ರಚನೆ
– ಮಂಜುನಾಥ ನಾಯಕ ಎನ್.ಆರ್
ಕಾವ್ಯನಾಮ: ಶ್ರೀರತ್ನತನಯ
ಊರು: ನುಗ್ಗಿಹಳ್ಳಿ, ದಾವಣಗೆರೆ
ಉದಯರಶ್ಮಿ ದಿನಪತ್ರಿಕೆ
ಕವಿಯ ಭಾವವ ಹೊಕ್ಕು ತಾ ಮೇಳೈಸಿ
ಭಾವನೆಗೊಳಗೂಡಿ ನಿಂದೆನ್ನ ಬಡಿದೆಬ್ಬಿಸಿ
ಕಣ್ಣಿಗೆ ಕಟ್ಟುತಲಿ ಕಲ್ಪನೆಗಳ ಮತಿಗಿಳಿಸಿ
ಪದ ಪೋಣಿಸಿ ರಚಿತವಾದಳು ನನ್ನ ಕವಿತೆ
ಸ್ವರ್ಗವನು ಧರೆಗಿಳಿಸಿ ಮನವನು ತುಂಬುತ
ಏಕಾಂತಕೆ ಜೊತೆಯಾಗೆ ಪ್ರತಿಪದ ಬಿಂಬಿಸುತ
ಮಿಂಚ ವೇಗದಿ ಬಂದು ಮತಿಯಲ್ಲಿ ನೆಲೆಸುತ
ಅರ್ಥಪೂರ್ಣ ವಾಸ್ತವವಾದಳಿಂದು ನನ್ನ ಕವಿತೆ
ಮತಿಯನು ಮಂಥನಗೈಯೇ ಸರ್ವ ಸದಾ
ಸುಧೆಯಾಗಿ ಜ್ಞಾನ ಹರಿಸಿ ತೆರೆಯುತಲಿ ಕದ
ಕಾವ್ಯಕನ್ನಿಕೆಯ ಸೌಂದರ್ಯ ಮನಕೆ ಮುದ
ಕೊನೆಗೊಮ್ಮೆ ಕೃತಿಯಾಗಿ ನಿಲುವಳೆನ್ನ ಕವಿತೆ
