ಕೆಂಭಾವಿ: ರಾಜ್ಯಾದ್ಯಂತ ಡ್ಯೆಂಗ್ಯು, ಚಿಕನ್ ಗುನ್ಯಾ ಮತ್ತು ಮಲೇರಿಯ ಪ್ರಖರಣಗಳು ಹೆಚ್ಚಾಗುತ್ತಿದ್ದು ಜಿಲ್ಲಾ ಹಾಗೂ ತಾಲ್ಲೂಕು ಸರಕಾರಿ ಆಸ್ಪತ್ರೆಗಳು ರೋಗಿಗಳ ಸೇವೆಗೆ ಸನ್ನದ್ದವಾಗಿವೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಾವೆಂಕಪ್ಪ ನಾಯಕ್ ಅವರು ಹೇಳಿದರು.
ಪಟ್ಟಣದ ಸಮೀಪ ಗುತ್ತಿಬಸವೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮೇಳವನ್ನು ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಳೆಗಾಲ ಆರಂಭವಾದ ಕಾರಣ ಸಾರ್ವಜನಿಕರು ಮನೆಯ ಸುತ್ತ ಮುತ್ತಲಿನ ವಾತಾವರಣ ಸ್ವಚ್ಚತೆಯ ಜೊತೆ ಮನೆಗಳಲ್ಲಿ ನೀರನ್ನು ಟ್ಯಾಂಕರ್, ಕ್ಯಾನ್, ಬಿಂದಿಗೆಯಲ್ಲಿ ಶೇಕರಿಸಿ ಇಡುವವರು ಸ್ವಚ್ಚವಾಗಿಡಲು ತಿಳಿಸುತ್ತಾ. ಆರೋಗ್ಯದ ಹಿತ ದೃಷ್ಟಿಯಿಂದ ವಿಷಪುರಿತ ಆಹಾರವನ್ನು ಸೇವನೆ ಮಾಡದಿರಲು ಸಲಹೆ ನೀಡಿದವರು.
ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡದೆ ದಿನದ ಇಪ್ಪತ್ನಾಲ್ಕು ಗಂಟೆ ಸಾರ್ವಜನಿಕರ ಸೇವೆಗೆ ಇಲಾಖೆ ಬದ್ಧವಾಗಿದೆ ಎಂದರು.
ಇದೇ ವೇಳೆ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಮಲ್ಲಪ್ಪ , ಡಾ.ಗಿರೀಶ ಕುಲ್ಕರ್ಣಿ, ಡಾ. ಸಿದ್ದು ನ್ಯಾಮಗೊಂಡ, ಡಾ ಪ್ರಿಯಾಂಕ ಹಾಗೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಉಚಿತ ಮೇಳದಲ್ಲಿ
ಪಾರ್ಶ್ವವಾಯು, ಮಧುಮೇಹ, ಅಸ್ತಮಾ, ಶ್ವಾಸಕೋಶದ ಕಾಯಲೆಗಳು, ಗರ್ಭಿಣಿಯರ ತಪಾಸಣೆ, ಅನಿಮಿಯಾ, ಕಣ್ಣಿನ ತಪಾಸಣೆ, ರಕ್ತದೊತ್ತಡ, ಕಫ ಪರೀಕ್ಷೆ, ಇನ್ನಿತರ ಆರೋಗ್ಯ ತಪಾಸಣೆ ಮಾಡುವುದರೊಂದಿಗೆ ಉಚಿತವಾಗಿ ಔಷಧಿ ನೀಡಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

