ಗೋಲಗೇರಿ: ಸಿಂದಗಿ ತಾಲ್ಲೂಕಿನ ಸುಕ್ಷೇತ್ರ ಗೋಲಗೇರಿ ಶ್ರೀ ಗೋಲ್ಲಾಳೇಶ್ವರ ಜಾತ್ರಾ ಹಾಗೂ ಭವ್ಯ ರಥೋತ್ಸವದ ಅಂಗವಾಗಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.
ಈ ಸಭೆಯಲ್ಲಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಹೊಳೆಪ್ಪ ಶರಣರು ದೇವರಮನಿ, ರವಿರಾಜ ದೇವರಮನಿ, ಕಲಕೇರಿ ಪೋಲಿಸ್ ಠಾಣೆ ಪೋಲಿಸ್ ಸಬ್ ಇನ್ಸಪೆಕ್ಟರ್ ರೋಹಿಣಿ ಪಾಟೀಲ, ಕೆಡಿಪಿ ಸದಸ್ಯ ಶಿವಯೋಗೆಪ್ಪ ಹತ್ತರಕಿ, ಎ.ಡಿ.ಕೋರವಾರ, ಗೌಡಣ್ಣ ಆಲಮೇಲ, ದಯಾನಂದ ಮಠ, ಗೌತಮ ಮೇಟಿ ಮಾತನಾಡಿ, ಜಾತ್ರೆ ಸುಗಮವಾಗಿ ನಡೆಯಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಭೆಯಲ್ಲಿ ಗೋಲಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷರ ಪ್ರತಿನಿಧಿ ಸೈಪನ್ ಕೋರವಾರ, ಬಸವರಾಜ ಮಾರಲಭಾವಿ, ಮಡಿವಾಳ ನಾಯ್ಕೋಡಿ, ಶಿವಪುತ್ರ ಕರ್ನಾಳ, ವಿಶ್ವರಾಧ್ಯ ಮಠ, ಸಲೀಮ್ ಭಾಗವಾನ, ನಿಂಗನಗೌಡ ಬಿರಾದಾರ, ಮಹಾಂತೇಶ ಸಾತಿಹಾಳ, ದವಲಸಾಬ ಮನಿಯಾರ, ಗೌಡಣ್ಣಬಜಂತ್ರಿ, ಶರಣಗೌಡ ಬಿರಾದಾರ,ಮಂಜುನಾಥ ನಾಯ್ಕೋಡಿ, ರಮೇಶ ತಳವಾರ, ಶಿವರಾಜ ತಳವಾರ, ಭಾಗಣ್ಣ ಕೋಟೆಗೋಳ ಸೇರಿದಂತೆ ಗೋಲಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಲಕೇರಿ ಪೋಲಿಸ್ ಪೇದೆ ದೇವೆಂದ್ರ ಹುಲಂಕಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

