ಇಂಡಿ: ಇತ್ತೀಚೆಗೆ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಸಿಕ್ಕಿಕೊಂಡಿದ್ದ ಬಾಲಕ ಸಾತ್ವಿಕನನ್ನು ಉಳಿಸಿಕೊಳ್ಳುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಇಂಡಿ ತಾಲೂಕ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಅವರನ್ನು ಲಚ್ಯಾಣ ಡಿಎಡ್ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಸಾಮಾಜಿಕ ಕಳಕಳಿಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ ಗೆಳೆಯರ ಬಳಗದ ಬಸವರಾಜ ಬಬಲಾದ, ಗೋಪಾಲ ಜಾಧವ, ಬಾಳು ಪೂಜಾರಿ, ಸುಲೆಮಾನ್ ಕಸಾಯಿ, ಮಲ್ಲಿಕಾರ್ಜುನ ಜ್ಯಾಮಗೊಂಡ, ವೀರಭದ್ರಯ್ಯ ಮಠ, ಪ್ರಕಾಶ ಗೋಡೆಕರ, ಸಂತೋಷ ಪಾಟೀಲ, ಸಂಗಮೇಶ ಮುಜಗೊಂಡ, ಅಬ್ದುಲ್ ಗಣಿ ಮುಜಾವರ, ಅಪ್ಪು ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

