ಕೆರುಟಗಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ | ಸಿಂದಗಿ-ಕಲಕೇರಿ ರಸ್ತೆ ಬಂದ್ ಮಾಡಿ ಧರಣಿ ಸತ್ಯಾಗ್ರಹ
ಕಲಕೇರಿ: ಸಮೀಪದ ಕೆರುಟಗಿ ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಹಾಗೂ ವಲಯ ಶಾಖೆ ಕಲಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕೆರುಟಗಿ ಗ್ರಾಮದಲ್ಲಿ ಸಿಂದಗಿ-ಕಲಕೇರಿ ಮುಖ್ಯರಸ್ತೆ ಬಂದ ಮಾಡಿ ಪ್ರತಿಭಟನೆ ಮಾಡಲಾಯಿತು.
ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿದ್ದು, ಸ್ಥಳೀಯ ಆಡಳಿತ ಹಾಗೂ ತಾಲೂಕಾ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ, ಕರ್ನಾಟಕ ಸರ್ಕಾರ ಬೇಸಿಗೆಯ ಕಾಲದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯೋಜನೆಗಳನ್ನು ರೂಪಿಸಿದ್ದು ಹಾಗೂ ವಿಶೇಷ ಅನುದಾನ ಮಂಜೂರಾತಿ ಇದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳು ಗತಿಸಿದರೂ ಸಾರ್ವಜನಿಕರಿಗೆ ಕುಡಿಯುವ ನೀರಿನ್ನು ಒದಗಿಸಲು ಆಗುತ್ತಿಲ್ಲ, ಇದು ಇಂದಿನ ಸರ್ಕಾರಕ್ಕೆ ಮತ್ತು ಗ್ರಾಮಾಡಳಿತಕ್ಕೆ ನಾಚಿಕೆಯಾಗುವ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ವ್ಯವಸ್ಥೆ ಖಂಡಿಸಿ ಖಾಲಿ ಕೊಡಗಳನ್ನು ಇಟ್ಟುಕೊಂಡು ಮಹಿಳೆಯರು ಹಾಗೂ ಗ್ರಾಮಸ್ಥರು ಸುಮಾರು ಮೂರು ಗಂಟೆಗಳ ಕಾಲ ಸಿಂದಗಿ – ಕಲಕೇರಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಸುಡು ಬಿಸಿಲನ್ನು ಲೆಕ್ಕಿಸದೇ ರಸ್ತೆ ರೋಕೋ ಚಳುವಳಿ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಜೀವ ತಗೊಳ್ಳಿ, ಇಲ್ಲ ನೀರು ಕೊಡಿ ಎಂದು ಆಗ್ರಹಿಸಿದ ಗ್ರಾಮಸ್ಥರು ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಎಂ ಟಿ ಅಂಗಡಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡರು, ಮಾಜಿ ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ಸರ್ಕಾರಿ ಜಿವೋಲಿಸ್ಟ ಬಸವರಾಜ ಚಿಕ್ಕಸಂಸಿ, ಪರಸುರಾಮ ಬಡಿಗೇರ, ಶಿವಾನಂದ ವಾಲೀಕಾರ, ಅಶೋಕ್ ಗುಡಿಸಲಮನಿ, ರಾಮನಗೌಡ ಚಟ್ಟರಕಿ, ಸಿದ್ರಾಮಪ್ಪ ಮಾದರ, ಪರಸುರಾಮ ದೊಡಮನಿ, ಬಾಬು ಮೇಲಿನಮನಿ, ಬಾಬು ರಾಠೋಡ, ಚಂದ್ರು ಬಡಿಗೇರ, ಮುತ್ತು ಅಂಬಳನೂರ, ಪ್ರಕಾಶ್ ಪಡಶೆಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.

