ಕೊಲ್ಹಾರ: ಸಿಂದಗಿ ಬಸ್ ಘಟಕದಿಂದ ದೇವರಹಿಪ್ಪರಗಿ ಮೂಲಕ ಕೊಲ್ಹಾರ ಪಟ್ಟಣಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಸೌಕರ್ಯವನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೊಲ್ಹಾರದ ನಾಗರಿಕರು ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಅವರಿಗೆ ಮನವಿ ಅರ್ಪಿಸಿದರು.
ಕೊಲ್ಹಾರದ ರಾಜುಗೌಡರ ಸ್ನೇಹಿತರ ಬಳಗದವರು ಶಾಸಕರ ಸ್ವಗ್ರಾಮವಾದ ಕುದರಿಸಾಲೋಡಗಿಗೆ ತೆರಳಿ ಫಲಪುಷ್ಪ ನೀಡಿ ಗೌರವಿಸಿ ಮನವಿ ಅರ್ಪಿಸಿದ ತಕ್ಷಣ ರಾಜುಗೌಡರು ವಿಜಯಪೂರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಡಿ.ಟಿ.ಓ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಎರಡು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರ ಸಾರಿಗೆ ವಾಹನವಾದ ಬಸ್ ಸೇವೆಯನ್ನು ತಕ್ಷಣವೇ ಒದಗಿಸಿಕೊಡಬೇಕೆಂದು ಸೂಚನೆ ಕೊಟ್ಟರು.
ನನ್ನ ಸ್ವಕ್ಷೇತ್ರದ ಕೇಂದ್ರಸ್ಥಳವಾದ ದೇವರಹಿಪ್ಪರಗಿ ಪಟ್ಟಣದಿಂದ ಮಾರ್ಕಬ್ಬನಹಳ್ಳಿ-ಡೋಣೂರ-ಮಸಬಿನಾಳ-ಉಕ್ಕಲಿ-ಮನಗೂಳಿ-ಕಲಗುರ್ಕಿ-ಮುಳವಾಡ-ಮಲಘಾನ-ಹಿರೇಆಸಂಗಿ-ರೋಣಿಹಾಳ-ಹಿರೇ ಗರಸಂಗಿ ಮೂಲಕ ನೂತನ ತಾಲೂಕು ಕೇಂದ್ರ ಕೊಲ್ಹಾರ ಪಟ್ಟಣಕ್ಕೆ ಒಳಮಾರ್ಗದ ರಸ್ತೆ ಸಂಪರ್ಕವಾದ ನನ್ನ ಮತಕ್ಷೇತ್ರದ ಜನರಿಗೆ ಹಾಗೂ ಬಸವನ ಬಾಗೇವಾಡಿ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾಗುವ ಬಸ್ ಸೇವೆ ಇದಾಗಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗುವದು ಆದ್ದರಿಂದ ಸಾರಿಗೆ ಅಧಿಕಾರಿಗಳು ಬಸ್ ಸೇವೆ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕೆಂದರು.
ಈ ವೇಳೆ ಕೊಲ್ಹಾರದ ಅವರ ಸ್ನೇಹಿತರ ಬಳಗದವರಾದ ನಿಂಗಪ್ಪ ಬರಗಿ, ಈರಣ್ಣ ಔರಸಂಗ, ವಿಶ್ವನಾಥ ಮೇಲಗಿರಿ, ಕಲ್ಲಪ್ಪ ಕಾಖಂಡಕಿ, ಬಸವರಾಜ ಮಮದಾಪೂರ, ಮಂಜುನಾಥ ಲಿಂಬಿಕಾಯಿ, ಪರಶುರಾಮ ಬ ಗಣಿ, ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

