ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆಗೆ ಸಂಪರ್ಕಿಸಿ | ಜಿಪಂ ಸಿಇಓ ರಿಷಿ ಆನಂದ ಪ್ರಕಟಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಪರಿಹರಿಸಲು ಜಿಲ್ಲಾ ಪಂಚಾಯತ ಕಚೇರಿ, ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿ ಮತ್ತು ಜಿಲ್ಲೆಯ ಎಲ್ಲಾ ತಾಲೂಕಾ ಪಂಚಾಯತಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ ಕಚೇರಿಯ ಸಹಾಯವಾಣಿ ಸಂಖ್ಯೆ ; ೦೮೩೫೨-೨೭೭೨೯೩, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿಯ ದೂ. ಸಂಖ್ಯೆ : ೦೮೩೫೨-೨೪೪೯೭೧, ಮದ್ದೇಬಿಹಾಳ ೦೮೩೫೬-೨೦೦೬೦೬, ತಾಳಿಕೋಟಿ ೦೮೩೫೬-೨೦೦೧೦೩, ಸಿಂದಗಿ ೦೮೪೮೮ ೨೨೧೭೭೨, ದೇವರ ಹಿಪ್ಪರಗಿ ೦೮೪೨೪-೨೦೦೧೧೪, ಆಲಮೇಲ ೦೮೪೮೮-೨೯೮೯೦೦, ವಿಜಯಪುರ ೦೮೩೫೨-೨೪೨೪೨೩, ಬಬಲೇಶ್ವರ ೦೮೩೫೫-೨೦೦೦೦೫, ತಿಕೋಟಾ ೦೮೩೫೨-೨೯೪೫೦೬. ಇಂಡಿ ೦೮೩೫೯-೨೦೦೦೨೬, ಚಡಚಣ ೯೪೮೦೮೩೧೭೧೮, ಬ.ಬಾಗೇವಾಡಿ ೦೮೩೫೮-೨೪೫೨೩೬, ನಿಡಗುಂದಿ ೦೮೪೨೬-೨೦೦೧೬೩, ಕೊಲ್ಹಾರ ೦೮೪೨೬-೨೦೦೧೦೩ ಈ ಸಹಾಯ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

