ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಎಲ್ಲೆಡೆ ವೈಭವದ ಗಣೇಶೋತ್ಸವ ನಡೆಯುತ್ತಿದೆ, ಗಣೇಶನ ಉತ್ಸವ ಮೂರ್ತಿಗಳ ಮಂಟಪಗಳಿಗೆ ವೈವಿಧ್ಯಮಯ ಸ್ಪರ್ಶ ನೀಡಲಾಗಿದೆ. ಅದೇ ತೆರನಾಗಿ ವಿಜಯಪುರ ನಗರದ ದರ್ಗಾ ವಿಠ್ಠಲ ಮಂದಿರ ಬಳಿ ಶ್ರೀ ವಿಠ್ಠಲ ಗಜಾನನ ತರುಣ ಮಂಡಳಿ ಅವರು ಗಣೇಶನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ್ದು, ಶ್ರೇಷ್ಠ ಧಾರ್ಮಿಕ ಹಾಗೂ ಶ್ರದ್ಧೆ ಕೇಂದ್ರವಾಗಿರುವ ಪುರಿ ಜಗನ್ನಾಥ ದೇವಾಲಯದ ಪ್ರತಿರೂಪವನ್ನು ಸಿದ್ಧಪಡಿಸಿದ್ದಾರೆ.
ಶಂಕರ ಪೂಜಾರಿ ಎಂಬ ಪ್ರತಿಭಾನ್ವಿತ ಕಲಾವಿದರು ಥರ್ಮಾಕೋಲ್ ಮೊದಲಾದ ಪರಿಕರ ರಚಿಸಿ ಈ ಪ್ರತಿಕೃತಿ ರಚಿಸಿದ್ದು, ೧೨ ಅಡಿ ಅಗಲ ಹಾಗೂ ೮ ಅಡಿ ಉದ್ದವಿದ್ದು ಗಮನ ಸೆಳೆಯುತ್ತಿದೆ.
ಥರ್ಮಾಕೋಲ್ ಮೊದಲಾದ ಪರಿಕರಗಳನ್ನು ಬಳಸಿ ಅನೇಕ ಪ್ರತಿರೂಪ ಸಿದ್ಧಪಡಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಶಂಕರ ಅವರು ಈ ಹಿಂದೆ ಅಯೋಧ್ಯೆಯ ರಾಮ ಮಂದಿರದ ಮಾದರಿಯನ್ನು ಥರ್ಮಾಕೋಲ್ ನಲ್ಲಿ ಸಿದ್ಧಪಡಿಸಿದ್ದರು. ಈ ಬಾರಿ ದರ್ಗಾ ಭಾಗದ ಭಕ್ತರ ಕೋರಿಕೆಯಂತೆ ಪುರಿ ಜಗನ್ನಾಥ್ ದೇವಾಲಯದ ಮಾದರಿ ರೂಪಿಸಿದ್ದಾರೆ.
ಆ ಮೂಲಕ ಮಂಟಪದಲ್ಲಿ

