ಢವಳಗಿ: ಸಮೀಪದ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುವ ಶ್ರೀ ಮಾತೋಶ್ರೀ ಶಿವಲಿಂಗಮ್ಮ ಬ ನಾಡಗೌಡರ ಅವರ ಅನುದಾನಿತ ಶಾಲೆಗೆ ಸುಮಾರು 60 ಎಕರೆ ಭೂಮಿಯನ್ನು ದಾನ ಮಾಡಿದ ಶಿವಲಿಂಗಮ್ಮ ಬ ನಾಡಗೌಡರ ಅವರ 39 ನೇ ಪುಣ್ಯಸ್ಮರಣೆಯ ಆಚರಣೆಯನ್ನು ಗುರುವಾರದಂದು ಬಸರಕೋಡ ಗ್ರಾಮದ ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ಅಡುಗೆ ಮಾಡಿಸಿದ್ದರು. ಮಾ.ಶಿ.ಬ.ನಾಡಗೌಡರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎಸ್ ಬಿ ನಾಡಗೌಡರ(ಧಣಿ), ಎಸ್ ಎಮ್ ಸೂಳಿಬಾಯಿ, ಬಾಬು ಸೂಳಿಬಾಯಿ(ಧಣಿ), ವರುಣ ನಾಡಗೌಡರ ಗ್ರಾಮ ಪಂಚಾಯತಿ ಸದಸ್ಯರು, ಕಾಶಿನಾಥ ಸೂಳಿಬಾಯಿ ಸೇರಿದಂತೆ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

