ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಮೋಹರಂ ಹಬ್ಬದ ಶಾಂತಿ ಪಾಲನಾ ಸಭೆ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಪಟ್ಟಣದಲ್ಲಿಯ ಹಿಂದೂ-ಮುಸ್ಲಿಂ ಬಾಂದವರು ಮೊದಲಿನಿಂದಲೂ ಸಹೋದರತೆ ಭಾವನೆಯಿಂದ ಸಾಗಿಬಂದವರಾಗಿದ್ದೀರಿ ಮೋಹರಂ ಹಬ್ಬದ ದಪನ್ ಸಮಯದಲ್ಲಿ ಎಲ್ಲ ಬಾಂದವರು ಸಹೋದರತೆ ಬಾತೃತ್ವದೊಂದಿಗೆ ಹಬ್ಬಕ್ಕೆ ವಿಶೇಷ ಮೇರಗನ್ನು ತರುವಂತಹ ಕಾರ್ಯ ಮಾಡಿ ಭಾವೈಕ್ಯತೆಗೆ ಸಾಕ್ಷೀಯಾಗಲೆಂದು ಸಿಪಿಐ ಮಹ್ಮದಪಶುಉದ್ದೀನ ಅವರು ಹೇಳಿದರು.
ಸೋಮವಾರರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೋಹರಂ ಹಬ್ಬದ ನಿಮಿತ್ಯವಾಗಿ ಕರೆಯಲಾದ ಶಾಂತಿ ಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ತಾಳಿಕೋಟೆ ಪಟ್ಟಣವು ಶಾಂತಿಪ್ರೀಯತೆಗೆ ಸಾಕ್ಷೀಯಾದ ಪಟ್ಟಣವಾಗಿದೆ ಹಿಂದೂ-ಮುಸ್ಲಿಂ ಹಬ್ಬಗಳಲ್ಲಿ ಎಲ್ಲರೂ ಮೊದಲಿಂದಲೂ ಸಹೋದರತೆಯೊಂದಿಗೆ ಭಾಗವಹಿಸುತ್ತಾ ತಾಳಿಕೋಟೆ ನಗರಕ್ಕೆ ಒಳ್ಳೆಯ ಹೆಸರನ್ನು ತಂದಿದ್ದೀರಿ ಅದರಂತೆ ಮುಂದೆಯೂ ಇದೇ ರೀತಿ ಸಾಗಲಿ ಎಂದು ಆಶಿಸಿದ ಅವರು ಮೋಹರಂ ಹಬ್ಬದ ಆಚರಣೆ ಸಮಯದಲ್ಲಿ ಯಾರೋ ಕುಚೇಷ್ಠಿಗಳಿಂದ ಸಣ್ಣ ಪುಟ್ಟ ಗಲಾಟೆಗಳಾಗುತ್ತಿದ್ದರೂ ಕೂಡಲೇ ನಮ್ಮ ಪೊಲೀಸ್ ಇಲಾಖೆಗೆ ಮಾಹಿತಿ ಒದಗಿಸುವಂತಹ ಕೆಲಸ ಮಾಡಿ ಇದರಿಂದ ಸಮಾಜದಲ್ಲಿ ಸಾಮರಸ್ಯ ಕದುಡುವ ಕೆಲಸಕ್ಕೆ ತಡೆಯಲು ಸಾದ್ಯವಾಗಲಿ ಎಂದರು.
ಪಿಎಸ್ಐ ಶ್ರೀಮತಿ ಜ್ಯೋತಿ ಖೋತ್ ಅವರು ಮಾತನಾಡಿ ಮೋಹರಂ ಹಬ್ಬವೂ ಈಗಾಗಲೇ ಪ್ರಾರಂಭಗೊAಡಿದೆ ೫ ಬಡಾವಣೆಗಳಲ್ಲಿ ಪಂಚಸೈಯದ ದರ್ಗಾ, ಬಿಸ್ತಿ ಓಣಿ, ಮಹಲ್ ಗಲ್ಲಿ, ಬೇಪಾರಿ ಅವರ ಓಣಿ, ಮಕಾಂದಾರಿ ಓಣಿ, ದವಲ್ ಮಲ್ಲಿಕ ದರ್ಗಾ ಹತ್ತಿರದಲ್ಲಿ ದೇವರುಗಳನ್ನು ಕೂಡಿಸಲಾಗಿದೆ ಶುಕ್ರವಾರರಂದು ದೇವರುಗಳ ದಪನ್ ಕಾರ್ಯ ನಡೆಯಲಿದೆ ಅಂದೇ ರಾತ್ರಿ ೧೦ ಗಂಟೆಗೆ ಡೋಲಿ ಮೇರವಣಿಗೆ ನಡೆಯಲಿದೆ ಎಂಬ ಮಾಹಿತಿ ಲಬ್ಯವಾಗಿದೆ ಈಗಾಗಲೇ ಪೊಲೀಸ್ ಠಾಣೆಗೆ ಸಲ್ಲಿಸಿದ ಮಾಹಿತಿಯಂತೆ ಮತ್ತು ಆಯಾ ಬಡಾವಣೆಗಳ ದೇವರುಗಳ ದಪನ್ ಕಾರ್ಯವೂ ಸಮಯಕ್ಕನುಸಾರ ನಡೆದರೆ ಯಾವುದೇ ರೀತಿ ತೊಮದರೆಯಾಗುವದಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸಬೇಕೆಂದರು.
ಈ ಸಮಯದಲ್ಲಿ ಮುಖಂಡರುಗಳಾದ ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಪಾಟೀಲ ನಾವದಗಿ, ಅಣ್ಣಾಜಿ ಜಗತಾಪ, ಶಮಶುದ್ದೀನ ನಾಲಬಂದ, ಹುಸೇನ ಜಮಾದಾರ, ಜೈಭೀಮ ಮುತ್ತಗಿ, ಶರಣಗೌಡ ಪಾಟೀಲ, ನಿರಂಜಶಾ ಮಕಾಂದಾರ, ಡಿ.ವ್ಹಿ.ಪಾಟೀಲ, ಮಂಜೂರ ಬೇಪಾರಿ, ನಬಿರಸೂಲ, ಎಂ.ಜಿ.ಪಾಟೀಲ, ಶಪೀಕ್ ಇನಾಮದಾರ, ಅಬುಬಕರ ಲಾಹೋರಿ, ಎ.ಬಿ.ಪೊಲೀಸ್ಪಾಟೀಲ, ಆಸೀಪ ಕೇಂಭಾವಿ, ಅಬ್ದುಲರಜಾಕ ಮುಲ್ಲಾ, ಸಾಹೇಬಗೌಡ ಬಿರಾದಾರ, ಪಿ.ಎಸ್.ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.

