ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಲ ಹಾಗೂ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಪಿಎಂ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ೩ಲಕ್ಷ ರೂ.ದವರೆಗೆ ಆಧಾರರಹಿತ ಸಾಲ, ೧೫ ಸಾವಿರ ರೂ.ಗಳ ಟೂಲ್ ಕಿಟ್, ಕೌಶಲ್ಯಾಭಿವೃದ್ದಿ ತರಬೇತಿ ಮತ್ತು ದೈನಂದಿನ ೫೦೦ ರೂ. ಸಂಭಾವನೆ ಹಾಗೂ ಸಂಪೂರ್ಣ ತಯಾರಾದ ಕ್ವಾಲಿಟಿ ಸರ್ಟಿಫಿಕೇಶನ್, ಬ್ರಾಂಡಿಂಗ್, ಮತ್ತು ಜಾಹೀರಾತು ಮಾದರಿಯಲ್ಲಿ ಮಾರ್ಕೆಟಿಂಗ್ ನೆರವು ನೀಡಲಾಗುವುದು.
ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಸಾಂಪ್ರದಾಯಿಕ ಬಡಿಗತನ ವೃತ್ತ, ದೋಣಿ ತಯಾರಿಸುವುದು, ಶಸ್ತ್ರ ತಯಾರಕರು, ಕಮ್ಮಾರ ವೃತ್ತ, ಸುತ್ತಿಗೆ ಮತ್ತು ಉಪಕರಣ ತಯಾರಿಕೆ, ಬೀಗ ತಯಾರಕರು, ಪತ್ತಾರಿಕೆ ವೃತ್ತ, ಕುಂಬಾರ ವೃತ್ತ, ಮೂರ್ತಿ ಮತ್ತು ಕಲ್ಲಿನ ಕೆತ್ತನೆ, ಚಮ್ಮಾರ ವೃತ್ತಿ, ಕಲ್ಲು ಕುಟಿಕ, ಬುಟ್ಟಿ-ಚಾಪೆ-ಪೊರಕೆ ತಯಾರಕರು, ಗೊಂಬೆ ಮತ್ತು ಆಟಿಕೆ, ಕ್ಷೌರಿಕ ವೃತ್ತಿ, ಹೂ ಮಾಲೆ ತಯಾರಿಕೆ, ಅಗಸರು, ದೋಭಿ, ಶಿಂಪಿಗ, ಟೇಲರ್, ಮೀನು ಬಲೆ ತಯಾರಿಕೆಯಲ್ಲಿ ತೊಡಗಿಕೊಂಡಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ
Related Posts
Add A Comment
