ಮುದ್ದೇಬಿಹಾಳ: ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ಕೊನೆಯ ದಿನವಾದ ಮಾ.೭ ರಂದು ಬೆಳಿಗ್ಗೆ ೭ ರಿಂದ ಪಟ್ಟಾಧಿಕಾರದ ವಿಧಿ ವಿಧಾನಗಳು ಜರುಗುವವು.
ಶ್ರೀ ರಂಭಾಪುರಿ ಜಗದ್ಗುರುಗಳ ಸನ್ನಿಧಿಯಲ್ಲಿ ಆಗಮಿಸಿದ ಶಿವಾಚಾರ್ಯರ ಸಮ್ಮುಖದಲ್ಲಿ ಕಂಕಣಧಾರಣೆ, ಹರಿದ್ರಾಲೇಪನ ಮಂಗಲದ್ರವ್ಯಯುಕ್ತ ಮಹಾಮಸ್ತಾಕಾಭಿಷೇಕ, ತಿಲಕದಾರಣೆ, ಮಂಗಲಾಕ್ಷತೆಗಳಿಂದೊಡಗೂಡಿ ಆಶೀರ್ವಾದ. ನಿಡಗುಂದಿಯ ಪರಮತಪಸ್ವಿ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಡಾ.ಚನ್ನವೀರ ದೇವರಿಗೆ ಷಟಸ್ಥಲ ಬ್ರಹ್ಮೋಪದೇಶ ಮಾಡಿ ಶಂಕ, ಗಿಳಿಲು, ಭಸ್ಮ, ಪಟ್ಟಭಂದನ, ದಂಡ, ಕಮಂಡಲ, ಪಂಚಮುದ್ರಾ ಪ್ರಧಾನ ಮಾಡಿ ಗುರು ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ನೂತನ ನಾಮ ಅನುಗ್ರಹಿಸುವರು.
ನಂತರ ಮಹೋತ್ಸವ ಹಾಗೂ ಧರ್ಮ ಸಂದೇಶ ಕಾರ್ಯಕ್ರಮ ಜರುಗುವದು.
ಸಂಜೆ ಸಮಾರಂಭಕ್ಕೆ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವ ಸನ್ಮಾನ ಜರುಗುವುದು.
Subscribe to Updates
Get the latest creative news from FooBar about art, design and business.
Related Posts
Add A Comment
