ಮುದ್ದೇಬಿಹಾಳ: ಭಾರತದ ಸಂಸ್ಕೃತಿಗೂ ಆಚರಿಸುವ ಹಬ್ಬಗಳಿಗೂ ಅವಿನಾಭಾವ ಸಂಬಂಧವಿದೆ ಎಂದು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾರ್ಶನಿಕ ವಚನಕಾರ ನೂಲಿ ಚಂದಯ್ಯನ ಜಯಂತಿ ಮತ್ತು ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹೋದರತೆಯ ಪ್ರತೀಕವಾಗಿ ನಾವು ರಕ್ಷಾ ಬಂಧನವನ್ನು ಆಚರಿಸುತ್ತೇವೆ. ಅರ್ಥಪೂರ್ಣವಾಗಿ ರಕ್ಷಾ ಬಂಧನವನ್ನು ಆಚರಿಸಿ, ಅದರಂತೆ ಅನುಸರಿಸಿದಲ್ಲಿ ನಮ್ಮ ಸಂವಿಧಾನದ ಆಶಯದಲ್ಲಿ ಒಂದಾದ ಭ್ರಾತೃತ್ವ ಭಾವನೆ ವೃದ್ಧಿಯಾಗಿಸುವಲ್ಲಿ ಸಹಕಾರಿಯಾಗುತ್ತದೆ. ಇದರಿಂದ ದೇಶ ಶಾಂತಿ ಕಾಣಬಹುದಾಗಿದೆ. ಇವತ್ತಿನ ದಿನಗಳಲ್ಲಿ ನಾವು ಶತಶತಮಾನಗಳಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಹಬ್ಬಗಳ ಆಚರಣೆಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಗಳಾದ ಸ್ನೇಹಿತರ ದಿನ, ಪ್ರೇಮಿಗಳ ದಿನ, ನ್ಯೂ ಇಯರ್ ಇತ್ಯಾದಿ ಹಬ್ಬಗಳ ಆಚರಣೆಗೆ ಒಲವು ತೋರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅರ್ಥವೇ ಇಲ್ಲದಂತಿರುವ ಹಬ್ಬಗಳ ಆಚರಣೆಗಳಲ್ಲಿ ನಾವು ತೋರಿಸುವ ಆಸಕ್ತಿ ಸಹಜತೆಯಿಂದ ಹೊರಗುಳಿದು ಮನುಷ್ಯನ ಕಾಮನೆಗಳನ್ನು ವಿಕೃತಗೊಳಿಸುತ್ತದೆ. ಇದರಿಂದ ಮನುಷ್ಯನು ಸಮಾಜ ಘಾತಕ ಕೆಲಸಗಳನ್ನು ಮಾಡಲು ಮುಂದಾಗಿ ಮನೋವಿಕಾರಗಳಿಗೆ ಬಲಿಯಾಗುತ್ತಾನೆ. ಆದುದರಿಂದ ಸಹಜತೆಯ ಪ್ರತಿಕವಾಗಿರುವ ಹಬ್ಬಗಳನ್ನು ಅವುಗಳ ಮಹತ್ವದ ಹಿನ್ನೆಲೆಯಲ್ಲಿ ಆಚರಿಸುವಂತಾಗಬೇಕು ಎಂದರು.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸರಸ್ವತಿ ಮಡಿವಾಳರ, ಶಿಕ್ಷಕ ಮಂಜುನಾಥ ಪಡದಾಳಿ, ಬಿ.ಟಿ.ಭಜಂತ್ರಿ ಮಾತನಾಡಿದರು. ಶಿಕ್ಷಕ ಸುಖದೇವ ಹಂಜಗಿ ರಕ್ಷಾ ಬಂಧನದ ಸಂದೇಶವನ್ನು ವಾಚಿಸಿದರು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಪ್ರಭು ಕಡಿ, ಶಿಕ್ಷಕರಾದ ರಂಜಿತಾ ಭಟ್ಟ, ಬಿ.ಆರ್.ಬೆಳ್ಳಿಕಟ್ಟಿ, ಕೀರ್ತಿ ತಳಗೇರಿ, ಕಿರಣ ಕಡಿ, ಅನ್ನಪೂರ್ಣ ಹೊಸಮನಿ, ಆರ್.ಜೆ.ಸಾಗರ, ಲೋಹಿತ ಜೈನಾಪೂರ, ಶಿವಶಂಕರಯ್ಯ ಹಿರೇಮಠ, ವರ್ಷಾ ಹುನಗುಂದ, ಭಾಗ್ಯಾ ಸಿದ್ದಾಪೂರ, ಇಂದು ನಾಯಕ, ತ್ರಿವೇಣಿ ಕುಲಕರ್ಣಿ ಸೇರಿದಂತೆ ಇತರರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

