ವಿಜಯಪುರ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಳೆದು ವೇದಿಕೆ ಒದಗಿಸಿದಾಗ ಅಗಾಧ ಜ್ಞಾನ ಹೊರಬರುತ್ತದೆ ಎಂದು ರವೀಂದ್ರನಾಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಉಮಾ ಭೋಸಲೆ ಹೇಳಿದರು.
ನಗರದ ಗುರುದೇವ ಇಂಟರನ್ಯಾಶನಲ್ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡ ಗಣಿತ ಹಬ್ಬ ಉದ್ಘಾಟಿಸಿ ಪ್ರಥಮ ಸ್ಥಾನ ಪಡೆದ ಕುಮಾರಿ ಮಿನಾಜ್ ಕಬೂಲ್ ಕೊಕಟನೂರ ಇವಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು, ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ ಅದನ್ನು ಒರೆಗೆ ಹಚ್ಚಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೆಪಿಸಬೇಕು. ಅದನ್ನು ನಮ್ಮ ಶಾಲೆಯ ಶಿಕ್ಷಕರು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಪ್ರತಿ ವರ್ಗದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಬೇಕು ಜೀವನ ಮಾರ್ಗ ಕಲಿಸುವತ್ತ ಗಮನ ಹರಿಸಬೇಕೆಂದರು.
೧೦ನೇ ವರ್ಗದ ಶಿಕ್ಷಕಿ ತಹಸೀನ್ ದಫೇದಾರ ಮಾತನಾಡಿ,ಮಕ್ಕಳಲ್ಲಿ ಕ್ರೀಯಾಶೀಲತೆಯನ್ನು ಹೆಚ್ಚಿಸಲು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅದರಲ್ಲಿ ನಮ್ಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಮಿನಾಜ್ ಕೊಕಟನೂರ ಉತ್ತಮ ಮಾಡಲ್ ಮಾಡಿ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ರವೀಂದ್ರ ಭೋಸಲೆ ಅಧ್ಯಕ್ಷೆತೆ ವಹಿಸಿದ್ದರು. ಪ್ರಥಮ ಸ್ಥಾನ ಪಡೆದ ಮಿನಾಜ್ ಕಬೂಲ್ ಕೊಕಟನೂರ ಇವಳಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಪಾರಿತೋಷಕ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ವೇತಾ ಮೋಟಗಿ, ಸುಬಾನ ಕೋರಬು, ಪ್ರಶಾಂತ, ಮಾಲಟಕರ್, ಸಾಧಿಕಾ ಮುಶ್ರೀಫ, ವಕೀಲಹಮ್ಮದ ಬಾಗವಾನ, ಆಫ್ರೀನ್ ಕೋರಬು, ಸುಹಾಸಿನಿ ಕನ್ನೊಳ್ಳಿ, ಪ್ರೀಯಾಂಕಾ ಶಿರಮಗೊಂಡ, ಸ್ವಾತಿ ಜಾಧವ ಸೇರಿದಂತೆ ಶಿಕ್ಷಕ ಸಿಬ್ಬಂಧಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

