– ಹೆಚ್.ಡಿ. ದಿವಾಕರ್
ಅರಸಿಕೇರೆ
ಉದಯರಶ್ಮಿ ದಿನಪತ್ರಿಕೆ
ಮನದ ವೀಣೆಯು ನುಡಿದಿದೆ ಶುಭವನು
ಒಲವಿನ ನಡಿಯಲಿ ಪ್ರೇಮ ನಾದವನು
ಮನಸಿಗೆ ಮುದ ನೀಡುತಿದೆ ನಿನಾದವನು
ಹೇಳುತಿದೆ ಚೆಲುವೆಗೆ ಶುಭ ಶಕುನವನು
ಬಹುದಿನದ ಮೌನದ ವೀಣೆ ಮಾತಾಡಿದೆ
ಮನದಲಿ ಹೊಸ ರಾಗವನು ಮೂಡಿಸಿದೆ
ಮನಸಿನ ಆಶಯ ಅರಿತು ತಿಳಿಹೇಳಿದೆ
ನನ್ನಯ ಪಿಸುಮಾತನು ಸಹ ಆಲಿಸಿದೆ
ಬಯಸಿದ ಚೆಲುವೆಯ ಅಂದವ ಬಣ್ಣಿಸಿದೆ
ಹೆಜ್ಜೆಯ ನೂಪುರದ ಸಪ್ಪಳವು ಕೇಳುತಿದೆ
ಭಾವಗಳ ರಾಗವು ಇಂಪಾಗಿ ಹೊರಹೊಮ್ಮಿದೆ
ಮನದ ವೀಣೆಗೆ ಹೃದಯವು ಧನ್ಯತೆ ಹೇಳಿದೆ
