Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ

ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ

ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಭಿವೃದ್ಧಿಗೆ ಆಧ್ಯತೆ ನೀಡಿದವರಿಗೆ ಮತ ನೀಡಿ :ಎಂ.ಬಿ.ಪಾಟೀಲ
(ರಾಜ್ಯ ) ಜಿಲ್ಲೆ

ಅಭಿವೃದ್ಧಿಗೆ ಆಧ್ಯತೆ ನೀಡಿದವರಿಗೆ ಮತ ನೀಡಿ :ಎಂ.ಬಿ.ಪಾಟೀಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಮಿಷಗಳಿಗೆ ಬಲಿಯಾಗದಿರಿ | ಮೊಸಳೆ ಕಣ್ಣೀರನ್ನು ನಂಬಬೇಡಿ

ವಿಜಯಪುರ: ಕಣ್ಣೀರು ಹಾಕುತ್ತ ಕಾಲಿಗೆ ಬಿದ್ದು, ಕಾಲುಂಗುರ ಕಿತ್ತು ಕೊಳ್ಳುವವರನ್ನು ನಂಬಬಾರದು ಅಂಥವರು ಆಯ್ಕೆಯಾದರೆ ವಿರೋಧಿಗಳ ಜೊತೆ ಮತ ಹಾಕಿದವರೂ ಕೂಡ ಪೋಲೀಸ್ ಠಾಣೆಗಳಿಗೆ ಅಲೆದಾಡಬೇಕಾಗುತ್ತದೆ. ಎಂದು ಕಾಂಗ್ರೆಸ್ ಮುಖಂಡ ಚನ್ನಪ್ಪ ಕೊಪ್ಪದ ಎಚ್ಚರಿಕೆ ನೀಡಿದ್ದಾರೆ.

ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,
ಶ್ರೀಮಂತ ಜಮೀನುದಾರರು ತಮ್ಮ ಹೊಲಗಳಿಗೆ ನೀರಿಲ್ಲದ ಕಾರಣ ಸಂಕಷ್ಟ ಎದುರಿಸುತ್ತಿದ್ದರು. ಕೂಲಿಗೆ ಹೋಗಲು ಪ್ರತಿಷ್ಠೆ ಅಡ್ಡಿಯಾಗಿತ್ತು. ಆದರೆ, ಈಗ ಎಂ. ಬಿ. ಪಾಟೀಲರು ಮಾಡಿರುವ ನೀರಾವರಿ ಯೋಜನೆಗಳಿಂದಾಗಿ ಉತ್ತಮ ಬೆಳೆ ಬೆಳೆಯುವಂತಾಗಿದೆ. ಇದನ್ನು ನೆನಪಿಸಿಕೊಂಡು ಎಲ್ಲರೂ ಎಂ.ಬಿ.ಪಾಟೀಲರಿಗೆ ಸಂಪೂರ್ಣ ಬೆಂಬಲ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ,
ಸುಳ್ಳು, ಮೋಸ, ಆಸೆ, ಆಮಿಷ ತೋರಿಸುವವರಿಗೆ ಮತದಾರರು ಬಲಿಯಾಗದೇ ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಮತ ಹಾಕಬೇಕು ಎಂದು ಹೇಳಿದರು.
ಮೂರು ಬಾರಿ ಜನರನ್ನು ಹೆದರಿಸಿ, ಬೆದರಿಸುತ್ತಿದ್ದವರು ಈಗ ಮೊಸಳೆ ಕಣ್ಣೀರು ಹಾಕುತ್ತ ಅಡ್ಡ ಬೀಳುವ ಮೂಲಕ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ. ಅಂಥವರನ್ನು ನಂಬಿದರೆ ಜನರು ತಾವೇ ಕಣ್ಣೀರು ಹಾಕುತ್ತ ಕೆಲಸ ಕಾರ್ಯಗಳಿಗೆ ಅಡ್ಡ ಬೀಳುವ ದುಸ್ಥಿತಿ ಬರುತ್ತದೆ. ಇವರ ಬಗ್ಗೆ ಜಾಗೃತರಾಗಿರಬೇಕು. ಜಾತಿಯಿಂದ ಹೊಟ್ಟೆ ತುಂಬುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ನಾನು ಜಲಸಂಪನ್ಮೂಲ ಸಚಿವನಾದ ಬಳಿಕ ಕೃಷ್ಣೆ ಅಷ್ಟೇ ಅಲ್ಲ, ಕಾವೇರಿ ಭಾಗದ ನೀರಾವರಿ ಯೋಜನೆಗಳಿಗೂ ಕೆಲಸ ಮಾಡಿದ್ದೇನೆ. ಕಾರಿಗೆ ಕೆಂಪು ಲೈಟ್ ಹಾಕಿಕೊಂಡು ಮೆರವಣಿಗೆ ಮಾಡದೇ ಮನೆ, ಮಠ ಬಿಟ್ಟು ನೀರಾವರಿ ಯೋಜನೆಗಳಿಗಾಗಿ ಶ್ರಮಿಸಿದ್ದೇನೆ. ಕಾಲಿಗೆ ಶಸ್ತ್ರ ಚಿಕಿತ್ಸೆಯಾಗಿದ್ದರೂ ವಿಶ್ರಾಂತಿ ಪಡೆಯದೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶೆಯದಂತೆ ಬೊಗಸೆ ನೀರು ಕೊಡುವ ಕೆಲಸ ಮಾಡಿದ್ದೇನೆ. ಈ ಮೂಲಕ ಸೂರ್ಯ- ಚಂದ್ರ ಇರುವವರೆಗೆ ಕುಟುಂಬಗಳು ಶಾಶ್ವತವಾಗಿ ನೆಮ್ಮದಿಯ ಜೀವನ ಸಾಗಿಸುವಂತೆ ಮಾಡಿದ್ದೇನೆ. ನೂರಾರು ಎಕರೆ ಜಮೀನು ಹೊಂದಿದ್ದರೂ ನೀರಿಗಾಗಿ ಕಷ್ಟ ಪಡುತ್ತಿದ್ದ ಸಾಹುಕಾರರು ಈಗ ಉತ್ತಮ ಬೆಳೆ ಬೆಳೆಯುವ ಮೂಲಕ ನಿಜವಾಗಿ ಸಾಹುಕಾರರಾಗುವಂತೆ ಮಾಡಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿ.ಎಸ್.ಪಾಟೀಲ, ಬಿ.ಜಿ. ಬಿರಾದಾರ, ಈರಗೊಂಡ ಬಿರಾದಾರ, ಸಂಗಮೇಶ ಬಬಲೇಶ್ವರ, ಆರ್.ಎಸ್.ಕೋಟ್ಯಾಳ ಸಂಗಮೇಶ ಬೂದಿಹಾಳ, ಅಣ್ಣಾಸಾಹೆಬ ಕೋಟ್ಯಾಳ, ಶಂಕರ ಕೋಟ್ಯಾಳ, ಬಾಬು ಕೋಟ್ಯಾಳ, ಎ.ಬಿ.ಬೂದಿಹಾಳ, ಧರ್ಮಣ್ಣ ಬಿಳೂರ, ಗುರು‌ ಜಂಗಮಶೆಟ್ಟಿ, ಹಣಮಂತ ಬಡಚಿ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS bjp m b patil udaya rashmi
Share. Facebook Twitter Pinterest Email Telegram WhatsApp
  • Website

Related Posts

ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ

ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ

ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ

ಈರುಳ್ಳಿ, ಹತ್ತಿ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ
    In (ರಾಜ್ಯ ) ಜಿಲ್ಲೆ
  • ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ
    In ವಿಶೇಷ ಲೇಖನ
  • ಈರುಳ್ಳಿ, ಹತ್ತಿ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಕ್ರೀಡೆಯಲ್ಲಿ ಮಕ್ಕಳ ಆರೋಗ್ಯ ಅಡಗಿದೆ :ಎಸ್.ಕೆ.ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ: ಡಿ.೧ ರಂದು ಬೃಹತ್ ಹೋರಾಟಕ್ಕೆ ಕರೆ
    In (ರಾಜ್ಯ ) ಜಿಲ್ಲೆ
  • ಹಿರಿಯರನ್ನು ಗೌರವಿಸುವುದು ಯುವಪೀಳಿಗೆ ಜವಾಬ್ದಾರಿ :ಪ್ರೊ.ಹಿರೇಮಠ
    In (ರಾಜ್ಯ ) ಜಿಲ್ಲೆ
  • ಡಾ.ಸರೋಜನಿ ಮಹಿಷಿ ವರದಿ ಜಾರಿಗೆ ಕದಂಬ ಸೈನ್ಯ ಆಗ್ರಹ
    In (ರಾಜ್ಯ ) ಜಿಲ್ಲೆ
  • ವಿದೇಶಕ್ಕೆ ಹೊರಟ ಗ್ರಾಮೀಣ ಪ್ರತಿಭೆ ಪ್ರೀತಿ ಆನೆಗುಂದಿ
    In (ರಾಜ್ಯ ) ಜಿಲ್ಲೆ
  • ನಬಿರೋಶನ್ ಪ್ರಕಾಶನದಿಂದ ಮಹಾಂತೇಶ ಅವರಿಗೆ ನುಡಿ ನಮನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.