ಚಿಮ್ಮಡ: ಉತ್ತಮ ಆರೋಗ್ಯ ಹೊಂದಲು ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆಯಂದು ಪ್ರಭುಲಿಂಗೇಶ್ವರ ಇಂಟರನ್ಯಾಷನಲ್ ಸ್ಕೂಲ್ನ ಸಂಸ್ಥಾಪಕ ಕಾರ್ಯದರ್ಶೀ ವಿದ್ಯಾಧರ ಸವದಿ ಹೇಳಿದರು.
ಗ್ರಾಮದ ಪ್ರಭುಲಿಂಗೇಶ್ವರ ಇಂಟರನ್ಯಾಷನಲ್ ಸ್ಕೂಲ್ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ದೇಶದ ಜನರಲ್ಲಿ ಆರೋಗ್ಯದ ಅರಿವು ಮೂಡಿಸಲು ಆಚರಿಸಲಾಗುವ ಈ ದಿನಾಚರಣೆಗಳಿಂದ ಶಾಲಾ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಶುಚಿತ್ವದ ಮಹತ್ವಮನವರಿಕೆ ಮಾಡಬೇಕಾಗಿದೆ, ಪ್ರತಿಯೊಬ್ಬರು ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ ನೂರಾರು ಕಾಯಿಲೆಗಳಿಂದ ನಾವು ಬಚಾವಾಗಬಹುದೆಂದರು.
“ಮಕ್ಕಳಲ್ಲಿ ನೈರ್ಮಲ್ಯದ ಮಹತ್ವ” ವಿಷಯ ಕುರಿತು ತಜ್ಞವೈದ್ಯರಾದ ಡಾ. ಸೋಮನಾಥ ಬಡೇಮನಿ, ಡಾ. ಸತೀಶ ಮಾಳಿ, ಡಾ. ಕುಮಾರ ಅಥಣಿ ಮಾತನಾಡಿದರು.
ಈ ಶಾಲೆಯನ್ನು ನಿರ್ವಹಿಸುವ ಹಿಪೋ ಕ್ಯಾಂಪಸ್ ಉಪಾಧ್ಯಕ್ಷೆ ಶ್ರೀಮತಿ ಲಲಿತಾ ಹಾಗೂ ಪ್ರಾಚಾರ್ಯ ಫಿಲಿಪ್ ಥಾಮಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂಧರ್ಬದಲ್ಲಿ ಶಾಲಾ ವಿದ್ಯಾರ್ಥಿಗಳೀಂದ ಪ್ರಸಕ್ತ ಸಂಧರ್ಭದಲ್ಲಿ ವೈದ್ಯರ ಪಾತ್ರದ ಕುರಿತು ಅಣಕು ಪ್ರದರ್ಶನ ನಡೆಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

