಹೊಸದಾಗಿ ಎರಡು ಎಕರೆ ಜಮೀನು ಖರೀದಿಸಿದ್ದೇವೆ. ನಮ್ಮ ಮಕ್ಕಳು ಈಗ ಶಾಲೆಯ ಕಡೆ ಮುಖ ಮಾಡಿದ್ದಾರೆ. ದೈವ ಸ್ವರೂಪಿ ಎಂ. ಬಿ. ಪಾಟೀಲರಿಗಾಗಿ ನಾವು ಬದುಕಿರುವವರೆಗೂ ಮತ ಹಾಕುತ್ತೇವೆ ಎಂದು ಹೇಳಿದರು.

BIJAPUR NEWS congress m b patil udaya rashmi
Share. Facebook Twitter Pinterest Email Telegram WhatsApp
  • Website

Related Posts

ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!

ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ

ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ

ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಕಲಿ ಕ್ರಿಮಿನಾಶಕ ಔಷಧಿ ಉತ್ಪಾದಿಸುತ್ತಿದ್ದ ಈರ್ವರ ಬಂಧನ!
    In (ರಾಜ್ಯ ) ಜಿಲ್ಲೆ
  • ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ :ಬಿಜೆಪಿ ಮನವಿ
    In (ರಾಜ್ಯ ) ಜಿಲ್ಲೆ
  • ಸೆ.೧೪ ರಂದು ವಾರ್ಷಿಕ ಸರ್ವ ಸಾಧಾರಣ ಸಭೆ
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟ: ಬಾಲಭಾರತಿ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ ಭೂಸನೂರ
    In (ರಾಜ್ಯ ) ಜಿಲ್ಲೆ
  • ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ ಪ್ರಶಿಕ್ಷಣಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ರೈತರ ಬೇಡಿಕೆಯಂತೆ ಪರಿಹಾರ ದರ ನಿಗದಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಭೀಮಾ ನದಿಯಲ್ಲಿ ಮತ್ತೆ ಹೆಚ್ಚಾದ ಒಳ ಹರಿವು
    In (ರಾಜ್ಯ ) ಜಿಲ್ಲೆ
  • ಹಳ್ಳ ದಾಟಲು ಹರಸಾಹಸ ಪಟ್ಟ ಶಿಕ್ಷಕರು!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.