ಸಿಂದಗಿ: ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಮಿಕ ದಿನದ ಉದ್ದೇಶ ಎಂದು ಡಿವಾಯ್ಎಫ್ಐ ತಾಲೂಕ ಅಧ್ಯಕ್ಷ ರಮೇಶ ಸಾಸಾಬಾಳ ಹೇಳಿದರು.
ತಾಲೂಕಿನ ಬೋರಗಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರ ಮಧ್ಯದಲ್ಲಿ ಸಿಐಟಿಯು ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕ ವರ್ಗದ ಕೊಡುಗೆಯನ್ನು ಸ್ಮರಿಸಲು ಮತ್ತು ತೀವ್ರ ಹಾಗೂ ಅಸುರಕ್ಷಿತ ಪರಿಸರದಲ್ಲಿ ಕಾರ್ಯನಿರ್ವಹಿಸುವವರ ಕಷ್ಟಗಳನ್ನು ಆಲಿಸಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಿಐಟಿಯು ತಾಲೂಕಾಧ್ಯಕ್ಷೆ ಪ್ರತಿಭಾ ಕೂರಡಿ. ಸರಸ್ವತಿ ಮಠ, ಬಿಸಿ ಊಟದ ತಾಲೂಧ್ಯಕ್ಷೆ ಬಿಸ್ಮಿಲ್ಲಾ, ಬೋರಗಿ ಗ್ರಾಮದ ಶಾಂಭವಿ, ಗುರುಬಾಯಿ, ಬಸವರಾಜ, ಸಾವಿತ್ರಿ ಬಡಿಗೇರ ಸೇರಿದಂತೆ ನರೇಗಾ ಕೂಲಿ ಕಾರ್ಮಿಕರು, ಸಿಯುಟಿಐ ಮತ್ತು ಡಿವಾಯ್ಎಫ್ಐನ್ ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

