Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 10, 2026

ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರ ಬೋಧನೆ ಆಲಿಸಿ :ಐನಾಪೂರ

ಮಕ್ಕಳಿಗೆ ನೊಟ್ ಬುಕ್ ಹಂಚಿ ಜನ್ಮ ದಿನ ಆಚರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಂಗಭೂಮಿ ವಿಷಯ ಪಠ್ಯಕ್ಕೆ ಸೇರಿಸಲು ನಾವು ವಿಫಲರು :ಬಿ.ಜಯಶ್ರೀ
(ರಾಜ್ಯ ) ಜಿಲ್ಲೆ

ರಂಗಭೂಮಿ ವಿಷಯ ಪಠ್ಯಕ್ಕೆ ಸೇರಿಸಲು ನಾವು ವಿಫಲರು :ಬಿ.ಜಯಶ್ರೀ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ನಗರದಲ್ಲಿ ಶರಣು ಸಬರದ ಅವರ ಜಿಲ್ಲಾ ಯುವ ಪರಿಷತ್, ಪ್ರೀತಿ ಪತ್ತಾರ, ಮೋಹನ ಕಟ್ಟಿಮನಿಯವರ ಮನು ಸಾಮಾಜಿಕ ಜನಜಾಗೃತಿ ವಿವಿಧೋದ್ದೇಶ ಸoಸ್ಥೆ, ಧಿಷಾ ಭೀಸೆ ಯವರ ಸ್ವಯಂಭು ಆರ್ಟ್ ಫೌಂಡೇಶನ್ ಸಹಯೋಗದಲ್ಲಿ, ಮಲ್ಲಮ್ಮಾ ಯಾಳವಾರವರ ಅಧ್ಯಕ್ಷತೆಯಲ್ಲಿ ನಾಡಿನ ಖ್ಯಾತ ರಂಗಕರ್ಮಿ, ಚಿತ್ರನಟಿ, ಹಿನ್ನೆಲೆಗಾಯಕಿ ಬಿ. ಜಯಶ್ರೀ ಅವರೊಂದಿಗೆ ಜಿಲ್ಲೆಯ ವಿವಿಧ ಕಲಾವಿದರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ. ಜಯಶ್ರೀ, ಬಿ. ವಿ ಕಾರಂತರು ಇದ್ದಾಗಿನಿಂದ ಇಲ್ಲಿಯವರೆಗೆ, ರಂಗಭೂಮಿಯ ವಿಷಯವನ್ನು ಪಠ್ಯಕ್ರಮಕ್ಕೆ ಸೇರಿಸಬೇಕೆನ್ನುವ ನಮ್ಮ ಮೂವತ್ತು ವರ್ಷದ ಪ್ರಯತ್ನ ಇಂದಿಗೂ ಫಲಕಾರಿಯಾಗಲಿಲ್ಲ. ಹೀಗಾಗಿ ಇಂದಿನ ಯುವಜನತೆ ರಂಗಕಲೆಯಲ್ಲಿ ಸಂಪೂರ್ಣ ಆಸಕ್ತಿ ತೋರದಿರುವದಕ್ಕೆ ಸಾಕ್ಷಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಸಂವಾದದಲ್ಲಿ ಭಾಗವಹಿಸಿದ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಗಿರಿಮಲ್ಲಪ್ಪಾ ಭಜಂತ್ರಿ, ಮುದ್ದೇಬಿಹಾಳ ತಾಲ್ಲೂಕಿನ ಗಂಗೂರ ಗ್ರಾಮದ ಏಕತಾರಿ ಕಲಾವಿದ ಮೌನಯ್ಯ. ದಾಸರ, ಚೌಡಕಿ ಹಾಡಿನ ಕಲಾವಿದರಾದ ಸಿದ್ದು ಗು. ಅಲಗೊಂಡ ಮನಗೂಳಿ, ಪಾರಿಜಾತ ಕಲಾವಿದರು ಮತ್ತು ಬಯಲಾಟ ಅಕಾಡೆಮಿಯ ಸದಸ್ಯೆ ಅನಸೂಯಾ ವಡ್ಡರ ಹಾಗೂ ಸಂಗಡಿಗರು, ಮಲ್ಲಮ್ಮನ ಆಟದ ಕಲಾವಿದರಾದ ಶ್ರೀಶೈಲ. ಈ ಗಣ್ಣಿ, ಮಾಳನೂರಿನ ರಂಗಭೂಮಿ ಮತ್ತು ಜಾನಪದ ಕಲಾವಿದ ದಂಪತಿಗಳಾದ ಶಿವಾಜಿ ರಾಮಯ್ಯ ಮತ್ತು ದೇವಕ್ಕಿ ದೊಡಮನಿ, ಡೊಳ್ಳಿನ ಗಾ ಯಾನದ ಕಲಾವಿದರಾದ ಲಕ್ಷ್ಮೀ. ಕನ್ನಳ, ಬುಡಬುಡಕಿ ಕಲಾವಿದರಾದ ರಾಮಚಂದ್ರಾ ಗೊಂದಳಿ ನಾಲಾವತ್ತವಾಡ ಹೀಗೆ ಇನ್ನು ಅನೇಕ ಕಲಾವಿದರ ಕಲೆಯ ಪ್ರಸ್ತುತಿಯನ್ನು ಆಲಿಸಿದ ಬಿ. ಜಯಶ್ರೀಯವರು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು.
ನಂತರ ಸಂವಾದ ಕಾರ್ಯಕ್ರಮದಲ್ಲಿ ನಮ್ಮ ಉತ್ತರ ಕರ್ನಾಟಕದ ಪಾರಿಜಾತ ಕಲೆ ಬೆಂಗಳೂರಲ್ಲಿ ಪ್ರದರ್ಶನವಾಗಬೇಕು ಮತ್ತು ಯುವಜನತೆಗೆ ರಂಗಕಲೆ ಪ್ರೋತ್ಸಾಹ ಏಕೆ ದೊರೆಯುತ್ತಿಲ್ಲ ಎಂಬ ಕಲಾವಿದರ ಪ್ರಶ್ನೆಗೆ ಬಿ. ಜಯಶ್ರೀಯವರು ಕಲಾವಿದ ಕಲೆಗೆ ಜೀವತುಂಬಿ ಪರಿಣಾಮಕಾರಿ ಅಭಿನಯದಿಂದ ಪ್ರೇಕ್ಷಕನಿಗೆ ಅರ್ಥವಾಗುವಂತೆ ಪ್ರದರ್ಶನ ನೀಡಿದಾಗ ಮಾತ್ರ ಅದು ಪರಿಣಾಮ ಬೀರುತ್ತದೆ, ಆ ಕೊರತೆ ನಿಗಬೇಕು ಎಂದು ಉತ್ತರಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರೊ. ಆನಂದ ಕುಲಕರ್ಣಿ, ರೋಹಿಣಿ ಜತ್ತಿ, ದೇವರಾಜಾ ಶಾಸ್ತ್ರಿ, ಭೀಸೆ ದಂಪತಿಗಳು ಮತ್ತು ಸ್ವಯಂಭು ಆರ್ಟ್ ಫೌಂಡಷನ್ ನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪ್ರಕಾಶ ಗೊಂದಳೆ ನಿರೂಪಿಸಿ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 10, 2026

ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರ ಬೋಧನೆ ಆಲಿಸಿ :ಐನಾಪೂರ

ಮಕ್ಕಳಿಗೆ ನೊಟ್ ಬುಕ್ ಹಂಚಿ ಜನ್ಮ ದಿನ ಆಚರಣೆ

ಪ್ರತಿ ರೈತನ ಹೊಲಕ್ಕೆ ನೀರು ತಲುಪಿಸುವುದು ನಮ್ಮ ಸಂಕಲ್ಪ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 10, 2026
    In ದಿನಪತ್ರಿಕೆ
  • ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರ ಬೋಧನೆ ಆಲಿಸಿ :ಐನಾಪೂರ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ನೊಟ್ ಬುಕ್ ಹಂಚಿ ಜನ್ಮ ದಿನ ಆಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿ ರೈತನ ಹೊಲಕ್ಕೆ ನೀರು ತಲುಪಿಸುವುದು ನಮ್ಮ ಸಂಕಲ್ಪ
    In (ರಾಜ್ಯ ) ಜಿಲ್ಲೆ
  • ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ವಿಶೇಷ ಚೇತನರ ಕಾಯ್ದೆ ಅರಿವು ಮೂಡಿಸಲು ಅಧಿಕಾರಿಗಳಿಗೆ ನಿರ್ದೇಶನ
    In (ರಾಜ್ಯ ) ಜಿಲ್ಲೆ
  • ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರಕ್ಕೆ ಭೂಮಿಪೂಜೆ
    In (ರಾಜ್ಯ ) ಜಿಲ್ಲೆ
  • ಜು.೧೧ ಮತ್ತು ೧೨ ರಂದು ವಿಶೇಷ ಅಭಿಯಾನ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಯ ಕಗ್ಗೊಲೆ
    In (ರಾಜ್ಯ ) ಜಿಲ್ಲೆ
  • ಆಗುಂಬೆ ಮತ್ತೊಂದು ವೈನಾಡಾಗುವುದು ಬೇಡ (ಸುರಂಗ ಮಾರ್ಗ ಬೇಡ – ಪ್ರಕೃತಿಯನ್ನು ಉಳಿಸೋಣ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.