ಆಲಮಟ್ಟಿ: ಇಂದಿನ ಯುವಕರಲ್ಲಿ ಮೊದಲು ದೇಶಭಕ್ತಿ, ರಾಷ್ಟç ಪ್ರೇಮ ಮೂಡಿಬರಲಿ ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಹೇಳಿದರು.
ಇಲ್ಲಿನ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ೭೮ ನೇ ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳು ರಾಷ್ಟ್ರ ಭಕ್ತಿಗೆ ಪ್ರಥಮ ಆದ್ಯತೆ ನೀಡಬೇಕೆಂದರು.
೧೫೦ ಕೋಟಿ ಜನಸಂಖ್ಯೆ ಹೊಂದಿರುವ ಬಲಾಢ್ಯ ರಾಷ್ಟ್ರ ನಮ್ಮ ಭಾರತ ದೇಶ.ಸುಭದ್ರ ರಾಷ್ಟç ಇದ್ದರೆ ನೆಮ್ಮದಿಯಿಂದ ನಾವು ಬದುಕಲು ಸಾಧ್ಯ. ಆ ದಿಸೆಯಲ್ಲಿ ಯುವಜನತೆ ರಾಷ್ಟ್ರೀಯ ಹಬ್ಬಗಳ ಮಹತ್ವ ಅರಿಯಬೇಕು ಎಂದರು.
ಈ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನದ ಮೂಲಕ ತಮ್ಮನ್ನು ತಾವು ಅಪಿ೯ಸಿಕೊಂಡು ಅಸಂಖ್ಯಾತ ಮಹನೀಯರು ಹೋರಾಡಿ ಸ್ವಾತಂತ್ರ್ಯ ದಕ್ಕಿಸಿಕೊಟ್ಟಿದ್ದಾರೆ. ಅನೇಕ ಮಹನೀಯರು ಹುತಾತ್ಮರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರೂ ಸ್ಮರಣೀಯರು.ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಲಾಲ್ ಬಹಾದ್ದೂರ್ ಶಾಸ್ತಿç, ಡಾ.ಅಂಬೇಡ್ಕರ್, ಚಂದ್ರಶೇಖರ ಆಜಾದ್ ಸೇರಿದಂತೆ ಹಲವಾರು ನಾಯಕರ ಅವಿರತ ಹೋರಾಟದ ಫಲವಾಗಿ ಇಂದು ನಾವೆಲ್ಲರೂ ರಾಷ್ಟ್ರೀಯತೆ ಛಾಪುನಲ್ಲಿದ್ದೆವೆ.ಸ್ವಚ್ಛಂದ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಅನೇಕ ಸ್ತರದ ಸ್ವಾತಂತ್ರ್ಯಗಳು ಲಭಿಸಿವೆ ಎಂದರು.
ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ ಮಾತನಾಡಿ, ಯುವಪೀಳಿಗೆ ಮಹಾತ್ಮರನ್ನು ಸ್ಮರಿಸಿಕೊಂಡು ಅವರ ಆಶಯಗಳಿಗೆ ಸ್ಪಂದಿಸಿ ವ್ಯಕ್ತಿತ್ವ ಮೆರೆಯಬೇಕು. ದೇಶದ ಬಗ್ಗೆ ಒಲವು, ಪ್ರೀತಿ,ಪ್ರೇಮಭಾವನೆ ಅಂಕುರಗೊಳಿಸಿಕೊಳ್ಳಬೇಕು. ಕಲಿಕಾ ಓದಿನೊಂದಿಗೆ ಈ ರಾಷ್ಟçದ ನೆಲ,ಜಲ,ಭಾಷೆ, ಸಂಸ್ಕೃತಿಗಳ ಬಗ್ಗೆ ಗೌರವ ಭಾವ ತಾಳಬೇಕು. ಪಠ್ಯ ಪುಸ್ತಕದಲ್ಲಿನ ಹಾಗೂ ಹೊರ ಜಗತ್ತಿನಲ್ಲಿನ ಜ್ಞಾನ ಸಂಪತ್ತು ಪಡೆದುಕೊಂಡು ಸರ್ವೋತೋಮುಖ ವ್ಯಕ್ತಿತ್ವ ವಿಕಸನದಿಂದ ಬೆಳವಣಿಗೆ ಕಾಣಬೇಕು ಎಂದರು.
ಶಾಲಾ ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಚಟುವಟಿಕೆಗಳು ನೋಡುಗರ ಮನ ಸೆಳೆದವು. ದೇಶಭಕ್ತಿ ಹಾಡುಗಳಿಗೆ ಹೆಜ್ಜೆ ಹಾಕಿ ಸಂತಸಗೊಂಡರು. ಆಕರ್ಷಕ ಪಥಸಂಚಲನ ನಡೆಯಿತು.
ಕಾಲೇಜು ಸಿಬ್ಬಂದಿ ಎಚ್.ಎನ್.ಕೆಲೂರ, ಎಂ.ಎಸ್.ಸಜ್ಜನ, ಪಿ.ವಾಯ್.ಧನಶೆಟ್ಟಿ, ಟಿ.ಬಿ.ಕರದಾನಿ, ಮಮತಾ ಕರೇಮುರಗಿ, ಧನರಾಜ ಸಿಂಗಾರಿ, ಗೀತಾ ಯಳಮೇಲಿ,ಅಂಬಿಕಾ ಇಟಗಿ, ಹಾಗೂ ಹೈಸ್ಕೂಲ್ ಸಿಬ್ಬಂದಿ ಗಂಗಾಧರ ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ್ ಗಾಳಪ್ಪಗೋಳ, ಜಗದೇವಿ ಕೆ, ಜ್ಯೋತಿ ದೊಡ್ಡೆಣ್ಣವರ, ರಿಯಾನಾ ಕಾಲೇಖಾನ ಪ್ರಾಥಮಿಕ ಮುಖ್ಯಗುರುಮಾತೆ ಕಮಲಾಕ್ಷಿ ಹಿರೇಮಠ ಸೇರಿದಂತೆ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

