ವಿಜಯಪುರ: ನೆಹರು ಯುವ ಕೇಂದ್ರ, ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಹಾಗೂ ಸಖಿ ಮಹಿಳಾ ಸೇವಾ ಸಮಿತಿ ವತಿಯಿಂದ ಆಯೋಜಿಸಲಾದ ಮತದಾನ ಜಾಗತಿಕ ಹಾಗೂ ನೋಂದಣಿ ಕಾರ್ಯಕ್ರಮ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸೋಮವಾರ ಶ್ರೀಮತಿ ಕುಮುದುಬಿನ್ ದರ್ಬಾರ್ ಕಾಲೇಜಿನಲ್ಲಿ ಎಲ್ಲ ಯುವ ಮಿತ್ರರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಖಿ ಸಂಸ್ಥೆಯ ಅದ್ಯಕ್ಷೆ ಪೂಜಾ ಬಾಗಿ ಮಾತನಾಡಿ, ಮತದಾನ ನಮ್ಮ ಹಕ್ಕು ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರು ಬಾಗಿಯಾಗೋಣ, ಯುವ ಸಮೂಹ ದೇಶದ ಬದಲಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಗ್ರಾಮ ಪುರೋಹಿತ್ & ಬಂದೆನವಾಜ ಕುರುಬು ಸರ್ ಅವರು ಅತಿಥಿ ಉಪನ್ಯಾಸ ಮಾಡಿದರು.
ರಾಮಚಂದ್ರ ಚವ್ಹಾಣ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

