ವಿಜಯಪುರ: ಬಸವನಬಾಗೇವಾಡಿ ೨೨೦/೧೧೦/೧೧ ಕೆವ್ಹಿ ಸ್ವೀಕರಣಾ ಕೇಂದ್ರದಲ್ಲಿ ಜೂ.೨೪ ರಂದು ಮೊದಲನೇ ತ್ರೆöÊಮಾಸಿಕ ನಿರ್ವಹಣಾ ಕಾರ್ಯ ಮತ್ತು ಬಸ ಕಪ್ಲರ್ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಸದರಿ ಸ್ವೀಕರಣಾ ಕೇಂದ್ರದ ಮೇಲೆ ಬರುವ ೧೧೦ ಕೆವ್ಹಿ ಮಾರ್ಗಗಳಿಗೆ ಅಂದು ಬೆಳಿಗ್ಗೆ ೮ ರಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜೂ.೨೪ರಂದು ೧೧೦ ಕೆವ್ಹಿ ಮಾರ್ಗಗಳಲ್ಲಿ ಬರುವ ಮಮದಾಪುರ, ಬೆಳ್ಳುಬ್ಬಿ, ಶಿರಬೂರ, ದೇವರಗೆಣ್ಣೂರ, ಬಬಲೇಶ್ವರ, ಕಂಬಾಗಿ, ಮಟ್ಟಿಹಾಳ, ಮಲಘಾಣ, ರೋಣಿಹಾಳ, ಮುದ್ದೇಬಿಹಾಳ, ಹಿರೇಮುರಾಳ, ದೇವರಹಿಪ್ಪರಗಿ, ಉಕ್ಕಲಿ, ನಂದಿಹಾಳ, ಅಥರ್ಗಾ ಮತ್ತು ಹಿರೆಮಸಳಿ ೧೧೦ಕೆವ್ಹಿ ಉಪ ಕೇಂದ್ರಗಳಲ್ಲಿಯು ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಮದ ೩೩ ಕೆವ್ಹಿ ಮನಗೂಳಿ, ಮುತ್ತಗಿ, ಹೂವಿನಹಿಪ್ಪರಗಿ, ಢವಳಗಿ, ತಂಗಡಗಿ, ನಾತಲವಾಡ, ಕೋಲಾರ ನೀರು ಸರಬರಾಜು ಮಾರ್ಗ, ಕಾರಜೊಳ ಎಲ್.ಆಯ್.ಎಸ್. ದೇವರಗೆಣ್ಣೂರ, ಲಿಂಗದಳ್ಳಿ ಎಲ್ಆಯ್ಎಸ್, ಕೋರವಾರ ಹಾಗೂ ಕಡ್ಲೇವಾಡ ವಿದ್ಯುತ್ ಉಪ ಕೇಂದ್ರಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಅಧಿಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
