– ಹರಿಹರ ಬಿ ಆರ್
“ಅಕ್ಷಂತಲ ಬರಹ”
ಬೆಂಗಳೂರು
ಉದಯರಶ್ಮಿ ದಿನಪತ್ರಿಕೆ
ಸೆಳೆಯುತಿದೆ ರವಿ ಚಂದ್ರರಂದದಲಿ ಕುಡಿನೋಟ
ಹಾರುತಿದೆ ಮೇಲೆರಡು ಕಾಮನಬಿಲ್ಲಿನ ಬಾವುಟ
ಹೊಳೆಯುತಿದೆ ನಕ್ಷತ್ರದಂತೆ ಹಣೆಯ ಬಿಂದಿಯು
ಕುಣಿಸುತಿದೆ ಮುಂಗುರುಳು ಮೆರಗಿಸಿ ಗಾಳಿಯು
ಝಳಪಿಸುತಿದೆ ಕೋಲ್ಮಿಂಚಿನಂತೆ ಕಣ್ಣಂಚುಗಳು
ತೋರಿದೆ ಮುತ್ತಿನಂತೆ ಬಾಯಿಯ ಗುಹೆಯೊಳು
ಸುತ್ತುವರೆದಿದೆ ಕೆಂಪಾಗಿ ಮೇಲೆಕೆಳಗಿನ ಚೆಂದುಟಿ
ಸಹಕರಿಸುತಿದೆ ಮದ್ಯದಲಿ ನಾಲಿಗೆಯೋ ತುಂಟಿ
ಕುಣಿಸುತಲಿದೆ ಬಿಳಿಗಿರಿಯಂತೆ ರಂಗಾದ ಕದಪು
ಮೇಳೈಸುತಿದೆ ಹವಳದಂತೆ ಬೆವರಿನ ಹೊಳಪು
ಹೆಚ್ಚಿಸುತಿದೆ ಅಂದ ಚೆಂದವನು ಗುಳಿಬಿದ್ದ ಗಲ್ಲ
ಕೀಳದಾದೆ ನೆಟ್ಟದೃಷ್ಟಿ ಕಂಡಿತು ಅನುರಾಗವೆಲ್ಲ
