ವಿದ್ಯುತ್ ಖಾಸಗೀಕರಣ ವಿರೋಧಿಸಿ ಹಸಿರು ಸೇನೆ ಮನವಿ
ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ರಾಜ್ಯದ ಸಮಸ್ತ ರೈತರ ಪರವಾಗಿ, ಗ್ರಾಹಕರ ಪರವಾಗಿ, ನೌಕರರ ಹಿತದೃಷ್ಠಿ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಹೆಸ್ಕಾಂ ವಿದ್ಯುತ್ ಸಂಸ್ಥೆಯನ್ನು ಟಾಟಾ ಕಂಪನಿ ಲಿಮಿಟೆಡ್ಗೆ ಹಸ್ತಾಂತರ ಮಾಡುತ್ತಿರುವುದನ್ನು ಮತ್ತು ವಿದ್ಯುತ್ ವಿತರಣಾ ಪರವಾನಿಗೆಯನ್ನು ನೀಡುತ್ತಿರುವುದನ್ನು ಕೂಡಲೇ ಕೈಬಿಟ್ಟು ಸರಕಾರವೇ ನಡೆಸಿಕೊಂಡು ಹೋಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ವತಿಯಿಂದ ತಹಶಿಲ್ದಾರರು ಹಾಗೂ ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭೀಯಂತರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹ ಮಾಡಲಾಯಿತು.
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಹೆಸ್ಕಾಂ ಇಲಾಖೆಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್ ಸೇರಿದಂತೆ ಇತರೆ ಖಾಸಗಿ ಸಂಸ್ಥೆಗಳಿಗೆ ರಾಜ್ಯದ ೧೫ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆ ನೀಡಲು ನಿರ್ಧರಿಸಿರುವುದನ್ನು ಈ ಕೂಡಲೇ ಕೈಬಿಡಬೇಕು, ಈಗಾಗಲೇ ರಾಜ್ಯದ ೩೧ ಜಿಲ್ಲೆಗಳ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸಾವಿರಾರು ರೈತರು ವಿರೋಧವನ್ನು ವ್ಯಕ್ತಪಡಿಸಿ ಮನವಿ ಸಲ್ಲಿಸಲಾಗುತ್ತಿದೆ, ಒಂದು ವೇಳೆ ರಾಜ್ಯ ಸರ್ಕಾರ ಮೊಂಡು ತನ ತೋರಿಸಿ ವಿದ್ಯುತ್ ಇಲಾಖೆಯನ್ನು ಕಾಸಗೀಕರಣ ಮಾಡಿಯೇ ತೀರುತ್ತೇನೆ ಎಂದು ಹಟ ಹಿಡಿದರೆ , ರಾಜ್ಯದ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ತಡೆದು ಬೇರೆ ಬೇರೆ ರೀತಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಬಲೇಶ್ವರ ತಾಲೂಕಾ ಅಧ್ಯಕ್ಷರಾದ ಸುರೇಶ ಕಿರೆಸೂರ, ಹಿರಿಯ ರೈತ ಮುಖಂಡರಾದ ಸುರೇಶ ಶಿರಬೂರ ಹಾಗೂ ಬಸಂತ ಕಾಂಬಳೆ, ಪುಟ್ಟು ಗಡದನ್ನವರ, ರಾಜು ನದಾಫ, ಮಹಾದೇವ ಬನಸೋಡೆ, ರಾಮನಗೌಡ ಪಾಟೀಲ, ಸಂಗೀತಾ ರಾಟೋಡ, ಯುವ ರೈತ ಮುಖಂಡರಾದ ಸಿದ್ದರಾಯ ಚೌಧರಿ ಮಾತನಾಡಿ, ಈ ಪರವಾನಿಗೆ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು, ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯದ ೩೧ ಜಿಲ್ಲೆಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಿವೇಕ ದೇವರು, ಗುಣದಾಳ ಸಾನಿಧ್ಯವಹಿಸಿ ಆರ್ಶಿವಚನ ನೀಡಿದರು.
ಈ ವೇಳೆ ಸುರೇಶ ಕಿರಸೂರ, ಮುಕುಬುಲ್ ಕೀಜಿ, ಶ್ರೀಶೈಲ ಬೊಮ್ಮಾರ, ಪುಟ್ಟು ಗಡದನ್ನವರ, ಮಲ್ಲು ಬೂದಿಹಾಳ, ಸೂರ್ಯಕಾಂತ, ಸಂಗಮೆಶ, ಪರಮಾನಂದ, ವಿಠ್ಠಲ ಪೂಜಾರಿ, ಲೋಹಿತ ದಳವಾಯಿ, ಸಂಜು ಬಾಡಗಂಡಿ, ಬಸವರಾಜ ರೆಡ್ಡಿ, ಮಳೆಪ್ಪ, ಸಿಂಧೂರ, ಸೂರ್ಯಕಾಂತ, ಗಿರಿಯಪ್ಪ, ಕರೆಪ್ಪ, ಅಶೋಕ, ಗಂಗಯ್ಯ , ಲಕ್ಷಮೀ ಬಿರಾದಾರ ಸೇರಿದಂತೆ ಅನೇಕರು ಇದ್ದರು.

