Author: editor.udayarashmi@gmail.com

ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ/ರಿಯಾಯತಿ ಬಸ್ ಪಾಸ್ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೇವಾಸಿಂಧು ತಂತ್ರಾಂಶದ ಮೂಲಕ ವಿದ್ಯಾರ್ಥಿಗಳು ಕೆ-೧ ಸೆಂಟರ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹದಾಗಿದೆ ಎಂದು ವಿಜಯಪುರ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಾನಪದ ಸಾಹಿತ್ಯ ಕೇವಲ ಮನರಂಜನೆಯ ವಸ್ತು ಅಲ್ಲ. ಅದು ಸಾರ್ವತ್ರಿಕ ಮೌಲ್ಯಗಳನ್ನು ಹಾಡು, ಗಾದೆ, ಒಡಪು, ಕಥೆ ಮತ್ತು ನುಡಿಗಳ ಮೂಲಕ ಜನತೆಗೆ ಕಲಾತ್ಮಕವಾಗಿ ತಲುಪಿಸಿ ಬದುಕು ಸುಧಾರಿಸುವ ಶ್ರೇಷ್ಠ ಪರಂಪರೆಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಅಭಿಪ್ರಾಯಪಟ್ಟರುಕನ್ನಡ ಜಾನಪದ ಪರಿಷತ್ ತಾಲೂಕಾ ಘಟಕ ನಿಡಗುಂದಿ ಹಾಗೂ ಮಹರ್ಷಿ ವಾಲ್ಮೀಕಿ ಸಾಂಸ್ಕೃಿತಿಕ ಸಂಘ ಮುದ್ದಾಪುರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮುದ್ದಾಪುರ ಮಾರುತೇಶ್ವರ ದೇವಾಲಯದಲ್ಲಿ ಜಾನಪದ ಕಲಾ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಮ್ಮ ಹಳ್ಳಿಗಳು ಜಾನಪದ ಸಂಸ್ಕೃತಿಯನ್ನು ಜೋಪಾನವಾಗಿ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ . ಸಮಾಜ ಮತ್ತು ಸಂಘ ಸಂಸ್ಥೆಗಳು ಕಲಾವಿದರನ್ನು ಬೆಳೆಸಬೇಕೆಂದು ಮನವಿ ಮಾಡಿದರು.ನಿಡಗುಂದಿ ತಾಲೂಕಾ ಕ ಜಾ ಪ ಅಧ್ಯಕ್ಷ ವೈ ಎಸ್ ಗಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಜಾನಪದ ಪರಿಷತ್ ವತಿಯಿಂದ ಹಳ್ಳಿಗಳಲ್ಲಿ ಕಲಾವಿದರನ್ನು ಗುರುತಿಸಿ ಅವರನ್ನು ಬೆಳೆಸುವ ಕೆಲಸ…

Read More

ಸಂತೋಷರಾವ್ ಪೆರ್ಮುಡ,ಪೆರ್ಮುಡ – ಬೆಳ್ತಂಗಡಿ, ದ.ಕನ್ನಡ ಜಿಲ್ಲೆ ‘ಬೆಂಕಿಯಲಿ ಅರಳಿದ ಹೂವು’ ಎಂಬ ಚಲನಚಿತ್ರದಲ್ಲಿ ಕಷ್ಟಗಳು ನೋವುಗಳು ಅದೆಷ್ಟೇ ಬಂದರೂ ಸೋಲನ್ನೊಪ್ಪಿಕೊಳ್ಳದೇ ಧೈರ್ಯದಿಂದ ಮುಂದಕ್ಕೆ ಸಾಗಿದಾಗ ಸುಖ ಸಂತೋಷಗಳು ದೊರೆಯುತ್ತವೆ ಎಂಬ ಸಂದೇಶವನ್ನು ನೀಡಿದ್ದಾರೆ. ಕಷ್ಟಗಳಿದ್ದಾಗಲೇ ಸಾಧನೆಯ ಹಸಿವು ಹೆಚ್ಚಿ ಯಶಸ್ಸನ್ನೂ ಗಳಿಸಿಕೊಳ್ಳುತ್ತಾನೆ. ಧನಾತ್ಮಕವಾಗಿ ಯೋಚಿಸುವ ವ್ಯಕ್ತಿಯು ಹತ್ತು ಬಾರಿ ಸೋತರೂ ಹನ್ನೊಂದನೆಯ ಬಾರಿ ಮತ್ತೆ ಎದ್ದು ನಿಂತು ಗೆಲ್ಲಲು ಪ್ರಯತ್ನಿಸುತ್ತಾನೆ. ಋಣಾತ್ಮಕ ಧೋರಣೆಯ ವ್ಯಕ್ತಿಯು ಒಂದೆರಡು ಬಾರಿ ಪ್ರಯತ್ನಿಸಿ ಸೋಲನ್ನು ಒಪ್ಪಿಕೊಂಡು ಬಿಡುತ್ತಾನೆ.ಅಟೋಮೊಬೈಲ್ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿರುವ ಹೋಂಡಾ ಕಂಪನಿಯ ಸಂಸ್ಥಾಪಕ ಸೋಯಿಚಿರೋ ಹೋಂಡಾ ತನ್ನದೇ ಆದ ಅಟೋಮೊಬೈಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಲು ಪಟ್ಟ ಶ್ರಮವನ್ನು ಊಹಿಸಲೂ ಸಾಧ್ಯವಿಲ್ಲ. ನೋವುಗಳ ನಂತರವೇ ಸುಖವಿರುವುದು ಎನ್ನುವುದಕ್ಕೆ ಇವರೇ ಉತ್ತಮ ಉದಾಹರಣೆ.ಸುಯಿಚಿರೋ ಹೋಂಡಾ ಹುಟ್ಟಿದ್ದು ಜಪಾನ್ ದೇಶದಲ್ಲಿ. ಬಡತನದಿಂದ ಕೂಡಿದ ಕೆಳ ಮಧ್ಯಮ ವರ್ಗದಲ್ಲಿ ಇವರು ಜನಿಸುತ್ತಾರೆ. ದಿನದಲ್ಲಿ ಎರಡು ಹೊತ್ತಿನ ಊಟವಷ್ಟೇ ಇವರಿಗಿದ್ದ ಆಸ್ತಿ. ತನ್ನ ಸಣ್ಣ ವಯಸ್ಸಿನಲ್ಲೇ ತಾನು ಜಗತ್ತೇ…

Read More

“ವೀಣಾಂತರಂಗ”- ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ, ಗದಗ ಅದೊಂದು ಪುಟ್ಟ ಸಭಾಂಗಣ. ಅಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದರು. ತರಹೇವಾರಿ ಸೀರೆಗಳಲ್ಲಿ ಹಿರಿಯರು ಮಿಂಚುತ್ತಿದ್ದರೆ, ತರುಣಿಯರು ನವೀನ ಮಾದರಿಯ ಬಟ್ಟೆಗಳನ್ನು ಧರಿಸಿ, ಪುಟ್ಟ ಮಕ್ಕಳು ಬಣ್ಣ ಬಣ್ಣದ ಫ್ರಾಕುಗಳನ್ನು ಮ್ಯಾಕ್ಸಿಗಳನ್ನು ಧರಿಸಿ ಮಿಂಚುತ್ತಿದ್ದರು.ತಮಾಶೆಯ ಆಟಗಳು, ಸ್ಪರ್ಧೆಗಳು ನಡೆದು ಇನ್ನೇನು ವೇದಿಕೆ ಕಾರ್ಯಕ್ರಮ ಆರಂಭವಾಗಬೇಕು. ಮಿಲಿಟರಿ ಕಮಾಂಡರ್ ಅವರ ಪತ್ನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.ಅವರನ್ನು ಪರಿಚಯಿಸುತ್ತಾ ಕಾರ್ಯಕ್ರಮದ ನಿರೂಪಕಿ ಆಕೆಯ ಪತಿಯನ್ನು ಕೂಡ ಹೊಗಳುತ್ತಾ ಶ್ರೀಮತಿ ಉಷಾ ಅವರನ್ನು ಅವರ ಪತಿ ಸಂತೋಷವಾಗಿ ಇಟ್ಟಿದ್ದಾರೆ ಎಂದು ಹೇಳಿದರು. ಇದೀಗ ಮಾತನಾಡುವ ಸರದಿ ಶ್ರೀಮತಿ ಉಷಾ ಅವರದು… ಸಭೆಯಲ್ಲಿ ಹಾಜರಿರುವ ಎಲ್ಲರನ್ನೂ ಅಭಿನಂದಿಸುತ್ತಾ ಕಾರ್ಯಕ್ರಮವನ್ನು ಕುರಿತು ಒಂದೆರಡು ನಿಮಿಷ ಮಾತನಾಡಿದ ಆಕೆ ಕೊನೆಯಲ್ಲಿ ಹೇಳಿದ್ದು ಇಷ್ಟು…. ನನ್ನನ್ನು ನನ್ನ ಪತಿ ಸಂತೋಷವಾಗಿ ಇರಿಸಿದ್ದಾರೆ ಎಂಬುದು ಸುಳ್ಳು. ಸಂತೋಷವಾಗಿ ಇರಲೇಬೇಕು ಎಂಬುದು ನನ್ನ ಆಯ್ಕೆಯಾಗಿತ್ತು. ನನಗೆ ನಾನು ಎಂದು ಮೋಸ ಮಾಡಿಕೊಳ್ಳಬಾರದು, ನನಗಿರುವುದು ಒಂದೇ…

Read More

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್. ಕೆ. ಬೆಂಗಳೂರು ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90% ಕ್ಕಿಂತ ಹೆಚ್ಚು ಆ ಕ್ಷೇತ್ರದ ಅವಲಂಬಿತರು ನಷ್ಟದಲ್ಲಿದ್ದಾರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಚಿತ್ರರಂಗ ಅವಸಾನದ ಅಂಚಿಗೆ ಬಂದು ತಲುಪುತ್ತದೆ. ಆದ್ದರಿಂದ ಏನಾದರೂ ಕ್ರಮ ಕೈಗೊಳ್ಳಲೇಬೇಕು..ಮುಖ್ಯವಾಗಿ ಪ್ರಖ್ಯಾತ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು. ಏಕೆಂದರೆ ಅವರಿಂದ ಒಂದಷ್ಟು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬಹುದು ಎಂಬ ನಿರೀಕ್ಷೆ. ಹಾಗೆಯೇ ಬಿ ಮತ್ತು ಸಿ ದರ್ಜೆಯ ಚಿತ್ರಮಂದಿರಗಳು ಬಹುತೇಕ ಮುಚ್ಚುವ ಹಂತದಲ್ಲಿವೆ ಅಥವಾ ಮುಚ್ಚಿವೆ. ಈಗ ದಾರಿ ಕಾಣದಾಗಿದೆ ಎಂಬ ಚರ್ಚೆಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ..ಯಾವಾಗಲೂ ಒಂದು ಕ್ಷೇತ್ರ ಆರ್ಥಿಕ ಸಂಕಷ್ಟ ಎದುರಾದಾಗ ಆ ಕ್ಷೇತ್ರದ ಜನ ಅಷ್ಟಕ್ಕೇ ಸೀಮಿತವಾಗಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ ಜಾಗತೀಕರಣದ ನಂತರ ಈ ರೀತಿಯ ಅನೇಕ…

Read More

ಕೊಲ್ಹಾರ: ಗಾಯನ ಕ್ಷೇತ್ರದಲ್ಲಿ ಹೊಸ ಹೊಸ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಸಲುವಾಗಿ ಪ್ರಪ್ರಥಮಬಾರಿಗೆ ಕೊಲ್ಹಾರ ಪಟ್ಟಣದಲ್ಲಿ ವಿಜಯಪೂರ ಜಿಲ್ಲೆಯ ಗಾಯನ ಪ್ರತಿಭೆಗಳನ್ನು ಹೊರಹಾಕುವ ಪ್ರತಿಭಾನ್ವೇಷನೆಯ ಕಾರ್ಯಕ್ರಮವನ್ನು ಮೇ.೨೯ ಬುಧವಾರ ಮತ್ತು ೩೦ ಗುರುವಾರ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಕೆ.ಶರಣಬಸವ, ಮಲ್ಲಿಕಾರ್ಜುನ ಬೆಳ್ಳುಬ್ಬಿ ತಿಳಿಸಿದ್ದಾರೆ.ವಿಜಯ ವ್ಹಾಯ್ಸ್ ಆಪ್ ಕರ್ನಾಟಕ ಹಾಗೂ ದ್ಯಾಮವ್ವದೇವಿ ದೇವಸ್ಥಾನ ಸೇವಾ ಸಮೀತಿ, ಸಹಯೋಗದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಹಾಡುವ ಸ್ಪರ್ದೆಗಳು ಪಟ್ಟಣದ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲೆಮರೆಯ ಕಾಯಿಯಂತೆ ಇರುವ ಗಾಯಕರಿಗೆ ಅವಕಾಶ ಕಲ್ಪಿಸಲಾಗಿದೆ ಆದ್ದರಿಂದ ಜಿಲ್ಲೆಯ ಗಾಯಕರು ವಿಧ್ಯಾರ್ಥಿಗಳು ಮಹಿಳೆಯರು, ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕೆಂದು ವಿನಂತಿಸಿದರು.ಈ ಸಿಂಗಿಂಗ್ ಕಾಂಪಿಟೇಶನ್ ಮೆಗಾ ಆಡಿಶನ್‌ನಲ್ಲಿ ಆಯ್ಕೆಯಾದ ಪ್ರತಿಭೆಗಳನ್ನು ದಾವಣಗೆರೆಯಲ್ಲಿ ನಡೆಯುವ ಅಚಿತಿಮ ಹಂತದ ಸ್ಪರ್ದೆಯಲ್ಲಿ ಅವಕಾಶ ಕೊಡಲಾಗುವದು. ಆಸಕ್ತ ಗಾಯಕರು ತಮ್ಮ ಹೆಸರನ್ನು ಪರಶುರಾಮ ಬಸಲಿಂಗಪ್ಪ ಗಣಿ ಸಂಚಾರಿ ದೂರವಾಣಿ ಸಂಖ್ಯೆ: ೯೮೪೪೨೦೭೨೧೦ ಸಂಪರ್ಕಿಸಬಹುದು ಎಂದು ಆಯೋಜಕರು ಪತ್ರಿಕಾ ಪ್ರಕಟಣೆ…

Read More

ಚಡಚಣ: ಪ್ರತಿ ವರ್ಷದಂತೆ ಈ ವರ್ಷವು ಹಾಲಳ್ಳಿ ಗ್ರಾಮದ ಖಾಜಾ ಬಂದೇನವಾಜ ಉರುಸು ಅತಿ ವೈಭವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.ಖಾಜಾ ಬಂದೇನವಾಜ ಮುಸ್ಲಿಂ ಸೂಫಿ ಸಂತರಲ್ಲಿ ಒಬ್ಬರಾಗಿದ್ದಾರೆ. ಹಾಲಳ್ಳಿ ಗ್ರಾಮದ ಖಾಜಾ ಬಂದೇನವಾಜ ದೇವರ ಉರುಸು ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಸರ್ವಧರ್ಮೀಯರು ಉರುಸಿನಲ್ಲಿ ಭಾಗಿಯಾಗಿ ತಮ್ಮ ತನುಮನ ಧನ ಅರ್ಪಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದರು. ಸೂಫಿ ಸಂತ ಬಂದೇನವಾಜರು ಪವಾಡ ಪುರುಷರಾಗಿದ್ದರು. ಮಾನವಧರ್ಮ ಜಾಗೃತಿಗಾಗಿ ಊರೂರು ಸಂಚರಿಸುತ್ತಾ ಹಾಲಳ್ಳಿ ಗ್ರಾಮದಲ್ಲಿ ಬಂದು ವಿಶ್ರಾಂತಿ ಪಡೆದು ಅಲ್ಲಿಯ ಭಕ್ತರಿಗೆ ಕೆಲವೊಂದು ಪವಾಡ ಮಾಡಿ ತಮ್ಮ ಕುರುಹನ್ನು ಬಿಟ್ಟು ಹೋದರಂತೆ. ಅಂದಿನಿಂದ ಇಂದಿನ ವರೆಗೆ ಗ್ರಾಮಸ್ಥರು ಭಕ್ತಿಭಾವದಿಂದ ಅವರ ಉರುಸನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುತ್ತಾರೆ. ಇದು ಗ್ರಾಮಕ್ಕೆ ದೊಡ್ಡ ಜಾತ್ರೆಯಾಗಿದ್ದು, ಎಲ್ಲರೂ ಹಬ್ಬದಂತೆ ಆಚರಿಸುವರು. ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದರು.ಶುಕ್ರವಾರ ಸಂಜೆ ೦೮ ರಿಂದ ೧೦ ಗಂಟೆಯವರೆಗೆ ‘ಗಂಧ ಲೇಪನ’ ಕಾರ್ಯಕ್ರಮ ನಡೆಯಿತು. ಶನಿವಾರ ಮುಂಜಾನೆ ೦೬ ರಿಂದ ರಾತ್ರಿ ೧೦ ಗಂಟೆಯವರೆಗೆ…

Read More

ವಿಜಯಪುರ: ಬೇಸಿಗೆ ರಜೆ ಮುಗಿಸಿಕೊಂಡು 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ಆಗಮಿಸುವ ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ವಿಜಯಪುರ ಗ್ರಾಮೀಣವಲಯದ ಬಿಇಓ ಪ್ರಮೋದಿನಿ‌ ಬಳೋಲಮಟ್ಟಿ ಎಲ್ಲ ಮುಖ್ಯಗುರುಗಳಿಗೆ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ಮೂಲಕ ತಿಳಿಸಿದ ಅವರು ಮೇ 29 ಹಾಗೂ 30 ರಂದು ಪ್ರಾರಂಭೋತ್ಸವದ ಪೂರ್ವ ತಯಾರಿ ಶಾಲಾ ಸ್ವಚ್ಚತೆ, ಮೈದಾನ ಸ್ವಚ್ಚತೆ ಮಾಡಿಕೊಳ್ಳಬೇಕು. ಶಿಥಿಲಾವ್ಯಸ್ಥೆಯ ಕಟ್ಟಡ, ಮಳೆಯಿಂದ ಸೋರುವ ಕಟ್ಟಡಗಳಿದ್ದಲ್ಲಿ ಅಂತಹ ಕಟ್ಟಡಗಳನ್ನು ಬಳಕೆ ಮಾಡದೇ ಆ ಮಾಹಿತಿಯನ್ನು ಗ್ರಾಮ ಪಂಚಾಯತಿ ಹಾಗೂ ಬಿಇಓ ಕಛೇರಿಗೆ ಮಾಹಿತಿ ನೀಡುವದು.ಎಸ್ಡಿಎಂಸಿ‌ ಸಭೆ ನಡೆಸಿ ಶಾಲಾ ಪ್ರಾರಂಭೋತ್ಸವ ಕುರಿತು ಚರ್ಚಿಸಿ ವಿವಿಧ ಸುರಕ್ಷಾ ಕ್ರಮ‌ ಕೈಗೊಳ್ಳುವದು. ಶಾಲಾ ವೇಳಾಪಟ್ಟಿ, ವಾರ್ಷಿಕ ಕ್ರೀಯಾಯೋಜನೆ ಸೇರಿದಂತೆ ಇತರೆ ದಾಖಲೆ ಸಿದ್ದಪಡಿಸಿಕೊಳ್ಳುವದು. ಮೇ 31ರಂದು ಉತ್ಸಾಹದಿಂದ ಮುಖ್ಯಗುರುಗಳು, ಶಿಕ್ಷಕರು, ಎಸ್ಡಿಎಂಸಿ ಹಾಗೂ ಪೋಷಕರು ಸೇರಿ ಕಲಿಕಾ ಸಾಧಕರಂತೆ ಮಕ್ಕಳನ್ನು ಸ್ವಾಗತಿಸಿಕೊಳ್ಳುವದು. ಈ ದಿನದಂದು ಶಾಲೆಯನ್ನು ತಳಿರು ರೋರಣಗಳಿಂದ ಸಿಂಗರಿಸಿ ಮಕ್ಕಳಿಗೆ…

Read More

ಮುದ್ದೇಬಿಹಾಳ: ಬೆಂಗಳೂರಿನ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆಗೊಂಡಿರುವ ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮಿ ನಿಂಗಪ್ಪ ಗರಗ ಅವರನ್ನ ನ್ಯಾಯವಾದಿಗಳ ಸಂಘದ ವತಿಯಿಂದ ದಂಪತಿಗಳ ಸಮೇತ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಗರಗ ಅವರು, ಇಲ್ಲಿನ ನ್ಯಾಯವಾದಿಗಳ ಸಂಘ ತುಂಬ ಒಳ್ಳೆಯದು. ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಸಾಕಷ್ಟು ಸಹಕಾರ ನೀಡುತ್ತಾರೆ. ಅಲ್ಲದೇ ಲೋಕ್ ಅದಾಲತ್‌ನಲ್ಲಿ ಇಲ್ಲಿನ ನ್ಯಾಯಾಲಯ ಮೂರನೇ ಸ್ಥಾನದಲ್ಲಿದೆ ಎಂದರೆ ಎಲ್ಲ ನ್ಯಾಯವಾದಿಗಳ ಸಹಕಾರ ಕಾರಣವಾಗಿದೆ. ಇಲ್ಲಿನ ನ್ಯಾಯಾಲಯದ ಸಿಬ್ಬಂದಿ ಕೂಡ ಅಷ್ಟೇ ಹೃದಯವಂತರು. ಇಲ್ಲಿ ಸೇವೆಯಲ್ಲಿರುವಾಗ ನನಗೆ ಯಾವತ್ತೂ ಮನಸ್ಸಿಗೆ ನೋವು ತಂದ ಘಟನೆಗಳಿಲ್ಲ. ಎಲ್ಲರ ಸಹಕಾರವನ್ನು ನಾನು ಸ್ಮರಿಸುವೆ ಎಂದರು.ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ಎಂ.ಎಚ್.ಹಾಲಣ್ಣವರ, ಬಿ.ಆರ್.ನಾಡಗೌಡರ, ನ್ಯಾಯವಾದಿಗಳಾದ ಎಂ.ಆರ್.ಪಾಟೀಲ, ಎಲ್.ಎಸ್.ಮೇಟಿ, ಎಂ.ಬಿ.ಬಿರಾದಾರ, ಬಸಣ್ಣ ಮುಂದಿನಮನಿ, ಸಂತೋಷ ನಾಯಕ, ಮಾಂತಗೌಡ ಪಾಟೀಲ, ಹಸೀನಾ ಅನಂತಪೂರ, ರಶ್ಮಿ ಕುಲಕರ್ಣಿ, ಜಯಾ ಸಾಲಿಮಠ, ಶ್ರೀದೇವಿ ರಾಜೂರ ಸೇರಿದಂತೆ…

Read More