ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರದ ಸಮಾರೋಪ | ಪ್ರೊ.ನಾರಾಯಣ ಪವಾರ ಅಬಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಂಜಾರ ಆಭರಣ ತಯಾರಿ ಮತ್ತು ಬಂಜಾರಾ ಸಮುದಾಯದ ಕೌಶಲ್ಯಗಳನ್ನು ಇತರರು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಬಂಜಾರ ಸಮಾಜವೇ ಮುಂದೆ ಬಂದಿಲ್ಲ. ಸಮುದಾಯವು ಒಟ್ಟಾಗಿ ಒಂದಾಗಿ ಬೆಳೆಯಬೇಕು ಶೆರಿಂಗ್ ಇಜ್ ಕೆರಿಂಗ್ ಆಗಬೇಕು. ಹಾಗೆಯೆ ಯಾವುದೇ ವೃತ್ತಿ ಮಾಡಿದರೂ ನಾವೆಲ್ಲ ಗೋರ್ ಬಂಜಾರರು ಎಂದು ಸಮಾಜ ಚಿಂತಕ, ಡಾ.ಬಾಬು ರಾಜೇಂದ್ರ ನಾಯಕ್ ಸಲಹೆ ನೀಡಿದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಹಾಗೂ ಗ್ರಾಮ ಪಂಚಾಯತ್, ಬರಟಗಿ ಸಹಕಾರದೊಂದಿಗೆ “೧೦ ದಿನಗಳ ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರ” ದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇನೋರ್ವ ಮುಖ್ಯ ಅತಿಥಿ ಕ.ರಾ.ಅ.ಮ.ವಿ.ವಿ ಕನ್ನಡ ಅಧ್ಯಯನ ವಿಭಾಗದ ಪ್ರೊ.ನಾರಾಯಣ ಪವಾರ ಮಾತನಾಡಿ, ಬಂಜಾರ ಭಾಷೆಯು ಅದ್ಭುತವಾದ ವ್ಯಾಕರಣಾಂಶಗಳನ್ನು ಹೊಂದಿರುವ ಭಾಷೆಯಾಗಿದೆ. ಲಂಬಾಣಿ ಮಹಿಳೆಯರ ಸೌಭಾಗ್ಯದ ಸಂಕೇತವಾದ ಆಭರಣ ತಯಾರಿಸುವ ನೀವುಗಳು ಶ್ರೇಷ್ಠ ಕಲಾವಿದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮಾತನಾಡಿ, ಬಂಜಾರ ಅಕಾಡೆಮಿಯು ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ. ಎಲ್ಲ ಕಡೆ ಈ ರೀತಿಯ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ಜಾನಪದ ವಿಶ್ವವಿದ್ಯಾಲಯ ಗೊಟಗೊಡಿಯ ಸಹಾಯಕ ಪ್ರಾಧ್ಯಪಕ ಉತ್ತಮ ಮೂಡ ಮಾತನಾಡಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿಯು ತುಂಬಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಆರ್ ಬಿ ನಾಯಕ್, ಅಧ್ಯಕ್ಷತೆ ವಹಿಸಿದ ರಾಮನಗೌಡ ಎನ್ ಬಿರಾದಾರ ಮಾತನಾಡಿ, ತಾಂಡಾದಲ್ಲಿಯೇ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬಂದು ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಾಗಾರಕ್ಕೆ ಆಗಮಿಸಿದ ಗಣ್ಯರೆಲ್ಲರನ್ನು ಸ್ವಾಗತಿಸಿ, ೧೦ ದಿನಗಳ ಕಾರ್ಯಾಗಾರದ ಸಂಕ್ಷಿಪ್ತ ವರದಿಯನ್ನು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ, ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸಂಗೀತಾ ನಾಯಕ್ ಅವರು ಮಾಡಿದರು. ಶ್ರೀಮತಿ ಶಾರದಾ ನಾಯಕ್ ವಂದಿಸಿದರು.
ಕಾರ್ಯಕ್ರಮದಲ್ಲಿ ಧನರಾಜ್ ಪತ್ತಾರ್, ಸದಸ್ಯರು ಗ್ರಾಪಂ ಬರಟಗಿ, ಗೊವಿಂದ ಸಿಂದೆ ಸದಸ್ಯರು ಗ್ರಾಪಂ ಬರಟಗಿ, ವಿನೋದ ಪತ್ತಾರ, ಕಲ್ಯಾಣಸಿಂಗ್ ಪತ್ತಾರ್, ಕಿಷನ್ ಪತ್ತಾರ್, ದೀವಿಚಂದ ಪತ್ತಾರ, ಶಿಬಿರಾರ್ಥಿಗಳು ಮತ್ತು ಗ್ರಾಮದ ಹಿರಿಯರು ಭಾಗವಹಿಸಿದ್ದರು.
ಬಹುಮಾನ ವಿತರಣೆ
ಈ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳು ತಯಾರಿಸಿದ ಆಭರಣಗಳನ್ನು ನಾಲ್ಕು ಗುಂಪುಗಳಾಗಿ ವರ್ಗಿಕರಿಸಿ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅತ್ಯಂತ ಸುಂದರವಾಗಿ ಆಭರಣಗಳನ್ನು ತಯಾರಿಸಿದ ಗುಂಪುಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಪ್ರಥಮ ಬಹುಮಾನ ೧೦೦೦, ಎರಡನೇಯ ಬಹುಮಾನ ೭೦೦, ತೃತಿಯ ಬಹುಮಾನ ೫೦೦ ಮತ್ತು ಸಮಾಧಾನಕರ ೪೦೦ರೂ ವಿತರಣೆಯ ಪ್ರಯೋಜಕತ್ವವನ್ನು ಶ್ರೀಮತಿ ಸಂಗೀತಾ ನಾಯಕ್ ಅವರು ವಹಿಸಿಕೊಂಡಿದ್ದರು.
ಅನಿಸಿಕೆ ವ್ಯಕ್ತ
ಈ ಕಾರ್ಯಾಗಾರದ ಕುರಿತು ಶಿಬಿರಾರ್ಥಿಗಳಾದ ಮನು ಪತ್ತಾರ, ಗೀತಾ ಪತ್ತಾರ್, ಸೋನ್ಯಾ ಪತ್ತಾರ್, ಕಾವೇರಿ ಪತ್ತಾರ್, ಉಷಾ ಪತ್ತಾರ್, ಅಶೋಕ ಪತ್ತಾರ, ಮಿನಾಕ್ಷಿ ಪತ್ತಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

