Author: editor.udayarashmi@gmail.com

ಕೊಲ್ಹಾರ: ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಹಾಗೂ ಸುಪುತ್ರಿ ಸ್ಪರ್ದಿಸಿರುವ ಬಾಗಲಕೋಟ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆದ್ದಿರುವುದಕ್ಕೆ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರದ ಸಚಿವರ ಸ್ವಕ್ಷೇತ್ರ ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ೧೭ ಸಾವಿರಕ್ಕಿಂತಲೂ ಅಧಿಕ ಮತಗಳ ಹಿನ್ನಡೆಯಾಗಿರುವ ನೈತಿಕ ಹೊಣೆಯನ್ನು ಹೊತ್ತು ಶಿವಾನಂದ ಪಾಟೀಲ ಅವರು ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಒತ್ತಾಯಿಸಿದ್ದಾರೆ.ಪಟ್ಟಣದ ಅವರ ಸ್ವಗೃಹದಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿ ಮಾತನಾಡಿದ ಅವರು ದೇಶದ ಜನತೆ ನರೇಂದ್ರ ಮೋದಿಯವರು ಮತ್ತೊಮ್ಮೆ ಅಂದರೆ ಮೂರನೇ ಬಾರಿಗೆ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷಿಯಿಂದ ರಾಜ್ಯದ ೧೭ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಅಖಂಡ ವಿಜಯಪುರ ಬಾಗಲಕೋಟ ಜಿಲ್ಲೆಯಲ್ಲಿ ಸತತವಾಗಿ ಮತದಾರರು ಭಾರತೀಯ ಜನತಾಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತಿರುವುದಕ್ಕೆ ಮತದಾರರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದರು.ಕಳೆದಬಾರಿಗಿಂತ ಬಿಜೆಪಿ ಪಕ್ಷವು ಸ್ವಲ್ಪ ಹಿನ್ನಡೆ ಅನುಭವಿಸಿದರೂ ದೇಶದ ಜನತೆಗೆ ಕಾಂಗ್ರೆಸ್ ಪಕ್ಷ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು…

Read More

ಕೊಲ್ಹಾರ: ರೋಹಿಣಿ ಮಳೆಯು ಕಳೆದು ಮೃಗಶಿರಾ ಮಳೆಯು ಸೇರುವ ಗುರುವಾರ ಶುಕ್ರವಾರ ದಿವಸ ರಾತ್ರಿ ಕೊಲ್ಹಾರ ತಾಲೂಕಿನಾದ್ಯಂತ ಸುಮಾರು ೫೮ ಮಿ.ಮೀ ಧಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ತಹಶೀಲ್ದಾರ ಎಸ್.ಎಸ್.ನಾಯ್ಕಲಮಠ ತಿಳಿಸಿದರು.ಧಾರಾಕಾರವಾಗಿ ಮಳೆ ಸುರಿದಿರುವದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದರೆ ಮಳೆರಾಯಣ ಆರ್ಭಟಕ್ಕೆ ತಾಲೂಕಿನ ಹಳ್ಳ, ಕೊಳ್ಳ, ಕೆರೆ ಕಟ್ಟೆಗಳು ತುಂಬಿಕೊಂಡು ನೀರು ಹರಿದುಬಂದಿದೆ ಅದರಂತೆ ಗೋಡೆ ಕುಸಿದು ಅಲ್ಲಲ್ಲಿ ಅಹಿತಕರ ಘಟಣೆಗಳು ಸಂಭವಿಸಿವೆ ಅದರಲ್ಲಿ ಕೂಡಗಿ ಗ್ರಾಮದಲ್ಲಿ ೯ ಜಾನುವಾರುಗಳು ಸಾವನ್ನಪ್ಪಿರುವದು, ಹಣಮಾಪೂರ ೨, ರೋಣಿಹಾಳ ೨, ಮುಳವಾಡ ೧, ಮಲಘಾನ ೧, ಸಿದ್ದನಾಥ ೧, ತೆಲಗಿ ಗ್ರಾಮದಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿರುವ ಘಟಣೆ ವರದಿಯಾಗಿದೆ.ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಹೊಲ ಗದ್ದೆಗಳ ಬದುವಿನಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ಆಗಮನದಿಂದ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿ ರೈತಾಪಿ ವರ್ಗದವರ ಮೊಗದಲ್ಲಿ ಹರ್ಷದಾಯಕವಾಗಿದೆ ಭೂದೇವಿಯನ್ನು ತಂಪಾಗಿಸಿರುವದಕ್ಕೆ ಜನರು ಮಳೆರಾಜನಿಗೆ ಕೃತಜ್ಞತೆ ಹೇಳುವದು ಅಲ್ಲಲ್ಲಿ ಕಂಡುಬಂದಿತು.

Read More

ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಶುಕ್ರವಾರ ಮಧ್ಯಾನ್ಹ ಶಾಟ್ ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಪರಿವರ್ತಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ಅದೃಷ್ಟವಶಾತ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮಧ್ಯಾನ್ಹ ಸುರಿದ ಗಾಳಿ-ಮಳೆಯಿಂದ ವಿದ್ಯುತ್ ಕಂಬದಲ್ಲಿ ಶಾಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಉಂಟಾಗಿರಬಹುದು. ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿಯನ್ನು ಹೆಸ್ಕಾಂ ಇಲಾಖೆಗೆ ಗ್ರಾಮಸ್ಥರು ತಿಳಿಸಿದ ಕೂಡಲೇ ಹೆಸ್ಕಾಂ ಆಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಿದರು.ಗಾಳಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿಗಳು ಕೂಡಿಕೊಂಡು ಬೆಂಕಿ ಉಂಟಾಗಿದೆ. ತಂತಿಗಳು ಸುಟ್ಟಿವೆ. ವಿದ್ಯುತ್ ಪರಿವರ್ತಕಕ್ಕೆ ಯಾವುದೇ ಹಾನಿಯಾಗಿಲ್ಲ. ಸುಟ್ಟಿರುವ ತಂತಿಗಳನ್ನು ಸರಿಪಡಿಸಿ ಮತ್ತೆ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂದು ಸ್ಥಳಕ್ಕೆ ಹೋಗಿದ್ದ ಹೆಸ್ಕಾಂ ಶಾಖಾಧಿಕಾರಿ ಪಿ.ಎಂ.ಉಕ್ಕಲಿ ಹೇಳಿದರು.

Read More

ಬಸವನಬಾಗೇವಾಡಿ: ತಾಲೂಕಿನ ಡೋಣೂರ ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಸಂಜೆ ಗುರು ಮರುಳಸಿದ್ದೇಶ್ವರರ ರಥೋತ್ಸವ ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಜರುಗಿತು.ರಥೋತ್ಸವಕ್ಕೆ ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಶಿರಶ್ಯಾಡದ ಮರುಘೇಂದ್ರ ಶಿವಾಚಾರ್ಯ ಸ್ವಾಮೀಜಿ,ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಬೆಣ್ಣೆಹಳ್ಳಿಶ್ರೀಗಳು, ಕೂಡ್ಲಿಗಿಯ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಪುರ್ತಗೇರಿಯ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ, ಉಕ್ಕಲಿಯ ಅಣ್ಣಾಸಾಹೇಬಗೌಡ ಪಾಟೀಲ ಚಾಲನೆ ನೀಡಿದರು.ಗುರು ಮರುಳಸಿದ್ದೇಶ್ವರ ರಥೋತ್ಸವವು ಗ್ರಾಮದಲ್ಲಿರುವ ಎಲ್ಲ ಸಮಾಜದ ದೇವರುಗಳನ್ನು ಪ್ರತಿನಿಧಿಸುವದರಿಂದ ರಥೋತ್ಸವದಲ್ಲಿ ಎಲ್ಲ ಸಮಾಜದ ಬಾಂಧವರು ಭಾಗವಹಿಸುವದು ಈ ರಥೋತ್ಸವದ ವಿಶೇಷ. ಗುರು ಮರುಳಸಿದ್ದೇಶ್ವರ ಜಾತ್ರಾಮಹೋತ್ಸವದೊಂದಿಗೆ ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ ಉರುಸು ನಡೆಯುವದರಿಂದ ಇದೊಂದು ಭಾವೈಕ್ಯದ ಸಂಕೇತವಾಗಿ ಈ ಭಾಗದಲ್ಲಿ ರಥೋತ್ಸವ ನಡೆದುಕೊಂಡು ಬರುತ್ತಿದೆ. ರಥೋತ್ಸವದಲ್ಲಿ ಭಾಗವಹಿಸಿದ್ದ ಜನರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸುವದು ಕಂಡುಬಂದಿತ್ತು.ರಥೋತ್ಸವದಲ್ಲಿ ಕಲ್ಲನಗೌಡ ಪಾಟೀಲ, ಎಸ್.ಎಂ.ದುಂಬಾಳಿ, ಅಪ್ಪುಗೌಡ ಪಾಟೀಲ, ಗೋಲಾಳಪ್ಪ ಕೆರೂಟಗಿ, ಸಿದ್ದರಾಮ ಹಳ್ಳಿ,…

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ ೧೦ ಗಂಟೆಯ ನಂತರ ಆರಂಭವಾದ ರೋಹಿಣಿ ಮಳೆ ನಿರಂತರವಾಗಿ ಕೆಲ ಗಂಟೆಗಳ ಕಾಲ ಸುರಿಯಿತು. ಈ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.ಕಳೆದ ವರ್ಷ ಮಳೆ ಇಲ್ಲದೇ ಸರಿಯಾಗಿ ಬಿತ್ತನೆಯಾಗಿರಲಿಲ್ಲ. ಈಗ ಉತ್ತಮ ಮಳೆಯಾಗಿರುವದರಿಂದ ಬಿತ್ತನೆ ಚಟುವಟಿಕೆಗಳು ಆರಂಭವಾಗುತ್ತವೆ.ಪಟ್ಟಣದ ಹಿರಿಯರಾದ ಬಸವರಾಜ ಹಾರಿವಾಳ ಅವರನ್ನು ಮಾತನಾಡಿಸಿದಾಗ, ನಿನ್ನೆ ರಾತ್ರಿ ಸುರಿದ ರೋಹಿಣಿ ಮಳೆಯು ಉತ್ತಮವಾಗಿದೆ. ಇದು ಬಿತ್ತನೆ ಮಾಡಲು ಬೇಕಾದ ಮಳೆ ನೀಡಿದೆ. ಇಂದು ಜೂ.೭ ರಂದು ಮೃಗಾ ಮಳೆ ಕೂಡುತ್ತದೆ. ಗುರುವಾರ ಮಧ್ಯಾನ್ಹವೂ ಪಟ್ಟಣ ಹೊರವಲಯದ ಸುತ್ತಮುತ್ತ ಮೃಗಾ ಮಳೆಯು ಸಹ ಆಗಿದೆ. ಇದರಿಂದಾಗಿ ಬಿತ್ತನೆ ಮಾಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು. ಈ ವರ್ಷ ಮಳೆಯಾಗುವ ಭರವಸೆ ಮೂಡಿದೆ. ಎಲ್ಲ ರೈತ ಬಾಂಧವರು ಬಿತ್ತನೆ ಮಾಡಲು ಮುಂದಾಗುತ್ತಾರೆ. ಉತ್ತಮ ಮಳೆಯಾಗಿರುವದರಿಂದ ನಮಗೆ ಹರ್ಷ ಉಂಟು ಮಾಡಿದೆ ಎಂದರು.ನಿನ್ನೆ ರಾತ್ರಿ ಸುರಿದ ಮಳೆಯಿಂದ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಎರಡು ಮನೆ ಭಾಗಶಃ, ಯರನಾಳ…

Read More

ವಿಜಯಪುರ: ತಾಲ್ಲೂಕಿನ ಹೊನಗನಹಳ್ಳಿಯ ಕೊರಮ್ಮದೇವಿ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರು ವಿಧ್ಯಾರ್ಥಿಗಳು ಮುರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ.ಚೇತನ, ಬ್ರಹ್ಮಕುಮಾರಿ, ಲಾವಣ್ಯ, ತನುಶ್ರೀ, ಮಹಾದೇವಿ, ಕಾರ್ತಿಕ್ ಆಯ್ಕೆಯಾದ ವಿಧ್ಯಾರ್ಥಿಗಳಾಗಿದ್ದಾರೆ. ಮುಖ್ಯೋಪಾಧ್ಯಾಯಿನಿ ಎಸ್.ಆರ್.ಮೇಡೆಗಾರ, ಸಹಶಿಕ್ಷಕ ಸಿ.ವಿ.ರಾಠೋಡ ಅವರ ಶ್ರಮದಿಂದ ಆಯ್ಕೆಯಾಗಿದ್ದು ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು, ಪಾಲಕರು ಶಿಕ್ಷಕರಿಗೆ ಹಾಗೂ ಆಯ್ಕೆಯಾದ ಮಕ್ಕಳಿಗೆ ಶುಭ ಹಾರೈಸಿದ್ದಾರೆ.

Read More

ತಿಕೋಟಾ: ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಒಳ್ಳೆಯ ಸೌಕರ್ಯ ಒದಗಿಸಿದರೆ ಉತ್ತಮ‌ ಸಾಧನೆ ಮಾಡುತ್ತಾರೆ ಎಂದು ಮುಂಬೈ ಮೂಲದ ತಪಸಿದಾಸ, ತುಳಸದಾಸ ಮತ್ತು ವೃಜದಾಸ ಚಾರಿಟೇಬಲ್ ಟ್ರಸ್ಟನ ಸಂಯೋಜಕ ವಿಶ್ವನಾಥ ಸಿಂದಗಿ ಹೇಳಿದರು.ತಾಲ್ಲೂಕಿನ ಬಾಬಾನಗರ ಗ್ರಾಮದ ಹಿರೇಕುರುಬರ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೋಮದೇವರಹಟ್ಟಿ ಗ್ರಾಮದ ಪೂಜೇರಿ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಟ್ರಸ್ಟ ವತಿಯಿಂದ ಶುಕ್ರವಾರ ಮಕ್ಕಳಿಗೆ ನೋಟಬುಕ್ ವಿತರಿಸಿ ಅವರು ಮಾತನಾಡಿದರು.ಮಕ್ಕಳು ಉತ್ತಮವಾಗಿ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮಾಡುವ ಸಾಧನೆಯೇ ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆಯಾಗಿದೆ ಎಂದರು.ಈ ಸಂದರ್ಭದಲ್ಲಿ ಎಸ್.ಎನ್.ತಡಲಗಿ, ಎಸ್.ಎಂ.ಕಠಾರೆ, ಎಸ್.ವೈ.ಬಾಗೆನವರ, ಎಚ್.ಎಂ.ಕಾಲೆಬಾಗ್, ಎಸ್.ಐ.ಬಾಗಲಕೋಟ, ಎಸ್.ಎಸ್.ಜಂಗಮಶೆಟ್ಟಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಮತ್ತು ಮಕ್ಕಳು ಇದ್ದರು.

Read More

ದೇವರಹಿಪ್ಪರಗಿ: ತಾಲ್ಲೂಕು ಕೇಂದ್ರಗಳಾದ ದೇವರಹಿಪ್ಪರಗಿ-ಇಂಡಿ ಪಟ್ಟಣಗಳ ನಡುವೆ ಬಸ್‌ಗಳು ನಿಗದಿತ ಸಮಯಕ್ಕೆ ಬಾರದ ಹಿನ್ನೆಲೆ ಹಾಗೂ ಬಸ್‌ಗಳ ಕೊರತೆಯಿಂದ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಶಾಲಾ ಮಕ್ಕಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೇವೆ ಆರಂಭಿಸುವಂತೆ ವಿವಿಧ ಗ್ರಾಮಗಳ ಮಕ್ಕಳ ಪಾಲಕರು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.ತಾಲ್ಲೂಕು ಕೇಂದ್ರ ದೇವರಹಿಪ್ಪರಗಿಯಿಂದ ಈ ಮುಂಚೆ ಸಿಂದಗಿ ಘಟಕದಿಂದ ದೇವರಹಿಪ್ಪರಗಿ ಮಾರ್ಗವಾಗಿ ಇಂಡಿ ಪಟ್ಟಣಕ್ಕೆ ನಿತ್ಯ ೨ ಬಸ್ಸುಗಳು ಸಂಚರಿಸುತ್ತಿದ್ದವು. ಈಗ ಸಿಂದಗಿ ಘಟಕದಿಂದ ಸಂಚರಿಸುತ್ತಿರುವ ಬಸ್‌ಗಳು ನಿಗದಿತ ಸಮಯಕ್ಕೆ ಸರಿಯಾಗಿ ಬಾರದೇ ಇರುವುದು. ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಮುದ್ದೇಬಿಹಾಳ ಘಟಕದ ಸೋಲ್ಲಾಪೂರ ಬಸ್‌ಗಳು ಬಂದಾದ ಕಾರಣಗಳಿಂದಾಗಿ ಇಂಡಿ ಸಾರಿಗೆ ಘಟಕದ ಬಸ್‌ಗಳು ತುಂಬಿ ತುಳುಕುವಂತಾಗಿವೆ. ಹೀಗಾಗಿ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಹಿಂದೆ ಮುದ್ದೇಬಿಹಾಳ ಘಟಕದಿಂದ ಸೋಲ್ಲಾಪೂರಕ್ಕೆ ತೆರಳುತ್ತಿದ್ದ ಬಸ್‌ಗಳನ್ನು ಪುನಃ ಮೊದಲಿನ ಸಮಯಕ್ಕೆ ಆರಂಭಿಸಬೇಕು.ಇನ್ನು ಸಂಜೆ ಆರು ಗಂಟೆಯ ಸುರಪುರ-ಮುಂಬಯಿ ಬಸ್ ನಂತರ…

Read More

ಉತ್ತಮ ಮಳೆ | ಹುರುಪಿನಿಂದ ಕೃಷಿ ಚಟುವಟಿಕೆ ಚಾಲನೆ | ತೊಗರಿ ಬಿತ್ತನೆಗೆ ಅನುಕೂಲ ಇಂಡಿ: ತಾಲೂಕಿನ ನಾನಾ ಕಡೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಸುರಿದ ಮೃಗಶಿರಾ ಮಳೆ ಮುಂಗಾರು ಬಿತ್ತನೆಯ ಭರವಸೆ ಹೆಚ್ಚಿಸಿದ್ದು ರೈತರು ಹುರುಪಿನಿಂದ ಬಿತ್ತನೆಯ ಪೂರಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.ಎಲ್ಲ ಕಡೆ ಉತ್ತಮ ಮಳೆ ಆಗುತ್ತಿರುವದರಿಂದ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಳವಾಗುವ ನಿರೀಕ್ಷೆ ಹುಟ್ಟಿಸಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.ಇಂಡಿ ತಾಲೂಕಿನಲ್ಲಿ ಶುಕ್ರವಾರ ಇಂಡಿಯಲ್ಲಿ ೧೪.೮ ಮಿ.ಮಿ, ನಾದ ಬಿಕೆ ೨೮ ಮಿ.ಮಿ,ಅಗರಖೇಡ ೧೦.೩ ಮಿ.ಮಿ, ಹೋರ್ತಿ ೧೧.೨ ಮಿ.ಮಿ, ಝಳಕಿ ೫೮.೪ ಮಿ.ಮಿ ಮಳೆಯಾಗಿದೆ.ಇಂಡಿ,ಅಗರಖೇಡ, ಸಾಲೋಟಗಿ,ತಾಂಬಾ, ಝಳಕಿ,ಹೊರ್ತಿನಾದ ಬಿಕೆ ಸೇರಿದಂತೆ ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು ತೊಗರಿ, ಮೆಕ್ಕೆಜೋಳ ಬಿತ್ತನೆ ಸಿದ್ದತೆಗೆ ಅನುಕೂಲವಾಗಿದೆ. ಕೃಷಿ ಇಲಾಖೆ ಈಗಾಗಲೇ ಬಿತ್ತನೆ ಬೀಜ ತೊಗರಿ, ಮೆಕ್ಕೆಜೋಳ, ರಸಗೊಬ್ಬರ ವಿತರಣೆ ಆರಂಭಿಸಿದೆ.ಕಳೆದ ವರ್ಷ ಇದೇ ಹೊತ್ತಿಗೆ ೩.೯೨ ರಷ್ಟು ಬಿತ್ತನೆ ಯಾಗಿತ್ತು,…

Read More

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿಯವರಿಗೆ ನೂತನ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಎಚ್.ಲೋಟಗೇರಿ ವಕೀಲರು ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಒತ್ತಾಯಿಸಿದರು.ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಗಜಿಣಗಿಯವರು ೨ ಬಾರಿ ಶಾಸಕರಾಗಿ ಹಾಗೂ ೭ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮತ್ತು ಹೈದರಾಬಾದ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಏಕೈಕ ದಲಿತ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಸರಳವಾಗಿ ಬೆರೆಯುವ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರಿಗೆ ಸಾಕಷ್ಟು ಅನುಭವವಿದೆ. ರಾಜಕೀಯ ರಂಗದಲ್ಲಿ ೧ ಕಪ್ಪು ಚುಕ್ಕೆ ಇಲ್ಲದ, ಅಜಾತ ಶತ್ರು ಎನ್ನಿಸಿಕೊಂಡ ಇವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಭಾಜಪಾ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೇಮರೆಡ್ಡಿ ಮೇಟಿ ಮಾತನಾಡಿ, ಜಿಗಜಿಣಗಿಯವರಿಗೆ ಸಚಿವ ಸ್ಥಾನ ನೀಡಿದಲ್ಲಿ ಅಖಂಡ ವಿಜಯಪುರ ಜಿಲ್ಲೆ ಆದ್ಯತೆ ಕೊಟ್ಟಂತಾಗುತ್ತದೆ. ಜಿಲ್ಲೆಗೆ ಸಾಕಷ್ಟು ಅನುದಾನ ತಂದ…

Read More