ವಿಜಯಪುರ: ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಪತ್ನಿ ಪ್ರಚಾರಕ್ಕೆ ತೆರಳಿದ ವೇಳೆ ವಿರೋಧ ಪಕ್ಷದವರು ಅಡ್ಡಿ ಪಡಿಸಿದ ಘಟನೆ ತಿಕೋಟಾ ತಾಲೂಕಿನ ಹುಬನೂರ ಎಲ್. ಟಿ. ಯಲ್ಲಿ ನಡೆದಿದೆ.
ಆಶಾ ಎಂ. ಪಾಟೀಲ ಅವರು ಹುಬನೂರ ಎಲ್. ಟಿ. ಯಲ್ಲಿ ಪ್ರಚಾರ ನಿರತರಾಗಿದ್ದಾಗ ಬಂದ ಯುವಕರ ಗುಂಪೊಂದು ಬೈಕ್ ಶಬ್ದ ಮಾಡುತ್ತ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ, ಬೆದರಿಕೆ ಹಾಕಿದ್ದಾರೆ.
ಮಹಾರಾಷ್ಟ್ರದ ಗಡಿಯಲ್ಲಿರುವ ಈ ತಾಂಡಾಕ್ಕೆ ಬಹುಷಃ ಹೊರ ರಾಜ್ಯದಿಂದ ಆಗಮಿಸಿದ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಪ್ರಚಾರಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿ ಕೆಲಕಾಲ ಆತಂಕದ ವಾತಾವರಣ ಸೃಷ್ಠಿಸಿದ್ದಾರೆ.
ಈ ಘಟನೆ ಇಡೀ ಭಾಗದಲ್ಲಿ ಮತದಾರರಲ್ಲಿ ಆತಂಕ ಉಂಟು ಮಾಡಿದ್ದು, ಎಂ. ಬಿ. ಪಾಟೀಲ ಅವರ ಕುಟುಂಬಕ್ಕೆ ಭದ್ರತೆ ನೀಡಬೇಕು. ಮುಂದೆ ಹೀಗಾಗದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿ. ಪಂ. ಮಾಜಿ ಅಧ್ಯಕ್ಷ ಹಾಗೂ ರೆಡ್ಡಿ ಸಮಾಜದ ಮುಖಂಡ ಬಸವರಾಜ ದೇಸಾಯಿ ಆಗ್ರಹಿಸಿದ್ದಾರೆ.
ಎಂದಿನಂತೆ ಪ್ರಚಾರಕ್ಕೆ ತೆರಳುವ ಮಹಿಳೆಯರಿಗೆ ಈ ರೀತಿ ಬೆದರಿಕೆ ಹಾಕುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment