ಬಸವನಬಾಗೇವಾಡಿ: ಪಟ್ಟಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆಯನ್ನು ಶುಕ್ರವಾರ ಕೈಗೊಂಡರು. ಪ್ರತಿಯೊಂದು ಮನೆಗೆ ತೆರಳಿ ನೀರು ಸಂಗ್ರಹ ಮಾಡುವ ತಾಣಗಳನ್ನು ವೀಕ್ಷಿಸಿದರು.
ಲಾರ್ವಾ ಇರುವ ತಾಣಗಳನ್ನು ಖಾಲಿ ಮಾಡಿಸಿ ಜನರಿಗೆ ನೀರು ಸಂಗ್ರಹ ಮಾಡುವ ತಾಣಗಳನ್ನು ಆಗಾಗ ಸ್ವಚ್ಛ ಗೊಳಿಸುವಂತೆ ಹೇಳುವ ಮೂಲಕ ಜನರು ತಮ್ಮ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬೇಕು. ಲಾರ್ವಾ ಬಿಟ್ಟರೆ ಡೆಂಗ್ಯೂದಂತಹ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಜನರು ಆರೋಗ್ಯ ಸಂರಕ್ಷಣೆಯ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ ಹದಿಮೂರ ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಬಾಗೇವಾಡಿ, ಸೋಮೇಶ ಮಾನಶೆಟ್ಟಿ, ಶಿವಾನಂದ ಕಾಖಂಡಕಿ, ಮಲೇರಿಯಾ ತಂತ್ರಜ್ಞ ಮೇಲ್ವಿಚಾರಕ ಸಂಜು ಸಜ್ಜನ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

