ದೇವರಹಿಪ್ಪರಗಿ: ದೇಶದ ಸಮಸ್ತ ಜನತೆಗೆ ನೀಡಿದ ಎಲ್ಲಾ ಭರವಸೆಗಳು ಸೇರಿದಂತೆ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮೂರನೆಯ ಬಾರಿಗೆ ಪ್ರಧಾನಿ ಮೋದಿಜಿ ಗದ್ದುಗೆಯೇರುವುದು ನಿಶ್ಚಿತ ಎಂದು ವಿಜಯಪುರ ಮತಕ್ಷೇತ್ರದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.
ಪಟ್ಟಣದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪ್ರಚಾರದ ಅಂಗವಾಗಿ ಜರುಗಿದ ರೋಡ್ ಶೋದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಇಂದು ಭಾರತ ಪ್ರಬಲ ಆರ್ಥಿಕಶಕ್ತಿಯಾಗಿ ಬೆಳೆದು ನಿಂತಿದೆ. ನೆರೆಯ ಬದ್ಧವೈರಿ ಪಾಕಿಸ್ತಾನ ಜನತೆ ಕೂಡಾ ಮೋದಿಯವರನ್ನು ಕೊಂಡಾಡುತ್ತಿದೆ. ಇಂದು ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಕಾಂಗ್ರೆಸ್ ಅವಕಾಶ ನೀಡುತ್ತಿದೆ. ಇದಕ್ಕೆ ವಿಧಾನಸೌಧದಲ್ಲಿ ವಿರೋಧಿ ರಾಷ್ಟçಪರ ಜಿಂದಾಬಾದ್ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನೀಯ ಹತ್ಯೆ ಪ್ರಕರಣಗಳೇ ಸಾಕ್ಷಿ. ಇಂಥ ಘಟನೆಗಳನ್ನು ಕಾಂಗ್ರೆಸ್ ನಾಯಕರು ಪದೇಪದೇ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷದ ದೇಶ ವಿರೋಧಿನೀತಿಗೆ ನಿದರ್ಶನವಾಗಿದೆ ಎಂದು ಹೇಳುತ್ತಾ ಡಿ.ಕೆ.ಶಿವಕುಮಾರ, ಶಿವಾನಂದ ಪಾಟೀಲರ ಹೇಳಿಕೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ನೋಟ್ಬ್ಯಾನ್ ನಂತರ ಪಾಕಿಸ್ತಾನದ ದಿವಾಳಿತನ, ಪಾಕಿಸ್ತಾನದಲ್ಲಿ ಆಗುತ್ತಿರುವ ಭಾರತ ವಿರೋಧಿ ಭಯೋತ್ಪಾದಕರ ಮಾರಣ ಹೋಮದ ಕುರಿತು ಮಾತನಾಡಿ ಮೂರನೆಯ ಬಾರಿಗೆ ಮೋದಿಜಿ ಪ್ರಧಾನಿಯಾಗುವುದು ನಿಶ್ಚಿತ ಆದ್ದರಿಂದ ಬಿಜೆಪಿ ಬೆಂಬಲಿಸಲು ಕರೆ ನೀಡಿದರು.
ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮಾತನಾಡಿ, ಧರ್ಮ ಹಾಗೂ ಅಧರ್ಮಗಳ ನಡುವಿನ ಹೋರಾಟದಲ್ಲಿ ಧರ್ಮದ ಪರ ನಿಲ್ಲಬೇಕಾಗಿದೆ. ಆದ್ದರಿಂದ ತಾವೆಲ್ಲ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸಮೃದ್ಧ, ಸಶಕ್ತ ಭಾರತ ನಿರ್ಮಾಣಕ್ಕಾಗಿ ರಮೇಶ ಜಿಗಜಿಣಗಿ ಅವರಿಗೆ ಮತ ನೀಡೋಣ ಎಂದರು.
ರೋಡ್ ಶೋ ಆರಂಭದಲ್ಲಿ ಬಿಜೆಪಿ ಪ್ರಮುಖರಾದ ಬಸನಗೌಡ ಪಾಟೀಲ(ನಾಗರಾಳ ಹುಲಿ), ಪ್ರಭುಗೌಡ ಬಿರಾದಾರ(ಅಸ್ಕಿ), ಸಿದ್ದು ಬುಳ್ಳಾ, ಶಿಲ್ಪಾ ಕುದರಗೊಂಡ, ಶಿವರಾಜ ತಳವಾರ ಮಾತನಾಡಿದರು. ಸುಡುಬಿಸಿಲಿನಲ್ಲಿ ಆರಂಭವಾದ ರೋಡ್ ಶೋ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾದು ಕರಿಸಿದ್ಧೇಶ್ವರ ದೇವಸ್ಥಾನದ ಮುಂದೆ ಸಮಾರೋಪಗೊಂಡಿತು.
ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಮತಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸಾಯಬಣ್ಣ ಬಾಗೇವಾಡಿ, ಭೀಮನಗೌಡ ಸಿದರಡ್ಡಿ, ಕಾಸುಗೌಡ ಜಲಕತ್ತಿ, ಗಾಯತ್ರಿ ದೇವೂರ, ಪ್ರಕಾಶ ದೊಡಮನಿ, ಭೀಮನಗೌಡ ಲಚ್ಯಾಣ, ಸೋಮಶೇಖರ ಹಿರೇಮಠ, ಸೋಮು ದೇವೂರ, ಮಹಾಂತೇಶ ಬಿರಾದಾರ, ಶ್ರೀಮಂತ ತಳವಾರ, ಬಸವರಾಜ ಕಲ್ಲೂರ, ಬಾಬುಗೌಡ ಹರನಾಳ, ಕಾಶೀಪತಿ ಕುದರಿ, ಸುನೀಲ ಮಾಗಿ ಸೇರಿದಂತೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

