ಉದಯರಶ್ಮಿ ದಿನಪತ್ರಿಕೆ
ಇಂಡಿ: ಜನರ ಊರಿಗೆ ಉತ್ತಮ ಸಾರಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಇಂಡಿ ಬಸ್ ಘಟಕಕ್ಕೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ವೈ ಪಾಟೀಲ ಭೇಟಿ ನೀಡಿ ಸಾರಿಗೆ ಘಟಕದಲ್ಲಿಯ ಸೌಲಭ್ಯಗಳು ಹಾಗೂ ಕಾರ್ಯಾಚರಣೆ ಸ್ಥಿತಿಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿದರು.
ಈ ಭೇಟಿ ವೇಳೆ ಸಾರ್ವಜನಿಕ ಸೇವೆಗೆ ಸಂಬಂಧಿತ ಕೆಲವು ಗಂಭೀರ ಸಮಸ್ಯೆಗಳು ಬೆಳಕಿಗೆ ಬಂದಿದ್ದು ಜನರ ಅನುಕೂಲತೆ ಮತ್ತು ಪ್ರಯಾಣದ ಭದ್ರತೆಯನ್ನು ಮೊದಲ ಆಧ್ಯತೆಯಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಪಷ್ಟ ಮತ್ತು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದರು.
ಸಾರ್ವಜನಿಕರಿಗೆ ಗುಣಮಟ್ಟದ ವಿಶ್ವಾಸಾರ್ಹ ಹಾಗೂ ಸಮಯೋಚಿತ ಸಾರಿಗೆ ಸೇವೆ ಒದಗಿಸುವದು ನಮ್ಮ ಪ್ರಮುಖ ಬದ್ದತೆಯಾಗಿದೆ. ಸಮಸ್ಯೆ ತ್ವರಿತ ನಿವಾರಣೆ ಮಾಡಿ ಸೇವೆ ವೇಗಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸೇವಾ ಸುಧಾರಣೆಗೆ ಕೈ ಜೊಡಿಸುವ ಸಂಕಲ್ಪ ವ್ಯಕ್ತಪಡಿಸಿದರು..

