ಇಂಡಿ: ಎರಡು ಬಾರಿ ಪ್ರಧಾನಿಯಾಗಿ, ಮೂರು ಬಾರಿ ಗುಜರಾತ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನರೇಂದ್ರ ಮೋದಿ ಅವರ ನಾಯಕತ್ವ ದೇಶದ ಭದ್ರತೆ ವಿಚಾರದಲ್ಲಿ ಅನಿವಾರ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ವಾರ್ಡ ನಂ,೧೨ರಲ್ಲಿ ಬಿಜೆಪಿ ವಿಜಯಪೂರ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿಯವರ ಪರವಾಗಿ ತಯಾಚನೆ ಮಾಡಿ ಮಾತನಾಡಿದರು.
ಸಂಸದ ರಮೇಶ ಜಿಗಜಿಣಗಿ ಸರ್ವಜನಾಂಗವನ್ನು ಪ್ರೀತಿ, ವಿಶ್ವಾದಿಂದ ಕಾಣುವ ಹೃದಯವಂತ ರಾಜಕಾರಣಿ, ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿಪರ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೇ ಓರ್ ಬ್ರೀಜ್, ನೀರಾವರಿ ಯೋಜನೆಗಳು , ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳ ಹೊಳೆಯನ್ನೆ ಹರಿಸಿದ್ದಾರೆ. ಕಾರಣ ಅವರಿಗೆ ಇದೊಂದು ಬಾರಿ ಅರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.
ಅನೀಲಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ದೇವೇಂದ್ರ ಕುಂಬಾರ, ಶಿವು ಬಗಲಿ, ಅಶೋಕಗೌಡ ಬಿರಾದಾರ, ಮಹೇಶ ಹೂಗಾರ, ಸುನಂದಾ ಗಿರಣಿವಡ್ಡರ, ವಿಜಯಲಕ್ಷ್ಮಿ ರೂಗಿಮಠ, ಅನುಸುಯ್ಯಾ ಮದರಿ, ಸುನೀಲ ಕಾಲೇಬಾಗ, ಮಲ್ಲು ವಾಲೀಕಾರ, ಸಚೀನ ಬೊಳೇಗಾಂವ್, ದತ್ತಾ ಬಂಡೇನವರ್ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

