ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮನುಷ್ಯನ ಜೀವನದಲ್ಲಿ ಆರೋಗ್ಯ ಬಹಳಷ್ಟು ಪ್ರಮುಖವಾದದ್ದು ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕಾದರೆ ಜೀವನಶೈಲಿ, ಧನಾತ್ಮಕ ವಿಚಾರಿಸುವ ಶಕ್ತಿಯ ಬದಲಾವಣೆಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಲಾಗುವುದು. ನಮ್ಮ ದಿನನಿತ್ಯದ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ನಗರದ ಖ್ಯಾತ ವೈದ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಚ್ ಜಿ ದಡ್ಡಿ ಹೇಳಿದರು.
ಅವರು ಪ್ರತಿಷ್ಠಿತ ಬಿ ಎಲ್ ಡಿ ಇ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಜಮಖಂಡಿಯಲ್ಲಿ ಮಂಗಳವಾರ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ಸಹಪಾಧ್ಯಾಪಕರಾದ
ಪ್ರೊ.ಎಲ್.ಎಮ್ ಮಾರ್ಕಪನಳ್ಳಿ ಅಧ್ಯಕ್ಷೀಯ ಪರ ನುಡಿಗಳನ್ನು ಹೇಳಿದರು. ರೆಡ್ ಕ್ರಾಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಅಶ್ವಿನಿ ಅನಂತಪೂರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರೇಮಾನಂದ ಹಿರೇಮಠ ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಮೇಘಾ ಶಿರಗುಪ್ಪಿ, ನವೀನಕುಮಾರ ಬೆಳ್ಳುಬ್ಬಿ ಅನಿಸಿಕೆ ವ್ಯಕ್ತಪಡಿಸಿದರು. ಪ್ರಶಿಕ್ಷಣಾರ್ಥಿಗಳಾದ ಶ್ರುತಿ ಗುಡದಿ ಪ್ರಾರ್ಥನೆ, ಸಂಜನಾ ಬಾಡಗಿ ಸ್ವಾಗತ ಮತ್ತು ಪುಷ್ಪಾಪಣೆ, ವಿನಯ ಕಟ್ಟಿಮನಿ ಮುಖ್ಯ ಅತಿಥಿಗಳ ಪರಿಚಯ, ರಮೇಶ ಗೊಡಚಿ, ಸೃಷ್ಟಿ ಸಿಂಧೂರ ನಿರೂಪಣೆ, ಜಯಲಕ್ಷ್ಮಿ ಅಥಣಿ ವಂದನಾರ್ಪಣೆ ಮಾಡಿದರು.

