ಇಂಡಿ: ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಸರ್ವಸಮುದಾಯದ ಮೇಲೆ ಅಪಾರ ಪ್ರೀತಿ,ಕಾಳಜಿ ಹೊಂದಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ದಿಯ ಕನಸು ಹೊತ್ತಿರುವ ಅವರಿಗೆ ಜಿಲ್ಲೆಯ ಎಲ್ಲ ಸಮುದಾಯದವರು ಬೆಂಬಲ ನೀಡುವುದರ ಮೂಲಕ ಅವರು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗುತ್ತಾರೆ.ತಾಲೂಕಿನಲ್ಲಿ ಮುಸ್ಲೀಮ ಸಮುದಾಯದ ಹಲವು ಜನರಿಗೆ ಚಿರಪರಿಚಿತರಾಗಿರುವ ಅವರಿಗೆ ಮುಸ್ಲೀಮ ಸಮುದಾಯದ ಬಹುತೇಕ ಮತಗಳು ಲಭಿಸಲಿವೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೊರ್ಚಾ ತಾಲೂಕು ಉಪಾಧ್ಯಕ್ಷ ಸಿಕಂದರ ಬೊರಾಮಣಿ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯಿಂದ ಯಾರಿಗೂ ಅನ್ಯಾಯವಾಗಿಲ್ಲ. ಜಿಲ್ಲೆಯಲ್ಲಿ ಸರ್ವಸಮುದಾಯದವರು ಶಾಂತಿಯುತವಾಗಿ,ಅನೋನ್ಯತೆಯಿಂದ ಇರಬೇಕಾದರೆ ಅದಕ್ಕೆ ಕಾರಣ ರಮೇಶ ಜಿಗಜಿಣಗಿ ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಮುಸ್ಲೀಮ ಸಮುದಾಯವನ್ನು ಕೇವಲ ಮತಕ್ಕಾಗಿ ಬಳಕೆ ಮಾಡಿಕೊಂಡು, ಅವರ ಅಭಿವೃದ್ದಿಗಾಗಿ ಕಿಂಚತ್ತೂ ಚಿಂತನೆ ಮಾಡಿರುವುದಿಲ್ಲ. ರಮೇಶ ಜಿಗಜಿಣಗಿ ಅವರು ಸಭ್ಯ, ಸರಳ, ಸೌಜನ್ಯಯುತ ರಾಜಕಾರಣಿಯಾಗಿದ್ದು, ರಾಜಕೀಯ ಮುತ್ಸದ್ದಿಯಾಗಿ,ಅಜಾತಶತ್ರುವಾಗಿ ಜಿಲ್ಲೆ,ನಾಡಿನಲ್ಲಿ ರಾಜಕಾರಣ ಮಾಡುತ್ತಿದ್ದು, ಅವರ ಗೆಲುವು ನಿಶ್ಚೀತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

