Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಒಳ ಮೀಸಲಾತಿ ಹೋರಾಟದ ಹಿನ್ನೆಲೆ ಹಲವಾರು ಸಾವು ನೋವುಗಳನ್ನ ಕಂಡಿದ್ದು ಸಧ್ಯ ಮಾಡು ಇಲ್ಲವೇ ಮಡಿ ಹಂತಕ್ಕೆ ಬಂದು ತಲುಪಿದ್ದೇವೆ. ಹಾಗಾಗಿ ಮಾ.೬ ರಂದು ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮುದ್ದೇಬಿಹಾಳ ಸಂಪುರ್ಣ ಬಂದ್ ಗೆ ಕರೆ ನೀಡುತ್ತಿದ್ದೇವೆ ಎಂದು ಡಿಎಸ್‌ಎಸ್ ಚಂದ್ರಕಾಂತ ಕಾದ್ರೊಳ್ಳಿ ಬಣದ ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಂದ್ ದಿನ ಪಟ್ಟಣದ ಇಂದಿರಾ ವೃತ್ತದಲ್ಲಿ ಸಮಾಜದ ಎಲ್ಲ ಬಾಂಧವರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಅಲ್ಲಿಂದ ಮುಖ್ಯಬಜಾರ್, ಬಸವೇಶ್ವರ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ನಮ್ಮ ಹಕ್ಕುಗಳನ್ನು ಕೋರುತ್ತೇವೆ. ಈ ಬಂದ್ ಕರೆಗೆ ಪಟ್ಟಣದ ಎಲ್ಲ ಅಂಗಡಿಗಳ ಮಾಲೀಕರು ಸಂಪೂರ್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು.ಈ ವೇಳೆ ಸಂಘಟನೆಯ ರಾಜ್ಯ ಮುಖಂಡ ದುರ್ಗಪ್ಪ ದೊಡಮನಿ ಮಾತನಾಡಿ, ಒಳಮೀಸಲಾತಿ ಕೋರಿ ಈಗಾಗಲೇ ಹಲವಾರು ಹೋರಾಟಗಳನ್ನ ಮಾಡಿದ್ದೇವೆ. ಕೂಡಲಸಂಗಮದಿಂದ ಹಿಂದಿನ ಸಿಎಂ…

Read More

ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿ: ಶ್ರೀಕಂಠ ಈಶ್ವರ್ಹೆಚ್ ಡಿ ಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಜಿಲ್ಲೆಯವರೇ ಆಗಿದ್ದ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ಅವರ ಸುದೀರ್ಘ ಅವಧಿಯ ದಾಖಲೆ ಮುರಿದು ಹೆಜ್ಜೆ ಇರಿಸಿರುವ ಸಿದ್ದರಾಮಯ್ಯ, ಹಣಕಾಸು ಸಚಿವರಾಗಿ 17ನೇ ಬಾರಿಗೆ ಹಾಗೂ ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಸಹಜವಾಗಿಯೇ ತವರು ಜಿಲ್ಲೆಯಲ್ಲಿಯೂ ಹತ್ತಾರು ನಿರೀಕ್ಷೆಗಳಿದ್ದು, ಈ ಸಾಲಿನ ಬಜೆಟ್‌ನಲ್ಲಿ ವಿವಿಧ ಯೋಜನೆಗಳು ಘೋಷಣೆಯಾಗುವುದನ್ನು ಜನರು ಎದುರು ನೋಡುತ್ತಿದ್ದಾರೆ.ಕಳೆದ ಬಾರಿಯ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ನೀಡಿರುವ ಸಿಎಂ, ಈ ಬಾರಿ ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕುಡಿಯುವ ನೀರು, ಆಸ್ಪತ್ರೆಗಳ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಮೈಸೂರು ಜಿಲ್ಲೆಯ ಜನರು ಸಿದ್ದರಾಮಯ್ಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ಜನ ಸಿದ್ದರಾಮಯ್ಯ ಆಯವ್ಯಯವನ್ನೇ ಎದುರುನೋಡುತ್ತಿದ್ದಾರೆ.ರಸ್ತೆ…

Read More

ಕಲಾ ವಿಕಾಸ ಪರಿಷತ್ ನಿಂದ ಪಗ್ಮಭೂಷಣ ಪಂ.ಪುಟ್ಟರಾಜರ ೧೧೨ನೇ ಹುಟ್ಟುಹಬ್ಬ ಆಚರಣೆ ಉದಯರಶ್ಮಿ ದಿನಪತ್ರಿಕೆ ಗದಗ: ಶರಣರ ನೆನೆಯುವುದೇ ಘನಮುಕ್ತಿ ಪದಶಿವಧವಾ ಎನ್ನುವಂತೆ ಡಾ. ಪಂ. ಪುಟ್ಟರಾಜರ ಸ್ಮರಿಸಿಕೊಳ್ಳುವುದು ಮುಕ್ತಿಗೆ ಸಮಾನವಾಗಿದೆ ಎಂದು ಕಲಾ ವಿಕಾಸ ಪರಿಷತ್ತಿನ ಸಂಸ್ಥಾಪಕ ಕಾರ್ಯಾಧ್ಯಕ್ಷ ಪಂ. ಸಿ. ಕೆ. ಎಚ್. ಶಾಸ್ತ್ರಿ (ಕಡಣಿ) ಹೇಳಿದರು.ಅವರು ಮಂಗಳವಾರ ನಗರದ ವೀರಶೈವ ಜನರಲ್ ಲೈಬ್ರಿಯ ಆವರಣದಲ್ಲಿರುವ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಾಲಯದಲ್ಲಿ ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್ತು ಏರ್ಪಡಿಸಿದ್ದ, ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ೧೧೨ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿ, ಪೂಜ್ಯರ ಹುಟ್ಟುಹಬ್ಬವನ್ನು ಸುಮಾರು ೨೫ ವರ್ಷಗಳ ಹಿಂದೆ ಸಾರ್ವಜನಿಕವಾಗಿ ಆಚರಿಸುವ ಪರಂಪರೆಯನ್ನು ಹುಟ್ಟು ಹಾಕಿದ ಸಂಸ್ಥೆ ಕಲಾವಿಕಾಸ ಪರಿಷತ್ತು, ಪೂಜ್ಯರ ಸಾಹಿತ್ಯ, ಸಂಗೀತ, ಸಮಾಜಸೇವೆ ನಿರಂತರ ಸ್ಮರಣೆಗಾಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹುಟ್ಟು ಹಾಕಿ, ಎರಡು ಸಂಸ್ಥೆಗಳ ಮೂಲಕ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಗುರುಗಳ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಮಾದಿಗ ಸಮುದಾಯದ ಪ್ರಮುಖ ಬೇಡಿಕೆಯಾದ ಒಳಮೀಸಲಾತಿಯನ್ನು ಜಾರಿಗೆ ಮಾಡಬೇಕೆಂದು ಮಾದಿಗ ಸಮಾಜದ ಯುವ ಮುಖಂಡ ಪ್ರಭು ತಳಗೇರಿ ಆಗ್ರಹಿಸಿದ್ದಾರೆ.ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯ ಮಾಡಿರುವ ಅವರು, ದಲಿತ ಸಮುದಾಯದ 101 ಜಾತಿಗಳಿಗೆ ಅವರ ಜನಸಂಖ್ಯೆ ಅನುಸಾರ ಮೀಸಲಾತಿ ಸಿಗಲಿದೆ. ಕಳೆದ 40 ವರ್ಷ ಹೋರಾಟ ಮಾಡಿ ನಮ್ಮ ಹಿರಿಯರು ಸತ್ತು ಹೋಗಿದ್ದಾರೆ. ನಮ್ಮ ಮಾದಿಗರಿಗೆ ಹೊಟ್ಟೆ ಹಸಿದಿದೆ. ನಮಗೆ ಮೀಸಲಾತಿ ಕೊಡಿ. ನೀವು ಬೇರೆ ಜಾತಿಯವರಿಗೆ ಕೊಡುವುದು, ಬಿಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ, ಆಗಸ್ಟ್ 15ರೊಳಗೆ ನಮಗೆ ನ್ಯಾಯಯುತವಾಗಿ ನೀಡಬೇಕಾದ ಒಳ ಮೀಸಲಾತಿ ಘೋಷಿಸಬೇಕು‌ ಮತ್ತು ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಳ ಮೀಸಲಾತಿ ಜಾರಿಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು.ಒಳಮೀಸಲಾತಿ ಅನುಷ್ಟಾನ ಮಾಡುವ ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಈ ವಿಷಯದಲ್ಲಿ ವಿಳಂಭ ಧೋರಣೆ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ನಿಜವಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಕೂಡಲೇ…

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಕರುಳು ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗೆ ಶಾಸಕ ಅನಿಲ್ ಚಿಕ್ಕಮಾದು ಆರ್ಥಿಕ ನೆರವು ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಆರೋಗ್ಯ ಕ್ಷೇಮ ವಿಚಾರಿಸಿ ವೈಯಕ್ತಿವಾಗಿ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ತಾಲೂಕಿನ ನಾಗನಹಳ್ಳಿ ಗ್ರಾಮದ 28 ವರ್ಷದ ಜೆನ್ನಿಫರ್ ಸೋನಾಲಿಯ ಎಂಬುವರು ಕಳೆದ ಎರಡು ವರ್ಷಗಳಿಂದ ಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅದೆಷ್ಟೋ ಆಸ್ಪತ್ರೆಗಳಿಗೆ ತೋರಿಸಿದರೂ ಗುಣಮುಖರಾಗದ ಹಿನ್ನೆಲೆ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಾಸ್ಪಿಟಲ್ ದಾಖಲಾಗಿದ್ದರು. ಆದರೆ ಚಿಕಿತ್ಸಾ ವೆಚ್ಚಕ್ಕೆ ಇಲ್ಲಿಯವರೆಗೆ ೨೦ ಲಕ್ಷಕ್ಕೂ ಅಧಿಕ ತಗುಲಿದ್ದು, ಮುಂದಿನ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಕುಟುಂಬದವರು ಪರದಾಡುತ್ತಿದ್ದಾರೆ. ಇದನ್ನ ನೋಡಿದ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಮತ್ತು ಗ್ಯಾರಂಟಿ ಸಮಿತಿ ಸದಸ್ಯ ನಾಗನಹಳ್ಳಿ ಜೇಮ್ಸ್ ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೆ ತರುತ್ತಾರೆ. ತಕ್ಷಣವೇ ಶಾಸಕರು ವೈಯಕ್ತಿಕ ನೆರವು ನೀಡಿ, ಕುಟುಂಬಕ್ಕೆ ನಾನಿದ್ದೀನಿ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಸಮೀಪ ಇರುವ ಮಾಲಹಳ್ಳಿ ಗ್ರಾಮದ ರೈತ ಸಾಹೇಬಗೌಡ ಪೋಲೀಸ್ ಪಾಟೀಲ್ ಇವರ ಸುಪುತ್ರಿ ವಿದ್ಯಾಶ್ರೀ ಪಾಟೀಲ್ ವಿಜಯಪುರದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ, ಇತ್ತೀಚೆಗೆ ಉತ್ಕರ್ಷ ಯೋಗಾ ಸ್ಟಡಿ ರಿಸರ್ಚ್ ಸೆಂಟರ್ ವತಿಯಿಂದ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಯ ಸಾಧನೆಗೆ ಹಿರೇಮಠದ ಪೀಠಾಧಿಪತಿ ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು, ಉಪನ್ಯಾಸಕ ಡಾ ಯಂಕನಗೌಡ ಪಾಟೀಲ್, ಪತ್ರಕರ್ತ ಸಾಹಿತಿ ವೀರಣ್ಣ ಕಲಿಕೇರಿ, ಶಿಕ್ಷಕ ಸಾಹಿತಿ ಶರಣಯ್ಯ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಪುಸ್ತಕಾವಲೋಕನ: ಸ್ಪಾರ್ಕ್-೧ ಉದಯರಶ್ಮಿ ದಿನಪತ್ರಿಕೆ ಕೆಲವೊಮ್ಮೆ ನಮ್ಮೆಲ್ಲರ ಜೀವನದಲ್ಲಿ ಕೆಲ ಕ್ಷಣಗಳು ದಿಕ್ಕುತೋಚದ, ಹಿಡಿತ ತಪ್ಪಿದ ಅಂಧಕಾರದಂತಿರುತ್ತವೆ. ಅಂತಹ ಕಠಿಣ ಸಂದರ್ಭದಲ್ಲಿ ನಮ್ಮೊಳಗಿನ ಅಂತಃಶಕ್ತಿಯನ್ನು ಹುರಿದುಂಬಿಸಿದಾಗ ಪವಾಡಗಳು, ಸಾಧನೆಗಳು ನೆಡೆಯುತ್ತವೆ. ಆ ಕ್ಷಣದಲ್ಲಿ ಒಂದು ಸಣ್ಣ ಸ್ಪೂರ್ತಿಯ ಕಿರಣ ಸಾಕು ಬದುಕನ್ನು ಬೆಳಗಿಸಲು. ಈ ನಿಟ್ಟಿನಲ್ಲಿ ಅಂತಹ ಒಳಜ್ಯೋತಿಯನ್ನು ಹತ್ತಿಸಿ ಜಡತ್ವದಿಂದ ಸ್ಪೂರ್ತಿಯೆಡೆಗೆ ಎಬ್ಬಿಸುವ ಉದ್ದೇಶದಿಂದ ರೂಪುಗೊಂಡ ಕೃತಿಯೇ “ಸ್ಪಾರ್ಕ್-1″ ಎನ್ನಬಹುದು. ಸಕಾರಾತ್ಮಕ ಚಿಂತನೆ, ಪ್ರಾರ್ಥನೆ, ಆತ್ಮವಿಶ್ವಾಸ, ಧೈರ್ಯ ಮತ್ತು ನಿರಂತರ ಪ್ರಯತ್ನಗಳ ಮಹತ್ವವನ್ನು ಸರಳವಾದ ಪದಗಳಲ್ಲಿ ಓದುಗರ ಮನಸ್ಸಿಗೆ ತಲುಪಿಸುವ ಈ ಪುಸ್ತಕವು ಬದುಕಿನ ಮಾರ್ಗದಲ್ಲಿ ದಾರಿದೀಪದಂತೆ ಕಾರ್ಯವನ್ನು ನಿರ್ವಹಿಸುತ್ತದೆ ಎನ್ನಬಹುದು. ಪ್ರತಿಯೊಂದು ಲೇಖನವೂ ಮನಸ್ಸನ್ನು ಮುಟ್ಟುವ ಚಿಂತನೆಯಾಗಿ ಮೂಡಿಬಂದಿವೆ. “ನಿರಾಸೆಯ ನಡುವೆ ನಮ್ಮ ಆಸೆಗಳನ್ನು, ಸೋಲಿನ ನಡುವೆ ಹೊಸ ಆರಂಭವನ್ನು ಕಂಡುಕೊಳ್ಳುವ ಶಕ್ತಿಯನು” ನೀಡುವ ಈ ಸರಳ ಕೃತಿ ಓದುಗರೊಳಗಿನ ನಂಬಿಕೆಯನ್ನು ಜಾಗೃತಗೊಳಿಸಿ, “ನಿನ್ನೊಳಗೇ ಶಕ್ತಿ ಇದೆ” ಎಂಬ ಸಂದೇಶವನ್ನು ಮನಮುಟ್ಟುವಂತೆ ಹೇಳುವ ಮೂಲಕ ಕೇವಲ ಓದಲು ಮಾತ್ರವಲ್ಲ…

Read More

ಲೇಖನ- ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹದಿಹರೆಯದ ವಯಸ್ಸಿನಲ್ಲಿ ಗೆಳೆಯರಿಂದ ದೂರ ಇರುವುದು ಕಷ್ಟವೆನಿಸುತ್ತದೆ. ಆ ವಯಸ್ಸೇ ಹಾಗೆ ಗೆಳೆಯರ ಜೊತೆ ಇರದಿದ್ದರೆ ಎಲ್ಲರೂ ಸೇರಿ ಅವಮಾನಿಸುತ್ತಾರೆ. ಅಗೌರವ ತೋರುತ್ತಾರೆ ಎನ್ನುವ ಭಯದಲ್ಲಿ ಅವರೊಂದಿಗೆ ಸಮಯ ಕಳೆಯುವುದನ್ನು ಮಾಡುತ್ತಾರೆ. ಎಷ್ಟೋ ಸಲ ಆ ಭಯದಿಂದ ಹೊರಬರಬೇಕೆಂದು ಮನಸ್ಸಿಗೆ ಅನಿಸುತ್ತದೆ. ಆದರೂ ಅದೊಂಥರ ಜಿಮ್ನಾಸ್ಟಿಕ್ ಬೆಡ್‌ನಲ್ಲಿ ಬಿದ್ದಂತೆ ಮೇಲೇಳಲು ಆಗದೇ ಅದೇ ವೃತ್ತದಲ್ಲಿ ಬಿದ್ದು ಕೊರಗುತ್ತಾರೆ. ನಿಜವಾದ ಸ್ನೇಹಿತನಂತೆ ನನ್ನನ್ನು ನಡೆಸಿಕೊಳ್ಳುವುದಿಲ್ಲ ಎಂಬ ನೋವು ಕಾಡುತ್ತದೆ. ಇಲ್ಲಿ ನಾನು ಹೇಳ ಹೊರಟಿರುವುದು ಗೆಳೆಯರ ಸಹವಾಸವನ್ನು ಕಟ್ ಮಾಡಿಬಿಡಿ ಅಂತಲ್ಲ. ಉತ್ತಮ ಗೆಳೆಯರ ಸಂಗ ಮಾಡಿ ಎಂದು. ‘ನಿಮ್ಮ ಗೆಳೆಯರನ್ನು ತೋರಿಸಿ ನೀವು ಎಂತಹ ವ್ಯಕ್ತಿ ಎಂದು ಹೇಳುವೆ.’ ಎಂಬಂತೆ ಒಳ್ಳೆಯ ಅಭಾಸಗಳುಳ್ಳ ಗೆಳೆಯರ ಜೊತೆಗಿದ್ದರೆ ಅವರ ಅಭ್ಯಾಸಗಳು ನಿಮ್ಮ ಮೇಲೆ ಪ್ರಭಾವ ಬೀಳುತ್ತವೆ. ನೀವೆಲ್ಲ ಕೂಡಿ ಒಂದು ತಂಡವಾಗಿ ಕೆಲಸದ ಜವಾಬ್ದಾರಿಯನ್ನು ನಿಭಾಯಿಸಬಹುದು. ತಂಡದಲ್ಲಿ ಕೆಲಸ ಮಾಡಿದಾಗ ಮನ್ನಣೆ ದೊರೆಯುವುದು. ಮನ್ನಣೆಯಿಂದ…

Read More

ಮಮದಾಪುರದಲ್ಲಿ ಗ್ರಾಪಂ ಕಾರ್ಯಾಲಯ, ಗೋದಾಮು ಕಟ್ಟಡ, ಅಗಸಿ ಬಾಗಿಲು ಹಾಗೂ ಬಸ್ ತಂಗುದಾಣ ಲೋಕಾರ್ಪಣೆ ಮಾಡಿದ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ‌ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.‌ ಪಾಟೀಲ ಹೇಳಿದ್ದಾರೆ.ಸೋಮವಾರ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ, ಗೋದಾಮು ಕಟ್ಟಡ, ಅಗಸಿ ಬಾಗಿಲು ಹಾಗೂ ಬಸ್ ತಂಗುದಾಣ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಮದಾಪುರದಲ್ಲಿ ಸಿಎಸ್ಆರ್ ಅನುದಾನದಡಿ ಶಾಲೆಗಳು, ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಿ, ಸಾರ್ವಜನಿಕರಿಗೆ ಸುಲಭ ಮತ್ತು ಸಮರ್ಥ ಸೇವೆ ದೊರಕುವಂತೆ ಮಾಡಲಾಗುತ್ತಿದೆ. ಗ್ರಾಮಾಭಿವೃದ್ಧಿಯ ದಿಸೆಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಮಮದಾಪುರ ಗ್ರಾಮ ವಿದ್ಯಾಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ. ರೈತರು ಮತ್ತು ರೈತ ಮಹಿಳೆಯರು ಕೃಷಿಯ ಜೊತೆಗೆ ಆರೋಗ್ಯದ ಕಡೆಗೂ ಗಮನ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ಹಾವಿನಾಳ ಗ್ರಾಮದಲ್ಲಿನ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ 2025–26ನೇ ಸಾಲಿನ ಕಬ್ಬು ನುರಿಸುವ ಹಂಗಾಮವು ಮಾರ್ಚ್ 8. ರಂದು ಮುಕ್ತಾಯಗೊಳ್ಳಲಿದ್ದು, ಈ ಕುರಿತು ಕಾರ್ಖಾನೆ ಆಡಳಿತ ಮಂಡಳಿಯ ಆಡಳಿತಾಧಿಕಾರಿ ರವೀಂದ್ರ ಗಾಯಕವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಖಾನೆಯ ಕಾರ್ಯಕ್ಷೇತ್ರದೊಳಗಿನ ಹಾಗೂ ಹೊರಗಿನ ಎಲ್ಲಾ ಕಬ್ಬು ಬೆಳೆಗಾರ ರೈತಬಾಂಧವರು ತಮ್ಮ ನೋಂದಣಿ ಮಾಡಿದ ಕಬ್ಬು ರಸ್ತೆ ತೊಂದರೆ, ಕೌಟುಂಬಿಕ ಅಥವಾ ಇತರೆ ಕಾನೂನು ಸಂಬಂಧಿತ ಕಾರಣಗಳಿಂದಾಗಿ ತಮ್ಮ ಹೊಲದಲ್ಲಿ ಉಳಿದಿದ್ದರೆ, ತಕ್ಷಣವೇ ಸಮೀಪದ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ವಿಭಾಗೀಯ ಕಾರ್ಯಾಲಯವನ್ನು ಸಂಪರ್ಕಿಸಿ ಮತ್ತು ಕಬ್ಬು ಉಳಿದಿದ್ದರೆ ಸ್ವತಃ ತಾವೆ ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸುವಂತೆ ಸೂಚಿಸಿದ್ದಾರೆ.ಹಂಗಾಮ ಮುಕ್ತಾಯವಾದ ನಂತರವೂ ಅಂದರೆ ಮಾರ್ಚ 8 ರ ನಂತರ ಕಬ್ಬು ಹೊಲದಲ್ಲಿ ಉಳಿದಿದ್ದರೆ, ಅದರ ನಷ್ಟಕ್ಕೆ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಮುಖ್ಯ ಕೃಷಿ ಸಂಪರ್ಕ…

Read More