ಉದಯರಶ್ಮಿ ದಿನಪತ್ರಿಕೆ
ಆಲಮೇಲ: ರೈತರ, ಜನಸಾಮಾನ್ಯರ ಸಮಸ್ಯೆ ಅರಿತು ಸಮಸ್ಯೆಗೆ ಪರಿಹಾರ ದೂರೆಯುವದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಗೊಲ್ಲಾಳಪ್ಪಗೌಡ ಪಾಟೀಲ ಹೇಳಿದರು.
ಅವರು ಆಲಮೇಲ ತಾಲೂಕ ಜೆಡಿಎಸ್ ಪಕ್ಷದ ಅಧ್ಯಕ್ಷರು ಮತ್ತು ನಗರ ಘಟಕ ಅಧ್ಯಕ್ಷರ ನೇಮಕಾತಿ ಮತ್ತು ವೀಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಕ್ಷ ಘಟನೆ ಕೆಲಸ ಮಾಡಿ ಮುಂದಿನ ಬಾರಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷರುಗಳಾದ ಪ್ರದೀಪ ನಯ್ಕೋಡಿ, ಹುಸೇನ ತಾಂಬೋಳಿ ಮಾತನಾಡಿ, ಜೆಡಿಎಸ್ ಪಕ್ಷದ ವರಿಷ್ಟರದ ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬರಲು ಪಕ್ಷ ನೀಡಿವ ಜವಾಬ್ದಾರಿ ಸಾರಿಯಾಗಿ ನಿರ್ವಹಿಸಿ ಪ್ರಾಮಾಣಿಕವಾಗಿ ಪಕ್ಷ ಸಂಘಟನಾ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮುಖಂಡರಾದ ಶೈಲಜಾ ಸ್ಥಾವರಮಠ, ಶ್ರೀಶೈಲಗೌಡ ಇಂಡಿ, ಎಂ. ಎನ್. ಪಾಟೀಲ, ಸಿಂದಗಿಯ ಪ್ರಕಾಶ ಹಿರೇಕುರುಬರ, ಮಹಮ್ಮದ ಉಸ್ತಾದ, ಪುಂಡಲಿಕ ಬಿರಾದಾರ, ಶಿವಕುಮಾರ ಗುಂಡುಗೌಡ ಬಳಗಾನೂರ ಮುಂತಾದವರು ಇದ್ದರು.
ನೂತನ ಆಲಮೇಲ ತಾಲ್ಲೂಕಾ ಅಧ್ಯಕ್ಷರಾಗಿ ಪ್ರದೀಪ ನಾಯ್ಕೋಡಿ ಮತ್ತು ಆಲಮೇಲ ನಗರ ಘಟಕ ಅಧ್ಯಕ್ಷರಾಗಿ ಹುಸೇನ ತಾಂಬೋಳಿ ಅವರನ್ನು ನೇಮಕ ಮಾಡಿದರು.
ಮುಖಂಡರು ಮತ್ತು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

