ವಿಜಯಪುರ: ನಗರದಲ್ಲಿ ಶುಕ್ರವಾರ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಭೂಮಿಪೂಜೆ ನೆರವೇರಿಸಿದರು.
ಮಹಾನಗರ ಪಾಲಿಕೆ ವಾರ್ಡ ನಂ.೩೨ ರ ವ್ಯಾಪ್ತಿಯ ಅಗಸರ ಓಣಿಯಲ್ಲಿ ಲೋಕೋಪಯೋಗಿ ಇಲಾಖೆಯ ರೂ.೧ ಕೋಟಿ ಅನುದಾನದಲ್ಲಿ ಜೋರಾಪುರ ಪೇಟ, ಬಣಗಾರ ಓಣಿ ಹಾಗೂ ಅಗಸರ ಓಣಿಯಲ್ಲಿ ಆಂತರಿಕ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಭೂಮಿಪೂಜೆಯ ಬಳಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಪರಿಹರಿಸುವ ಭರವಸೆ ನೀಡಿದ ಶಾಸಕರು, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಮಹೇಶ ಹೆರಲಗಿ, ಸೂರಪ್ಪ ಮಿರ್ಜಿ, ರಾಜಶೇಖರ ಹುಣಶ್ಯಾಳ, ಸತೀಶ ಅಗಸರ, ಶಶಿಕಾಂತ ಜವಳಿ, ಆನಂದ ಸಲ್ಪೇಕರ, ಶಿವಾನಂದ ಗಿಡವೀರ, ವಿನೋದ ತೆಲಸಂಗ, ದ್ರಾಕ್ಷಾಯಣಿ ಮಠಪತಿ, ಮಲ್ಲಮ್ಮ ಜೋಗೂರ, ಗೀತಾ ಗಿಡವೀರ, ಅನೀತಾ ಕೇಶೆಟ್ಟಿ, ಲಿಂಗರಾಜ ಶಹಾಪುರ, ಪ್ರಶಾಂತ ಕೇಶೆಟ್ಟಿ, ಶ್ರೀಶೈಲ ಅಗಸರ, ಶಂಕರ ಬನ್ನೂರ, ಸುಧಾಕರ ಹಿರೇಮಠ, ಉಮಾಕಾಂತ ಹೆರಲಗಿ, ದಿನೇಶ ಅಗಸರ, ವಿರೇಶ ಹಿರೇಮಠ, ಸುವರ್ಣ ಕುರ್ಲೆ, ಸ್ಮೀತಾ ಹುಣಶ್ಯಾಳ, ಪಾವಡೆಪ್ಪ ಗಿಡವೀರ, ಈರಪ್ಪ ಕುರ್ಲೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

