ಮುದ್ದೇಬಿಹಾಳ: ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭ್ರಹ್ಮಶ್ರೀ ಆದಿ ನಾರಾಯರಾಯಣ ಗುರೂಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಗುರೂಜಿಯವರ ಗಾಜು ಒಡೆದಿರುವ ಫೋಟೊ ಇರಿಸಿ ಪೂಜೆ ಮಾಡಿ ಅಪಮಾನ ಮಾಡಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರ್ಯ ಈಡಿಗ ಸಮುದಾಯದವರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಸಮುದಾಯ ಮುಖಂಡ ಟಿ ಭಾಸ್ಕರ್ ಮಾಧ್ಯಮದರೊಂದಿಗೆ ಮಾತನಾಡಿ, ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಡಿ.ದೇವರಾಜ ಅರಸು ಹಾಗೂ ಭ್ರಹ್ಮಶ್ರೀ ಆದಿ ನಾರಾಯರಾಯಣ ಗುರೂಜಿಯವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರದಲ್ಲಿ ಗುರೂಜಿಯವರ ಒಡೆದಿರುವ ಫೋಟೋ ಇರಿಸಲಾಗಿತ್ತು. ಬ್ಯಾನರ್ ನಲ್ಲೂ ಸಹ ಗುರೂಜಿಯ ಫೋಟೋ ಆಗಲಿ ಅಥವಾ ಹೆಸರು ಆಗಲಿ ಇರಲಿಲ್ಲ. ಅಲ್ಲದೇ ಗುರೂಜಿಯವರ ಚರಿತ್ರೆಯ ಉಪನ್ಯಾಸಕರನ್ನೂ ಸಹ ನೇಮಿಸಿರಲಿಲ್ಲ. ಉದ್ದೇಶ ಪೂರ್ವಕವಾಗಿ ನಮ್ಮ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಚೇರಿಯ ಆವರಣದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಮನವಿ ಪತ್ರಕ್ಕೆ ಸಮುದಾಯದ ತಾಲೂಕು ಅಧ್ಯಕ್ಷ ಗಣೇಶ ಅನ್ನಗೌನಿ, ಹಣಮಂತ ಹಿರೇಮನಿ, ಎ.ಈಶ್ವರ ಕುಮಾರ, ಸುಧಾಕರ ತುಮಲಾ, ಲಕ್ಷ್ಮಣ ಈಳಗೇರ, ಎಚ್.ಟಿ.ಈಳಗೇರ ಸೇರಿದಂತೆ ಮತ್ತೀತರರು ಸಹಿ ಹಾಕಿದ್ದಾರೆ.
Subscribe to Updates
Get the latest creative news from FooBar about art, design and business.
ಸರ್ಕಾರಿ ಜಯಂತಿ ಕಾರ್ಯಕ್ರಮದಲ್ಲಿ ಒಡೆದಿರುವ ಫೋಟೋ! :ಕ್ರಮಕ್ಕೆ ಆಗ್ರಹ
Related Posts
Add A Comment

