ಸಿಂದಗಿ: ವಿಜಯಪುರ ಜಿಲ್ಲೆಗೆ ಭೋವಿ ಅಭಿವೃದ್ದಿ ನಿಗಮದಿಂದ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು. ಈ ಸಮುದಾಯದ ಜನ ಹೆಚ್ಚು ಆರ್ಥಿಕ ಸ್ಥಿತಿವಂತರಲ್ಲ ಎಂದು ಸಿಂದಗಿ ಭೋವಿ ಸಮುದಾಯದ ಮುಖಂಡೆ ಸುನಂದಾ ಯಂಪೂರೆ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಭೋವಿ ಸಮುದಾಯದ ಜನರಿಗೆ ಸರ್ಕಾರದಿಂದ ಸೂಕ್ತವಾದ ಯೋಜನೆಗಳನ್ನು ನಿರ್ಮಾಣ ಮಾಡಿ ಜನತೆಗೆ ಅನುಕೂಲ ಮಾಡಬೇಕು. ಮತ್ತು ಈ ಸಮುದಾಯದ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಿದ್ದಲ್ಲಿ ಅವರ ಕುಟುಂಬ ಹೆಚ್ಚು ಪ್ರಗತಿಯಾಗಲಿದೆ. ಪ್ರತಿ ೬ ತಿಂಗಳಿಗೊಮ್ಮೆ ಜಿಲ್ಲಾವಾರು ಸಭೆ ಮಾಡಿ ಸಮುದಾಯದ ಸಮಸ್ಯೆಗಳನ್ನು ಆಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಹಾದೇವಿ ವಡ್ಡರ, ಮುದುಕು ಮಂಜ್ಯಾಳಕರ, ಭೀಮು ಶಿರಸಗಿ, ಹಣಮಂತ ಬಂಡಿವಡ್ಡರ, ಹಣಮಂತ ಬೆಳಗಲ್ಲ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

