ಚಿಮ್ಮಡ: ದೇಶಕ್ಕೆ ಸ್ವಾತಂತ್ರ್ಯವನ್ನು ಬ್ರಿಟಿಷರು ದಾನವಾಗಿ ನೀಡಿಲ್ಲ ವಿವಿಧ ಹೋರಾಟಗಳ ಮೂಲಕ ಅವರಿಂದ ನಾವು ಕಿತ್ತುಕೊಂಡಿದ್ದೆವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು,
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ವೀರ ಯೋಧ ಬಸವರಾಜ ಸಿದ್ದಪ್ಪ ನಾವಿಯವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಪಡೆಯಲು ಹಲವಾರು ದೇಶಭಕ್ತರು ತಮ್ಮ ಬಲಿದಾನಗೈದಿದ್ದಾರೆ, ಹಲವು ಮಹಾತ್ಮರು ಕಠಿಣ ಜೈಲುವಾಸದೊಂದಿಗೆ ಚಿತ್ರಹಿಂಸೆ ಅನುಭವಿಸಿದ್ದಾರೆ. ಅಲ್ಲದೇ ಸಾವಿರಾರು ಜನ ಹೋರಾಟಗಾರರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ನಾವಿಲ್ಲಿ ಸುಖವಾಗಿ ನಿದ್ರೆ ಮಾಡಲು ಕಾರಣ ಯೋಧರು ನಿದ್ದೆಗೆಟ್ಟು ನಮಗಾಗಿ ಗಡಿ ಕಾಯುತ್ತಾರೆ, ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ವೀರ ಸೇನಾನಿಗಳ ಕುಟುಂಬವನ್ನು ಕಾಯುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು.
ಉಪನ್ಯಾಸಕರಾಗಿ ಪತ್ರಕರ್ತ ಶಿವಲಿಂಗ ಸಿದ್ನಾಳ ಮಾತನಾಡಿ, ಶಿಸ್ತು,ಗತ್ತು,ನಿಯತ್ತು, ತಾಕತ್ತು, ಹಾಗೂ ಸಂಪತ್ತು ಇವೆಲ್ಲವೂ ಸಿಗುವುದು ಸೈನಿಕ ಹುದ್ದೆಯಲ್ಲಿ ಮಾತ್ರ ಎಂದ ಅವರು ಸೈನಿಕರ ಪರ ಹಲವಾರು ನುಡಿಮುತ್ತುಗಳ ಮೂಲಕ ಎಲ್ಲರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದರು.
ಸಾನಿಧ್ಯವನ್ನು ಶ್ರೀ ಪ್ರಭು ಮಹಾಸ್ವಾಮಿಗಳು, ಶ್ರೀ ಜನಾರ್ಧನ ಮಹಾರಾಜರು ವಹಿಸಿದ್ದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಪ್ಪ ಮಂಗರವಾಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಮಾಲಾ ಮೋಟಗಿ, ಪಿಕೆಪಿಎಸ್ ಅಧ್ಯಕ್ಷ ಹಣಮಂತ ನೇಸೂರ, ಪುಂಡಲಿಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಣ್ಣ ಬಗನಾಳ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ವೈದ್ಯಾಧಿಕಾರಿ ಡಾ. ಕೆ ಎಸ್ ಘೂಳನ್ನರ, ಮಲ್ಲಪ್ಪ ಸಿಂಗಾಡಿ, ಪ್ರಭು ಮುಧೋಳ, ಉಮೇಶ ಪೂಜಾರಿ, ಮಹಾಲಿಂಗ ಬಳಗಾರ, ಶ್ರೀಶೈಲ ಮಠಪತಿ, ಯೋಧ ಮುತ್ತು ನಾವಿ ಸೇರಿದಂತೆ ಕುಟುಂಬಸ್ಥರು, ಹಾಗೂ ಮಾಜಿ ಯೋಧರ ಸಂಘಟಣೆಯ ಪ್ರಮುಖರು ಉಪಸ್ಥಿತರಿದ್ದರು. ಶಿಕ್ಷಕ ಮಹಾಂತೇಶ ಬಡಿಗೇರ ಸ್ವಾಗತಿಸಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

