ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ವಿಜಯಪುರ ಹಾಗೂ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ “ವಿಶ್ವ ಛಾಯಾಗ್ರಹಣ ದಿನಾಚರಣೆಯ” ಅಂಗವಾಗಿ ಛಾಯಾಗ್ರಹಣ ಕ್ಷೇತ್ರದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಆ.೨೧ ರಂದು ಬೆಳಿಗ್ಗೆ ೧೧-೦೦ಗಂಟೆಗೆ “ಸರಕಾರಿ ಆರ್ಟ್ ಗ್ಯಾಲರಿ” ಪ್ರವಾಸೋದ್ಯಮ ಇಲಾಖೆ, ಹಳೆ ಐ.ಬಿ ಸ್ಟೇಶನ್ ರಸ್ತೆ, ವಿಜಯಪುರ ಇಲ್ಲಿ ಏರ್ಪಡಿಸಲಾಗಿದೆ.
ಉದ್ಘಾಟಕರಾಗಿ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಆಗಮಿಸಲಿದ್ದಾರೆ,
ಮುಖ್ಯ ಅತಿಥಿಗಳಾಗಿ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯ, ಸಹಾಯಕ ಪ್ರಾಧ್ಯಾಪಕರಾದ ಶಸ್ತ್ರ ಚಿಕಿತ್ಸಾ ವಿಭಾಗದ ಡಾ. ದೀಪಕ್ ಆರ್. ಚವ್ಹಾಣ. ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕರಾದ ನಾಗರಾಜ ಟಿ. ಸಿ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಇವರು ಆಗಮಿಸಲಿದ್ದಾರೆ. ಅತಿಥಿಗಳು ಜಂಗಲಿಬಾಷಾ ಮುಜಾವರ ಅಧ್ಯಕ್ಷರು, ಬಬಲೇಶ್ವರ ತಾಲೂಕು ಛಾಯಾಗ್ರಾಹಕರ ಸಂಘ ಸಂಗಯ್ಯ ಮಠಪತಿ ಅಧ್ಯಕ್ಷರು, ಕೋಲ್ಟಾರ್ ತಾಲೂಕು ಛಾಯಾಗ್ರಾಹಕರ ಸಂಘ ಸಿದ್ದು ಕುದುರೆ ಅಧ್ಯಕ್ಷರು, ಇಂಡಿ ತಾಲೂಕು ಛಾಯಾಗ್ರಾಹಕರ ಸಂಘ ಶಿವರುದ್ರಯ್ಯ ಹಿರೇಮಠ ಅಧ್ಯಕ್ಷರು, ಬಸವನ ಬಾಗೇವಾಡಿ ತಾಲೂಕು ಛಾಯಾಗ್ರಾಹಕರ ಸಂಘ ಪರಶುರಾಮ ಗುಳ್ಳೂರ ಅಧ್ಯಕ್ಷರು, ಸಿಂದಗಿ ತಾಲೂಕು ಛಾಯಾಗ್ರಾಹಕರ ಸಂಘ ರಾಜಣ್ಣ ಸಂಡೂರ ಅಧ್ಯಕ್ಷರು, ತಾಳಿಕೋಟಿ ತಾಲೂಕು ಛಾಯಾಗ್ರಾಹಕರ ಸಂಘ ಮಡಿವಾಳಪ್ಪಾ ಪಾಟೀಲ ಹಿರಿಯ ಛಾಯಾಗ್ರಾಹಕರು, ತಿಕೋಟಾ ಇವರು ಆಗಮಿಸಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ರಮೇಶ ಚವ್ಹಾಣ ವಹಿಸಿಕೊಳ್ಳುತಿದ್ದಾರೆ.
ಸಾಧಕರಾದ ರವೀಂದ್ರ ಪೂಜಾರಿ, ವಿಜಯಪುರ. ಶ್ರೀ ಮಹೇಶ ಬಾಗಿ, ವಿಜಯಪುರ ಚಂದ್ರಕಾಂತ (ಪುಟ್ಟು) ಸಂಗಮ, ಸಿಂದಗಿ. ವಿವೇಕಾನಂದ ಅಕ್ಕಿ. ವಿಜಯಪುರ ಮಹಮ್ಮದ್ ಇಸಾಕ್. ಲಾಳಸಂಗಿ, ಇಂಡಿ ಹಾಗೂ ಪ್ರಭಾಕರ ನೆಲವಡೆ ಆಲಮೇಲ ಇವರು ಗೌರವ ಸನ್ಮಾನಕ್ಕೆ ಭಾಜನರಾಗಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಸತೀಶಕುಮಾರ ಕಲಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ವಿಶ್ವ ಛಾಯಾಗ್ರಹಣ ದಿನಾಚರಣೆ, ಸನ್ಮಾನ, ಪ್ರತಿಭಾ ಪುರಸ್ಕಾರ ಇಂದು
Related Posts
Add A Comment

